ಕನಸೊಂದು ಕಂಡೆ ಕನ್ನಡದ ಕಂದ
ಕವಿ ಶೈಲದ ಕುಸುಮ ನಾನಿಂದು
ಕಾವೇರಿಯಿಂದ ಗೋದಾವರಿವರೆಗೆ
ಶ್ರೀವಿಜಯನ ಮಾತು ಮೀರಿದೆ
ಹಾಯಾಗಿ //
ಕವಿ ಶೈಲದ ಕುಸುಮ ನಾನಿಂದು
ಕಾವೇರಿಯಿಂದ ಗೋದಾವರಿವರೆಗೆ
ಶ್ರೀವಿಜಯನ ಮಾತು ಮೀರಿದೆ
ಹಾಯಾಗಿ //
ವಿಂದ್ಯ ಸಾತ್ಪುಡಿ ಪರ್ವತವ ಏರಿ
ಬಯಲು ಬೆಳವಲ ನಾಗರಿಕತೆ ಹೀರಿ
ಮರಿದುಂಬಿಯಾಗಿ ಹಿಮಪುಷ್ಪವೇರಿ
ಮನದುಂಬಿ ಹಾಡಿದೆ ಕೊಗಿಲೆಯ
ಮರಿಯಾಗಿ//
ಸಹ್ಯಾದ್ರಿ ಮಲೆಗಳ ಚಂದನವನ
ವೈಚಾರಿಕ ಕವಿಗಳ ಕವನದ ಚರಣ
ಪಂಪ, ಪೂನ್ನ, ಕುವೆಂಪು ಪಾದದ
ಕಂಪು ಸೂಸುವ ಮೈಸೂರು
ಮಲ್ಲಿಗೆಯಾಗಿ//
ವಂಗನಾಡಿನ ಗಂಗೆಯ ತಟದ
ಸುಂದರಬನದ ಬಿಳಲುಗಳ ವನ
ಅಂದದ ಹುಲಿಗಳ ಘರ್ಜನೆ ಮನ
ವಂದೆ ಮಾತರಂ ಹಾಡುವೆ
ದ್ವನಿಯಾಗಿ //
ಪಡುವಣ ನಾಡಿನ ಕಾಡಿನ ಕೇಸರಿ
ಪವಡಿಸಿದ ಗಿರ್ ಗತ್ತಿನ ಘರ್ಜನೆ
ಸಬರಮತಿ ಸಂತನ ಶಾಂತಿ ಮಂತ್ರ
ಸತ್ಯ ಅಹಿಂಸೆ ಸನ್ಮಾರ್ಗ ಬೆಳೆಯ
ಫಲವಾಗಿ //
ಬಸನಗೌಡ ಗೌಡರ
No comments:
Post a Comment