ನಿಸರ್ಗ ಪ್ರೇಮಿಯ ಸ್ವಗತ:
ಇಂದು ಮಾನವನಿಗೆ ಸರ್ವ ರಂಗಗಳಲ್ಲಿ ಹಿನ್ನಡೆಯುಂಟು ಮಾಡುತ್ತಿರುವ ಒಂದು ಪ್ರಭಲ ಶಕ್ತಿ..! ಯಾವುದು ಅಂದರೆ ಅದುವೆ ನನ್ನ ನಿಸರ್ಗ .. ! ಮಾನವನ ಬದುಕಿನ ಬೇರು ಕೂಡಾ ಅಲ್ಲೆ ಇದೆ ಅದನ್ನು ಮರೆತರೆ ಸರಿಯಾದ ಹೊಡೆತ ಶತಸಿದ್ದ, ಇಂದು ನಾವು ಕಾಣುವ ಹಲವು ಅವಘಡಗಳಿಗೆ ಇದೆ ಕಾರಣ. ಅದು ಚಂಡಮಾರುತವಾಗಿರಬಹುದು, ಭೂಕಂಪವಾಗಿರಬಹುದು, ಭೂಮಿಯ ತಾಪಮಾನದ ಹೆಚ್ಛಳ,ಅಷ್ಟೆ ಏಕೆ ನಾವು ಅತಿ ಜರ್ಜರಿತವಾಗಿರುವ ಕೊರೋನಾವು ಕೂಡಾ ನನ್ನ ನಿಸರ್ಗಕ್ಕೆ ಮಾಡಿದ ಗೋರ ಅನ್ಯಾಯವಲ್ಲದೆ ಇನ್ನೇನು ಹೇಳಿ ? ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಜ್ಞಾನಿ, ವಿಜ್ಞಾನಿ,ತತ್ವಜ್ಞಾನಿ ತಂತ್ರಜ್ಞಾನಿ ಹತ್ತಿರ ಕೇಳಿ ನೋಡಿ ಪುಂಕಾನುಪುಂಕವಾಗಿ ಹರಿದು ಬರುವ ಒಂದೆ ಒಂದು ಮಾತು ಅದುವೆ ಧನಾತ್ಮಕ ಚಿಂತನೆ ಮಾಡಬೇಕು. ಒಪ್ಪಬೇಕಾದ ಮಾತೆ. ಇದರಲ್ಲಿ ಎರಡು ಮಾತಿಲ್ಲ ಆದರೆ ಈಗ ಅನುಭವಿಸುತ್ತಿರವ ಅಥವಾ ಪರದಾಡುತ್ತಿರುವ ದೇಶಗಳಾವವು ? ವ್ಯಕ್ತಿಗಳಾರು ? ಬಾದಿತರಾದವರು ಯಾರು ? ನಮಗೆ ನಾವು ಪ್ರಶ್ನೆ ಮಾಡಿಕೊಳ್ಳೋಣ. ಅವೆಲ್ಲ ಬಡ ಹಾಗೂ ಸಣ್ಣ ದೇಶಗಳ ಜನಸಾಮಾನ್ಯರು.ಅವರು ಮಾಡಿದ ತಪ್ಪಾದರು ಏನು ? ಅಂದರೆ ಅವರು ತಪ್ಪು ಮಾಡಿಲ್ಲ ಅಂತಾನು ನಾನು ಹೇಳೊದಿಲ್ಲ ಅವರೂ ತಪ್ಪು ಮಾಡಿದರು ಅಂದರೆ, ಅವರು ತಪ್ಪು ಮಾಡಲು ಅವಕಾಶ ನೀಡಿದವರು ಯಾರು ? ತಪ್ಪು ಮಾಡದಂತೆ ಶಿಕ್ಷಣ ನೀಡುವ ಮತ್ತು ಅದನ್ನು ತಡೆಯಲು ಇರುವ ಸೇವಾವಲಯದ ಒಂದು ವ್ಯವಸ್ಥೆ ಇದೆಯಲ್ಲವೆ ! ಅದು ಮಾಡಿದ ಕಾರ್ಯವಾದರು ಏನು ? ಇಡಿ ಉತ್ಪಾದನೆಯ ಶೇಕಡಾ 80 -/- ಭಾಗ ಹೋಗುವುದು ಇದೆ ವಿಭಾಗದ ಬದುಕಿಗಾಗಿ ಅಲ್ಲವೆ ? ಇಂದು ಅತಿ ಹೆಚ್ಚು ನಿಸರ್ಗದ ಮೇಲೆ ದಬ್ಬಾಳಿಕೆ ಮಾಡಿದ ದೇಶಗಳು ಎಂದರೆ ಅವೆ ಬೋಧನೆ ಮಾಡಿದ ದೇಶಗಳು ಎಂದರೆ ತಪ್ಪಾಗಲಾರದು .