ಗೋಲಿ ಆಡುವ ಬಾಲನ ಬೆರಳಿಗೆ
ಚೀಲದ ಕಸಿಗಳೇರಿಸಿ ಕಳಿಸಿದೆ ಶಾಲೆಗೆ
ಆಟದ ಬಯಲುಗಳಾದವು ಬಿಕೋ..
ಕನಸೊಂದೆ ನೀ ವೈದ್ಯನಾಗು ಸಾಕೋ !//
ಚೀಲದ ಕಸಿಗಳೇರಿಸಿ ಕಳಿಸಿದೆ ಶಾಲೆಗೆ
ಆಟದ ಬಯಲುಗಳಾದವು ಬಿಕೋ..
ಕನಸೊಂದೆ ನೀ ವೈದ್ಯನಾಗು ಸಾಕೋ !//
ಸದೃಡ ಯವಕರು, ಸದೃಡ ಸಮಾಜ
ದೃತಿಗೆಡದೆ ಓಡಬೇಕು ಅಲ್ಲಿ ನಿರಂತರ
ಬೊಜ್ಜು ಬೆಳೆಸಿ ಹೆಜ್ಜೆ ಹಾಕಿದರೆ ಹೇಗೆ?
ಗುಜರಿಗೆ ಬೀಳುವದು ಒಂದೆ ಆಯ್ಕೆ//
ರಾಷ್ಟ್ರವೆಂದರೆ ಕಲ್ಲು ಗಾರೆ ಕಟ್ಟಡವಲ್ಲ
ಕಟ್ಟಬೇಕು ಜನರ ದೇಹ ಮನಸ್ಸಿನಲ್ಲಿ
ಗಟ್ಟಿಯಾಗಿ ನಿಲ್ಲುವ ದಿಟ್ಟ ಯುವಕರ
ಪಟ್ಟಿ ದೊಡ್ಡದಿದೆ ನೂರಲ್ಲ ಸಾವಿರ //
ಜವಾನನಿಂದ ದಿವಾನನವರೆಗೂ
ಸರ್ವರಿಗೂ ಬೇಕು ಅನ್ನ ಹಾಕಲು ರೈತ
ಎತ್ತಿ ಇಳಿಸಲು ಬೇಕೆ ಬೇಕು ಕಾರ್ಮಿಕ
ಎಲ್ಲರೂ ಕೇಳುವುದೊಂದೆ ಮಾಲಕ//
ಬಯಲುಗಳಿಲ್ಲದೆ ಬೆಳೆದವು ಶಾಲೆ
ಬಾಯಿಪಾಠ ಮಾಡುವದೊಂದೆ ಕಲೆ
ಬರುವದೊಂದೆ ಪುಸ್ತಕ ಮಸ್ತಕದ ನೆಲೆ
ಬಹುಮುಖ ಪ್ರತಿಭೆಗೆ ಯಾವಾಗ ಬೆಲೆ//
ರೋಗಗಳೆಂದರೆ ವೈರಿಗಳೇನೋ ಸರಿ
ಪರಿಹಾರಕ್ಕೆ ವೈದ್ಯರ ಕಾಣುವುದೆ ದಾರಿ
ಇದೊಂದೆ ಪರಿಹಾರವೆಂದರೆ ನೀ ವೈರಿ
ದೇಹ ಮನಸ್ಸು ಪಳಗಿಸು ಶಕ್ತಿ ಮೀರಿ//
ಬಸನಗೌಡ ಗೌಡರ
No comments:
Post a Comment