"ನೀವು ಇದೀರಾ ದಂಡ ಪಿಂಡ 10 ವರ್ಷ ಆಯಿತು ಏನು ಗಳಿಸಿದ್ದೀರಿ ಹೇಳಿ? " ಆ ಪಕ್ಕದ ಮನೆ ಪಂಕಜ ನೋಡರಿ ಎಷ್ಟು ಜಬರದಸ್ತ ಅದಾರ.ಅವರ ಗಂಡ ಗುಮಾಸ್ತರು ಅದಾರ ಅಂತೀರಾ, ಮತ್ತ ಏನ ಗತ್ತ ದೌಲತ್, ನೀವು ಇದೀರಿ ಎರಡು, ಎರಡು ಡಿಗ್ರಿ ಪಡೆದೀನಿ ಅಂತೀರಿ, ಮೇಲೆ ದೊಡ್ಡ ಮಾಸ್ತರು ಆಗೀನಿ ಅಂತೀರಿ ಏನು ಮಾಡೋದು. ಅವಳು ಮತ್ತು ಅವಳ ಗಂಡ ರಾಜಾನಂಗ ಜೀವನಾ ಲೀಡ ಮಾಡತಾರ.... ಜೀವನ ಅಂದರ ಹಂಗ ಕಳೀಬೇಕು ರೀ. ಜೀವನ ಹೆಂಗ ಎಂಜಾಯ್ ಮಾಡಬೇಕೆನ್ನವುದನ್ನ ಅವರಿಂದ ನೋಡಿ ಕಲಿಬೇಕು ನೋಡರಿ , ಕೊಳ್ಳಾಗ ನಕ್ಲೆಸ್ ,ತಾಳಿ ಚೈನ , ಜುಮಕಿ ಒಂದಾ ಎರಡಾ, ಸೀರಿ ಒಂದು ದಿನಾ ಉಟ್ಟದ್ದು ಇನ್ನೊಂದು ದಿನ ಉಡಾಂಗಿಲ್ಲ..! ನಾನು ದಿವಸಾ ಈ ಪಂಕಜಾ ವಾಕಿಂಗ ಅಂತಾ ಹೋಗುದನ್ನ ನೋಡತಾ ಇರತೀನಿ ಇವತ್ತನ ಸೀರೆ ನಾಳೆ ಇರಂಗಿಲ್ಲ ಇವಳು ವಾಕಿಂಗ್ ಹೋಗತಾಳಾ ಇಲ್ಲ ನನ್ನ ಸೀರಿ ಇಷ್ಟ ಅದವಾ ಅಂತ ತೋರಸಾಕ ಹೋಗತಾಳ ನನಗಂತೂ ಗೊತ್ತ ಆಗತಾ ಇಲ್ಲ "....ಇವಳ ಭಾಷನ ಕೊರೋನಾ ಸೋಂಕಿತರ ಸಂಖ್ಯೆ ಏರಿದಂಗ ಏರಾಕ ಹತ್ತಿತು ! ಲೆ... ಲೇ.. ಶಾರದಾ ನಿಲ್ಲಸಪಾ ,ಹಾಂಗ ಗೋಲಗುಂಬಜ್ ಎಕ್ಸ್ ಪ್ರೆಸ್ ಟ್ರೈನ ಹೋದಂಗ ಹೊಂಟಿಯಲ್ಲ ಒಂದ ಸ್ವಲ್ಪ ಗಾಡಿ ನಿಲ್ಲಸಲ್ಲ, ಒಂದೆ ಸವನ ಓಡಕ ಹತ್ತಿಯಲ್ಲ ನಿನಗ ಏನು ಬೇಕು ನೇರವಾಗಿ ನನ್ನ ಕೇಳ ಎಲ್ಲದಕೂ ಸರಿಯಾಗಿ ಉತ್ತರ ನಾನು ಕೊಡತೇನು.ನಿನಗ ಏನಬೇಕು? ಎಂಜಾಯ್ ಮೆಂಟ ಬೇಕು ಅಷ್ಟೆ ತಾನೆ ? ನನಗ ಎಂಜಾಯ್ ಮೆಂಟ ಅಂದರೇನು ನನಗ ಉತ್ತರ ಕೂಡು .