ಮಾತು ಕರಗಿ ಮೌನವೇರುವ ಕಾಲ
ದಿನ ಬೆಳಗಾದರೆ ಕಠೋರ ಕರ್ಕಶ
ಬೀಭತ್ಸ ಮರಣ ಮೃದಂಗಳ ಅಲೆ
ಬಂದು ಬೀಸಿದೆ ಕಾಣದ ಜೀವ ಜ್ವಾಲೆ//
ದಿನ ಬೆಳಗಾದರೆ ಕಠೋರ ಕರ್ಕಶ
ಬೀಭತ್ಸ ಮರಣ ಮೃದಂಗಳ ಅಲೆ
ಬಂದು ಬೀಸಿದೆ ಕಾಣದ ಜೀವ ಜ್ವಾಲೆ//
ಕಿವಿ ತಮಟೆ ಸೀಳುವ ಶುದ್ದಿಗಳು
ಒಗಟಾಗಿ ಕಾಡುವವು ಮನ ದಿನವೆಲ್ಲ
ಜಾಗಟಿ ಹೊಡೆದರು ಅದೆ ಮೊಂಡತನ
ಹೇಳಿದ್ದೆ ಹೇಳಿದ್ದು ಕೇಳಾಗಿದೆ ಸಿನಿಕತನ//
ಕಾಲನ ಕೈಗಳ ಬೇರುಗಳರಿಯದ ಜನ
ಕಾಣುವ ಸತ್ಯವ ಬೆನ್ನು ಹತ್ತವರು ದಿನ
ಕಾಣದ ಸತ್ಯ ವೂ ಉಂಟು,ಲೆಕ್ಕವಿದೆ
ಕರ್ತಾರನ ಸಂಬಳ ತಪ್ಪದೆ ಬರುವುದು//
ಹಗಲಿರಳು ಮನುಕುಲದ ವೇದನೆಗೆ
ಹೆಗಲು ಕೊಡುವ ಸಂವೇದನಾಶೀಲರ
ಹೃದಯಗಳಿಗೆ ಇಲ್ಲ ನಮ್ಮಲ್ಲಿ ಕೊರತೆ
ಹಣಕ್ಕೆ ಹೇಸಿಗೆ ತುಳಿದವರದೇಕೆ ಚಿಂತೆ//
ತಾಳಿದ ಬಾಳು ತೆವಳಿ ತಲುಪುವುದು
ತಡಮಾಡದೆ ಓಡಿ ತಲುಪುವದೆಲ್ಲೆಗೆ?
ಕಳೆದದ್ದು ಸಾಕು ದಿನನಿತ್ಯ ಧಾವಂತ
ಈಗಲಾದರೂ ಇರಲಿ ಮನ ಶಾಂತ//
ಬಸನಗೌಡ ಗೌಡರ
No comments:
Post a Comment