ಅಂದು ಬೇಗನೆ ಎದ್ದು ಸ್ನಾನ ಮಾಡಿದೆ ಅವತ್ತು ಹೇಳಬೇಕಾದ ಪಾಠವನ್ನು ಒಂದು ಸಾರೆ ಓದಿ ಅದರ ಬಗ್ಗೆ ನಾಲ್ಕು ಸಾಲು ಪಾಠದ ಟಪ್ಪಣೆ ಬರೆದು( ಉಪನ್ಯಾಸಕರು ಅಂದು ಪಾಠ ಮಾಡಬೇಕಾದ ಪರಕಲ್ಪನೆಯ ಬಗ್ಗೆ ನಾಲ್ಕು ಸಾಲು ಡೇಲಿ ಡೈರಿ ಬರೆಯಬೇಕು ) ಲಗು ಬಗಯಿಂದ ಟಿಫನ್ ಮಾಡಿದೆ .ಏಕೆಂದರೆ ನಾನು ಲೇಟಾಗಿ ಪಾಠಕ್ಕೆ ಹೋದರೆ ಅಪರಾಧಿ ಮನೋಭಾವ ಕಾಡಿದ ಹಾಗೆ ಆಗುವುದು ನನ್ನ ಸ್ವಭಾವ (ಸಾಮಾನ್ಯವಾಗಿ 10 ನಿಮಿಷ ಮೊದಲೆ ಹೋಗುವುದು ನನ್ನ ಅಭ್ಯಾಸ ) ದಾರಿಯುದ್ದಕ್ಕೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವರ್ಗಗಳಿಗೆ ವಿಷಯವನ್ನು ಹೇಗೆ ಹೇಳಬೇಕು ಮತ್ತು ಅದನ್ನು ಮನದಟ್ಟು ಮಾಡಿಕೊಡಬೇಕಾದರೆ ಯಾವ ಉದಾಹರಣೆ ನೀಡಿದರೆ ಸೂಕ್ತ ಎನ್ನುವ ವಿಚಾರ ಮಾಡತಾ ಹೋಗುತ್ತಿದ್ದೆ, ಇತಿಹಾಸ ವಿಷಯ ವಾಗಿರವದರಿಂದ ಪ್ರಸ್ತುತ ಸಂಗತಿಗಳಿಗೆ ಥಳಕು ಹಾಕುವುದು ಮತ್ತು ಹೋಲಿಕೆ ಮಾಡುತ್ತಾ ಕಲಿಸಬೇಕು, ಉದಾಹರಣೆ ಹೇಳಬೇಕೆಂದರೆ ಚಾಲುಕ್ಯರ ಪಾಠ ಮಾಡುವಾಗ ಗುಪ್ತ ರ ಇಲ್ಲವೆ ಹರ್ಷವರ್ಧನ ಬಗ್ಗೆಯೂ ಹೇಳಬೇಕಾಗುತ್ತದೆ,ವಿಜಯನಗರ ಸಾಮ್ರಾಜ್ಯದ ವಿವರಣೆ ನೀಡುವ ಸಂದರ್ಭದಲ್ಲಿ ಬಹಮನಿ ಸುಲ್ತಾನರ ಇಲ್ಲವೆ ಉತ್ತರದ ಮೊಗಲ್ ಸಾಮ್ರಾಜ್ಯದ ಬಗ್ಗೆ ಹಾಗು ಯೂರೋಪಿಯನ್ನರ ಆಗಮನದ ಬಗ್ಗೆ ತಿಳುವಳಿಕೆ ನೀಡಬೇಕಾಗುತ್ತದೆ ಇಲ್ಲದೆ ಹೋದರೆ ಇತಿಹಾಸ ವಿಷಯ ನೀರಸ ಪಾಠ ವಾಗುತ್ತದೆ.ಮಕ್ಕಳು ಪಾಠದ ಆಸಕ್ತಿ ಯನ್ನು ಕಳೆದುಕೊಂಡು ವರ್ಗ ಕೊನೆಯು ಮರುಭೂಮಿಯಂತಾಗುತ್ತದೆ.ಅದು ಜೀವಂತವಾಗಿರುವ ವರ್ಗ ಆಗ ಬೇಕೆಂದರೆ ಹೋಲಿಕೆಯಾತ್ಮಕವಾಗಿ ಚರ್ಚೆ ಮುಖಾಂತರ ಕಲಿಸಿಕೊಡಬೇಕು ಎನ್ನುವುದು ನನ್ನ ಭಾವನೆ. ಇರಲಿ ಅವತ್ತಿನ ಪಾಠ "ಮಾನವ ವಿಕಸನದ ಕಥೆ". ಮಾನವ ವಿಕಸನ ಕಲಿಸಿ ಕೊಡುವ ಮೊದಲು ನಾವು ಭೂಮಿಯ ಉಗಮ ಹಾಗೂ ವಿಕಾಸ ,ಜೀವಿಯ ಉಗಮ ವಿಕಸನ ಹೇಳಿಯಾಗಿತ್ತು. ಮುಂದಿನ ಹಂತವೆ ಮಾನವ ವಿಕಸನದ ಕತೆ.