ಅದಕ್ಕೆ ಶಾರದಾ ತಕ್ಷಣವೇ ಹೇಳಿದಳು "ಯಾವಾಗಲೊ ಸಂತೋಷದಿಂದ ಇರುವುದು"ಅಷ್ಟು ತಿಳಿಯುದಿಲ್ಲೇನ್ರಿ.? ಸಂತೋಷದಿಂದ ಇರಾಕ ಬಂಗಾರನ ಇರಬೇಕು ಅಂತ ನೀನಗ ಯಾರ ಹೇಳಿದರು ? ಇನ್ಫೋಸಿಸ್ ಕಂಪನಿ ಒಡೆಯ ನಾರಾಯಣ ಮೂರ್ತಿ ಅದಾರ ಗೊತ್ತ ಅದಾ ಏನು, ಅವರ ಹೆಂಡತಿ ಸುಧಾ ಮೂರ್ತಿ ಅಂತ ಅದಾರ ಅವರನ್ನು ನೋಡಿಯೇನು ಅವರು ಮನಸ್ಸು ಮಾಡಿದರ ಕೆ ಜಿ ಗಂಟಲೆ ಬಂಗಾರ ಮೈಮೇಲ ಹಾಕೋಬಹುದು ಆದರ ಅವರು ಮೈಮೇಲೆ ಕರಿಮಣಿ ಸರ ಮಾತ್ರ ಇರುತ್ತೆ ಆದರೂ ಅವರು ಎಷ್ಟು ಸಂತೋಷದಿಂದ ಇರತಾರ ಗೊತ್ತ ಅದ ಏನು ? ಅದಕ ಶಾರದ ಹೇಳಿದಳು , ಹಾಂಗ ಅಲ್ಲರಿ ...ಅವರು ಬಹಳ ಶ್ರೀಮಂತರ ಅದರ ಹೀಗಾಗಿ ಅವರು ಸಂತೋಷದಿಂದ ಅದಾರ .ಆವಾಗ ಸೀನಪ್ಪ ತನ್ನ ಹೆಂಡತಿಗೆ ಹೇಳಿದ " ನಿನಗ ಹಿಂಗ ಹೇಳಿದರ ಅರ್ಥ ಆಗವಲ್ತು ನಾನು ನಿನಗ ಒಂದು ದೃಷಾಂತ ಹೇಳತೀನಿ ಕೇಳು. ನಾನು ಒಬ್ಬ ಅರ್ಥ ಶಾಸ್ತ್ರದ ಉಪನ್ಯಾಸಕ ಅದಿನಿ ಗೂತ್ತದ ಇಲ್ಲ ನಿನಗ ? "ನನಗ ಒಬ್ಬ ಸೆಂಗಾ ಮಾರುವ ಅಜ್ಜ ಒಂದು ಪಾಠ ಕಲಿಶ್ಯಾನು ಹೇಳತೇನು ಕೇಳು ಅಂತ ಸೀನಪ್ಪ ದೃಷಾಂತ ಪ್ರಾರಂಭಿಸಿಯೇ ಬಿಟ್ಟ. ಆಗ ಶಾರದಾ "ಹ್ಯಾಂಗೂ ಕರೋನಾ ಐತಿ ಹೂರಗ ಹೋಗುವ ಹಾಗಿಲ್ಲ. ಹೊರಗ ಹೋದರ ಪೋಲೀಸರು ದನಕ ಬಡದಂಗ ಬಡಿತಾರ, ಏನ ನಿಮ್ಮ ಪುರಾಣ ಹೇಳರಿ ಕೇಳತಿನಿ ಅಂದಳು.ನಾನು ದಿನಾಲು ಮಕ್ಕಳಿಗೆ ಅರ್ಥಶಾಸ್ತ್ರ ಪಾಠ ಮಾಡಿ ಬ್ಯಾಸರಾದಾಗ ಬಸಪ್ಪನ ಚಹಾದಂಗಡಿಗೆ ಹೋಗಿ ಚಹ ಕುಡಿಯುವದು ರೂಢಿ ಹೀಂಗ ದಿನಾಲೂ ಹೋಗುವಾಗ ಉಪಗಡಲಿ ಮಾರುವ ಬುಡ್ಡೆಸಾಬನನ್ನು ನೋಡತಾ ಇದ್ದೆ ಆತ ಸುಮಾರು ಹತ್ತು ವರ್ಷಗಳಿಂದ ಅದನ್ನೇ ಮಾಡುತ್ತಾ ಹೋಗುತ್ತಿದ್ದ ಮತ್ತು ಅದೆ ಸ್ಥಿತಿಯಲ್ಲೆ ಇದ್ದ. ಆವತ್ತು ಪಿರೇಡ ಲೀಸರ ಇದ್ದ ಕಾರಣಕ್ಕೆ ಒಂದೆರಡು ಮಾತಾಡಸಬೇಕು ಅಂತ ಅನಿಸಿತು ಹೋಗಿ " ಬುಡ್ಡೆಸಾಬ್ ಆರಮ ಇದಿಯಾ ಅಂತಾ ಕೇಳಿದೆ ,ಅದಕ ಆತ ಏನರಿ ಬುದ್ಧಿ ಸಕತಾಗೆ ಇದಿನಿ, ಅಂತ ಕಾಲಮ್ಯಾಗ ಕಾಲ ಹಾಕಿ ಸಿಗರೇಟ್ ದಮ್ ಎಳದ, " ದೇವರ ಕೊಟ್ಟ ಬೇವಿನ ಗಿಡದ ನೆರಳು ಅದರಿ ,ದಿನ ಎರಡು ನೂರ ಲಾಭ ಅದರಿ, ಅಲ್ಲಾ ..