ಧರಣಿಯ ಒಡೆಯ ಕರುಣೆ ತೋರು
ಶರಣು ದೇವರೆ ನಿನ್ನಯ ಚರಣಕೆ/
ಶರಣು ದೇವರೆ ನಿನ್ನಯ ಚರಣಕೆ/
ಕೊರೋನಾ ಎಂಬ ಕತ್ತಿಯ ಹಿಡಿದು
ಕೊಲ್ಲಬೇಡ ನಾವೆಲ್ಲಾ ಹರೋಹರ//
ಕೊಲ್ಲಬೇಡ ನಾವೆಲ್ಲಾ ಹರೋಹರ//
ಮನುಕುಲದ ಹಿತವ ಮೇಲೆ ಮಾಡಿ
ಜೀವಸಂಕುಲ ಮರೆತೆ ನಾವೆ ಕೋಡಿ/
ದಿನವು ನರಳುತಿರುವೆ ಪಾಪ ನೋಡಿ
ನಿಲ್ಲಿಸೆಮ್ಮ ದೀನ ಬದುಕು ಕಾಪಾಡಿ //
ಕಾಡು ಕಡಿದು ನಾಡು ಕಟ್ಟಿದ ನರರ
ನದಿ ನಿಲ್ಲಿಸಿ ಕೊಳೆ ಮಾಡಿದ ಕೂಳರ/
ಧರಣಿ ಒಡಲು ಬಕ್ಷಿಸಿದ ಬಕಾಸುರರ
ಮರೆತು ದಯತೋರು ಕರುಣಾಕರ //
ನೆಲಮುಗಿಲ ಜಯಸಿದೆನೆಂಬ ಮದವು
ನರನ ನೆತ್ತಿಗೇರಿದ ಸ್ವಾರ್ಥದ ಫಲವು/
ನಿನ್ನ ಮಕ್ಕಳೊಮ್ಮೆ ಬಿದ್ದು ಬೇಡುವೆವು
ನರಕದಿಂದೆಮ್ಮ ಸಂರಕ್ಷಿಸು ದೇವಾ//
ಧರ್ಮವೆಂದರೆ ಲಾಂಛನವೆಂದು
ದಿನವಿಡಿ ಹೊಡೆದಾಡಿದೆವು ನೊಂದು/
ದಯವೆ ಧರ್ಮ, ಅರಿವಾಯಿತಿಂದು
ದಾರಿ ಹಿಡಿಯಲು ಕ್ಷಮಿಸು ನೀ ತಂದೆ//
ಬಸನಗೌಡ ಗೌಡರ
No comments:
Post a Comment