ಮಾನವ ವಿಕಸನವಾದ ಕತೆ ಒಂದು ರೋಚಕ ಕತೆ, ಈ ವಿಷಯ ಹೇಳವಾಗ ನಾವು ಚಾರ್ಲ್ಸ್ ರಾಬರ್ಟ್ ಡಾರ್ವಿನ ಬಗ್ಗೆ ನೆನಪಿಸಿ ಕೊಳ್ಳದೆ ಹೋದರೆ ಅಪಚಾರವಾದಂತೆ ಆಗುತ್ತೆ ಅನ್ನುವುದು ನನ್ನ ಭಾವನೆ ಈತ ಬ್ರಿಟಿಷ್ ನಿಸರ್ಗ ವಿಜ್ಞಾನಿ " ಭೂಮಿಯ ಮೇಲಿನ ಎಲ್ಲಾ ಪ್ರಭೇಧಗಳ ವಿಕಸನ ಒಂದೆ ಮೂಲದಿಂದ ವಂಶಾನುಗತವಾಗಿ ಮತ್ತು ಕಾಲಾನುಕ್ರಮವಾಗಿ ನಡೆದಿವೆ " ಎಂದು ಪ್ರತಿಪಾದಿಸಿದ ಈ ಸಿದ್ಧಾಂತದ ತಿರುಳು ವಿಕಸನದ ಪ್ರತಿಕ್ರಿಯೆಯಲ್ಲಿ ಜೀವ ಪ್ರಭೇಧಗಳ ವಿಭಜನೆಯು ನೈಸರ್ಗಿಕ ಆಯ್ಕೆಯ ಪರಿಣಾಮವಾಗಿದೆ ಮತ್ತು ಜೀವಿ ಬದುಕಿ ಉಳಿಯಲು ಸಂಘರ್ಷ ಮಾಡುತ್ತದೆ ಎಂದು ಪ್ರತಿಪಾದಿಸಿದ. ಹೀಗೆ ಡಾರ್ವಿನ ರಚಿಸಿದ "The Orgin of Species" ಎಂಬ ಕೃತಿಯಲ್ಲಿನ ನೈಸರ್ಗಿಕ ಆಯ್ಕೆಯ ಸಿದ್ದಾಂತವು ನಮಗೆ ಮಾನವನ ವಿಕಾಸದ ಕಥೆಯನ್ನು ಅರಿಯಲು ಸಹಕಾರಿಯಾಗಿದೆ. ಮಕ್ಕಳೆ "ಇಂದಿನ ಎಲ್ಲಾ ಮಾನವರು 36 ಮಿಲಿಯ ವರ್ಷ ಗಳ ಹಿಂದೆ ಚಿಂಪಾಂಜಿಗಳು, ಬೊನಬೊ,ಗೊರಿಲ್ಲಾ ಗಿಬ್ಬನ್ ಪೂರ್ವಜ ಪ್ರಭೇದಗಳು ಹೋಮಿನಾಯ್ಡೆ ಎಂಬ ಮೇಲು ಕುಟುಂಬಕ್ಕೆ ಸೇರಿದ್ದವು ಈ ಹೋಮಿನಾಯ್ಡೆ ಮೇಲು ಕುಟುಂಬ ದಿಂದ ಹೋಮೋ ಕುಲದವರೆಗಿನ ವಿಕಸನ ನಡೆಯಲು ಸುಮಾರು 30 ಮಿಲಿಯ ವರ್ಷಗಳು ಬೇಕಾದವು ಹೋಮೊ ಕುಲದ ಉದಯವು ಮಾನವರಂತ ಜೀವಿಗಳನ್ನು ಭೂಮಿಯ ಮೇಲೆ ಸುಮಾರು 5.6 ಮಿಲಿಯ ವರ್ಷಗಳ ಹಿಂದೆ ಸೃಷ್ಟಿಸಿತು ಎಂದು ವಿಜ್ಞಾನಿಗಳು ಹೇಳುತ್ತಾರೆ". ಎಂದು ನನ್ನ ಪಾಠ ವನ್ನು ವಿವರಿಸಿದೆ ಆವಾಗ ವರ್ಗ ಕೊನೆಯಲ್ಲಿ ಕುಳಿತ ಚಿಕಿತ್ಸಕ ಮನಸ್ಸಿನ ಹುಡುಗ ಒಂದು ಪ್ರಶ್ನೆ ಹೀಗೆ ಕೇಳಿದ ಸರ್ ನನ್ನ ದೊಂದು ಸಣ್ಣ ಡೌಟ ಏನೆಂದರೆ ಚಿಂಪಾಂಜಿಗಳು, ಬೊನಬೊ,ಗೊರಿಲ್ಲಾ ಗಿಬ್ಬನ್ ಪೂರ್ವಜ ಪ್ರಭೇದಗಳು ಮೂಲ ಒಂದೆ ಎನ್ನುವುದಾದರೆ (ಮಂಗನಿಂದ ಮಾನವ) ಆ ಎಲ್ಲಾ ಪ್ರಾಣಿಗಳು ಮಾನವರಾಗಲಿಲ್ಲ ಏಕೆ ? ಈ ಪ್ರಶ್ನೆಗೆ ಡಾರ್ವಿನ ಸಿದ್ದಾಂತದಲ್ಲಿ ಉತ್ತರ ಇದೆ, ಆದರೂ ಮಗುವಿನ ಪ್ರಶ್ನೆಗೆ ನನ್ನ ಉತ್ತರವೂ ಬೇಕಲ್ಲವೆ ? ಅದನ್ನೆ ನಾನು ಬೇರೆ ರೂಪದಲ್ಲಿ ಹೇಳಲು ಪ್ರಯತ್ನಿಸಿದೆ ಅದೇನಂದರೆ ಮಗು "ಸೀನಪ್ಪನಿಗೆ ನಾಲ್ಕು ಮಕ್ಕಳು ಇವೆ ಎಂದು ನಾವು ಭಾವಿಸೋಣ ಮೊದಲ ವ್ಯಕ್ತಿಗೆ ಏನನ್ನು ಕಲಿಸದೆ ದನ ಕುರಿ ಕಾಯಲು ಹಚ್ಚಿದ ಇನ್ನೊಬ್ಬನನ್ನು ಎಸ್ ಎಲ್ ಸಿ ವರೆಗೆ ಓದಿಸಿ ಒಕ್ಕಲುತನ ಮಾಡಲು ಹಚ್ಚಿದ ಅಂತ ಇಟ್ಟುಕೊಳ್ಳೋಣ. ಇನ್ನೊಬ್ಬನನ್ನು ಪಿ ಯು ಸಿ ವರೆಗೆ ಓದಿಸಿ ಸರಕಾರದಲ್ಲಿ ಒಂದು ನೌಕರಿ ಕೊಡಿಸಿದ ಎಂದು ಭಾವಿಸೋಣ ಕೊನೆಯವನನ್ನು ವಿಶ್ವವಿದ್ಯಾಲಯದವರೆಗೆ ಓದಿಸಿ ಪಿಎಚ್ ಡಿ ಪದವಿಯನ್ನು ಹೂಂದುವಂತೆ ಮಾಡಿ ಆತ ಪ್ರಾಧ್ಯಾಪಕ ನಂತರ ಉಪಕುಲಪತಿಯಾಗುವಂತೆ ಮಾಡಿದ ಎಂದು ಇಟ್ಟು ಕೊಳ್ಳುವ. ಈಗ ಹೇಳಿ ಈ ನಾಲ್ಕು ಜನರು ಒಂದೇ ತಂದೆಗೆ ಜನಿಸಿದ ಮಕ್ಕಳಾದರೂ ಈ ನಾಲ್ವರಲ್ಲಿ ವ್ಯತ್ಯಾಸ ಇರುತ್ತೊ ಇಲ್ಲವೂ ? ಈಗ ನಾನು ಹೇಳಿದ್ದು ಒಂದು ತಲೆ ಮಾರಿನ ಕತೆ, ಹೀಗೆ ಲಕ್ಷಾಂತರ ವರ್ಷಗಳಿಂದ ನೆಡೆದ ಬಂದ ವಿಕಸನದ ಫಲವಾಗಿ ನಾವು ಸೃಷ್ಟಿ ಯಾಗಿದ್ದೇವೆ ಎಂದಾಗ ತಕ್ಷಣವೇ ಆ ವಿದ್ಯಾರ್ಥಿ ಹೇಳಿದ " ಸರ್ ನಾವು ಉಪ ಕುಲಪತಿ ಯಾದವನ ವಂಶಸ್ಥರಲ್ಲವೆ " ಎಂದಾಗ ಹುಡುಗ ರೆಲ್ಲ ಗೂಳ್ಳ ಎಂದು ನಗಹತ್ತಿದರು, ನಾನು ಪರ್ವತವೇರಿದ ತೇನಸಿಂಗನ ಹಾಗೆ ನಗುತ್ತಾ ಹೊರಬಂದೆ.
Subscribe to:
Post Comments (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
No comments:
Post a Comment