(ಕೆಲವನ್ನು ಬಿಟ್ಟು)ವಿಪರ್ಯಾಸವೆಂದರೆ ಉಪದೇಶ ಮಾಡಲು ಅವರಿಗಿಂತ ಚೆನ್ನಾಗಿ ಯಾರಿಗೆ ಬರುತ್ತೆ ಹೇಳಿ? ಆದರೆ ಅವರೆಲ್ಲ ಇರುವದು ಉಪದೇಶ ಮಾಡುವ ವಿಭಾಗದಲ್ಲಿ ."ಉಪದೇಶ ಮಾಡುವುದು ಕೈಲಾಗದವರು ಮಾಡುವ ಕೆಲಸ " ಅನ್ನುವುದನ್ನು ಎಲ್ಲೋ ಓದಿದ ನೆನಪು.ಇರಲಿ, ಒಂದು ಮುಖ್ಯವಾದ ವಿಚಾರಕ್ಕೆ ಬರತ್ತೇನೆ.ಈಗ್ಗೆ ಎರಡು ವರ್ಷಗಳ ಹಿಂದೆ ನಾನೂಂದು ಮದುವೆ ಸಮಾರಂಭಕ್ಕೆ ಹೋಗಿದ್ದೆ ಅದು ದೊಡ್ಡದಾದ ಸಿಟಿ.ಮದುವೆಯ ಶಾಸ್ತ್ರ ದಲ್ಲಿ ಭಾಗಹಿಸಿ ಗಡದ್ದಾಗಿ ತಿಂದು ನಾಲ್ಕಾರು ಜನ ಮಾತನಾಡುತ್ತಾ ಹೊರಟಿದ್ದೆವು ಅದೆ ಮಾರ್ಗದಲ್ಲಿ ಒಬ್ಬ ನಡು ಹಂಗಾಮಿನ ಮಹಿಳೆ ಪೋನ್ ನಲ್ಲಿ ಮಾತನಾಡುತ್ತ ಹೊರಟಿದ್ದಳು, ಅದು ವಿಶೇಷವಲ್ಲ...! ವಿಶೇಷ ವೆಂದರೆ ಆ ಮಹಿಳೆ ಮಾತ್ರ ಮುಸರಿ ತಿಕ್ಕುವ ವಳಾಗಿದ್ದಳು ಇದನ್ನು ಅನೇಕ ಜನರಿಗೆ ಜೀರ್ನಸಿಕೂಳ್ಳಲಾಗದೆ ಇಂತವರೂ ಪೋನ್... ಅಪಹಾಸ್ಯ ಮಾಡಿದಾಗ ನನಗೇಕೋ ಸಹ್ಯವಾಗಲಿಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಪುಣ್ಯಾತ್ಮರು "ಕುರಿ ಕಾಯುವವರ ಕೂಡಾ ದೊಡ್ಡ ದೊಡ್ಡ ಮೊಬೈಲ್ ಇಟ್ಟಿದ್ದಾರೆ ಸರ್" ? ಇದೆಂತಾ ಮಾತು ,ಅವರೂ ಮನುಷ್ಯರು ಅಲ್ಲವೆ, ದೇಶದ ಅಭಿವೃದ್ಧಿಯಲ್ಲಿ ಅವರ ಪಾಲಿಲ್ಲವೆ, ಅವರು ಸಾಕಿದ ಕುರಿ ಮೌಂಸ ಉಣ್ಣೆ ಬೇಕು ,ಅವರ ಕುರಿ ಹಾಕಿದ ಹಿಕ್ಕೆಯಿಂದ ಬೆಳೆದ ಗೋದಿ,ಜೋಳ,ಭತ್ತ ಬೇಕು,ಅವರು ವಿಜ್ಞಾನ ತಂತ್ರ ಜ್ಞಾನದಿಂದಾದ ನಾಗರಿಕತೆ ಬಳಸುವಾಗ ಇವರಿಗೆ ಅಸಡ್ಡೆ ಈ ಅಸಮಾನತೆಯ ಮಾತು ಕೇಳಿ ಮೌನವೆ ನನ್ನ ಉತ್ತರವಾಗಿತ್ತು. ಹಾಲಂಡ, ಡೆನ್ಮಾರ್ಕ ಆಸ್ಟ್ರೇಲಿಯಾ ದಂತಹ ದೇಶಗಳಲ್ಲಿ ಪಶುಪಾಲಕರು ನಾಗರಿಕತೆ ಕೂಸಾದ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಅದ್ಭುತವಾದ ಪ್ರಗತಿಯನ್ನು ಸಾಧಿಸಿದ್ದನ್ನು ನಾವು ಕಾಣುತ್ತವೆ, ದೇಶದ ಪ್ರಗತಿಯ ಪಾಲಿನಲ್ಲಿ ಇವರ ಕೊಡುಗೆ ಯತೇಚ್ಚವಾಗಿದೆ ಅದನ್ನು ನಮ್ಮ ಲ್ಲಿ ನಿರೀಕ್ಷೆ ಮಾಡಬಹುದೆ ? ಮತ್ತೆ ಧನಾತ್ಮಕ ಚಿಂತನೆ ಉಪದೇಶ ಮಾಡುವವರು ನಾವೆ ಅಲ್ಲವೆ. ನಿಸರ್ಗದ ಹೊಡೆತದ ಪೆಟ್ಟು ತಡೆಯಲು ನಾವು ಮಾಡಬೇಕಾಗಿರುವ ವಲಯದ ಕಡೆ ನಮ್ಮ ನಡೆಯೊ ಸ್ಪಷ್ಟವಾಗಿ ಇಟ್ಟುಕೊಳ್ಳೋಣ. ಈ ಸನ್ನಿವೇಶದಲ್ಲಿ ಜಪಾನಿಯರು ನಮಗೆ ಅನುಕರಣೀಯ ,ಇವರು ಭೂಕಂಪದ ಹೊಡೆತ ತಪ್ಪಿಸಲು ತೇಲುವ ಮನೆ ಕಟ್ಟಬಲ್ಲರು ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೇಳಬಲ್ಲರು, ಇವರಿಂದ ನಾವು ಕಲಿಯಬೇಕಾದದ್ದು ಬಹಳವಿದೆ,ಕನ್ನಡದ ಮೂಲಕ ವಿಜ್ಞಾನ ಕಲಿಸಲು ಸಾಧ್ಯವಿಲ್ಲ ಎಂದು ವಾದ ಮಾಡಿ ಕನ್ನಡದವರನ್ನು ( ಶಿಕ್ಷಕರನ್ನು ವಿದ್ಯಾರ್ಥಿಗಳನ್ನು) ಕುರಿಗಳಂತೆ ಕಂಡವರು ಉಂಟು.ಇಂಗ್ಲಿಷ್ ಇಲ್ಲದೆ ಬದುಕೆ ಇಲ್ಲವೆಂದು ವಿದ್ಯಾರ್ಥಿಗಳಲ್ಲಿ ಭ್ರಮೆ ಮೂಡಿಸಿದವರನ್ನು ನಾವು ಕಂಡಿದ್ದೇವೆ.(ಎಲ್ಲರೂ ಅಲ್ಲ) ತಾಯಿನುಡಿಗಳಿಗೆ ಗೌರವ ಕೊಡದೆ ,ತಾಯಿಬೇರು ಇರುವ ನಿಸರ್ಗ ಮರೆತು ಮುಗಿಲೆತ್ತರಕೇರವ ಕನಸು ಕಾಣುವವರು ನಾವು ಏರುವುದಾದರು ಎಲ್ಲಿಗೆ ?
ಬಸನಗೌಡ ಗೌಡರ
No comments:
Post a Comment