ನನಗೇನು ಕಡಮಿ ಮಾಡಿಲ್ಲಾ ಸರ್" .ಸಂತೋಷವಾಗಿ ಇದ್ದನಿ,ಅಂದ. ನಾನು ಕೇಳಿದೆ.ನೀನು ಯಾವಾಗ ಶ್ರೀಮಂತ ಆಗಾವಾ, ಅಲ್ಲಪಾ ದಿವಸಕ್ಕ ಎಷ್ಟು ಉಳಸತಿ ಹೇಳು. ಎಂದು ನಾನು ಆತನಿಗೆ ಒಂದು ಕ್ಲಾಸ್ ತೆಗೆದುಕೊಂಡು ಹೇಳಿದೆ. "ನೀನು ದುಡಿದದ್ದರಲ್ಲಿ ದಿನಾ ಐವತ್ತು ರೂಪಾಯಿ ಉಳಿಸು ಒಂದು ತಿಂಗಳಿಗೆ ಎಷ್ಷಾಯಿತು ಹದಿನೈದು ನೂರು ಆಯಿತು, ಒಂದು ವರ್ಷ ಕ್ಕೆ ಎಷ್ಟಾಯಿತು, 18250.00 ಆಯಿತು, ಅದನ್ನು ಒಂದು ಕಿರಾಣಿ ಅಂಗಡಿ ಹಾಕು ಒಂದು ದಿನಕ್ಕೆ, ಒಂದು ವರ್ಷ ಕ್ಕೆ ಲಾಭ ಎಷ್ಟು ಆಗುತ್ತೆ ಗೊತ್ತಾ? ಆಮೇಲೆ ಏನು ಮಾಡಬೇಕು ಸರ್? ಒಂದು ಪ್ಯಾಕ್ಟರಿ ಹಾಕಬೇಕು,ಅದಕ ಸಾಬಿ ಹೇಳಿದ ಆಮೇಲೇನು ಮಾಡಬೇಕು ಸರ್, " ಒಂದು ಕಾರು ತೋಗೊ,ಆಮೇಲೆ ಒಂದು ದೊಡ್ಡ ಬಂಗಲೆ ಹಾಕಿಸು ,"ಆಮೇಲೆ ಏನು ಮಾಡಬೇಕು ಸರ್",ಅದಕ್ಕೆ ನಾನು ಹೇಳಿದೆ ಅಷ್ಟು ತಿಳಿಯುವುದಿಲ್ಲ ವೇನು ? ಆ ಮನೆ ಮುಂದೆ ರಾಜನ ಹಾಗೆ ಕಾಲು ಮೇಲೆ ಕಾಲು ಹಾಕಿ ಕುಳಿತು ಕೊಳ್ಳಬೇಕು ಎಂದೆ .ಆಗ ಬಡ್ಡೆ ಸಾಬ್ ನಿಧಾನವಾಗಿ ಹೇಳಿದ .ಸರ್ ಈಗ ನಾನು ಮಾಡುತ್ತಿರುವದೇನು ಅದನ್ನೇ ಅಲ್ಲವೇ ಎಂದಾಗ, ನನ್ನ ಅರ್ಥ ಶಾಸ್ತ್ರದ ಪಾಠ ಆತನ ತಾತ್ವಿಕ ಪಾಠದಲ್ಲಿ ನೀರಿನಂತೆ ಕರಗಿ ಹೋಯಿತು." ಶಾರದಾ ಮನುಷ್ಯನಿಗೆ ಸಂತೋಷ ಎನ್ನುವುದು ಹೂರಗಿನಿಂದ ಅಥವಾ ಬಂಗಾರ ಶ್ರೀಮಂತಿಕೆಯಿಂದ ಬರುವುದಿಲ್ಲ ಬದಲಾಗಿ ಅದು ನಮ್ಮ ಅಂತರಾತ್ಮ ದಲ್ಲಿಯೆ ಇರುತ್ತದೆಂದಾಗ ಶಾರದಾ ಸಂಜೆಯ ಬಿಸಿಯೂಟ ತಯಾರಿಸಲು ಅಡುಗೆಯ ಮನೆ ದಾರಿ ಹಿಡಿದಳು.
ಬಸನಗೌಡ ಗೌಡರ
No comments:
Post a Comment