888 ನೇ ಬಸವ ಜಯಂತಿಯ ಶುಭಾಶಯಗಳು, ಕೊರೋನಾದ ಈ ಸಂಕಷ್ಟಗಳ ದಿನಮಾನದಲ್ಲಿ ಬಸವೇಶ್ವರರು ಕಂಡ ಸಮಸಮಾಜದ ಕಲ್ಯಾಣದ ಆದರ್ಶ ಚಿಂತನೆಗಳನ್ನು ಎನ್ನ ಮನದಲ್ಲಿ ಕಾಪಿಟ್ಟು, ನನ್ನ ಈ ಚಿಕ್ಕ ಕವನವನ್ನು ಬಸವೇಶ್ವರರ ಪಾದಕಮಲಗಳಗೆ ಸಮರ್ಪಿಸುತ್ತೇನೆ.ಶರಣು,ಶರಣು ಸಕಲಜೀವಾತ್ಮಗಳಿಗೆ.
* ವಚನ ಮಂತ್ರ ನೇಗಿಲು ತಂತ್ರ *
ಭಾವಗಳ ಬೆಸೆವ ಬಸವ
ಜಯಂತಿ, ಜಗವೆಲ್ಲ ಜರುಗಲಿ /
ಕಲ್ಲು ಮನಗಳನು ಕರಗಿಸಿ
ಸಮಾನತೆಯ ಜ್ಯೋತಿ ಬೆಳಗಲಿ//
ಜಯಂತಿ, ಜಗವೆಲ್ಲ ಜರುಗಲಿ /
ಕಲ್ಲು ಮನಗಳನು ಕರಗಿಸಿ
ಸಮಾನತೆಯ ಜ್ಯೋತಿ ಬೆಳಗಲಿ//
ಕೂಡಿ ಬಾಳಿ ಕರ್ಮ ಮಾಡುವ
ಬದುಕು, ಭಕ್ತಿ ಭಂಡಾರವಾಗಲಿ/
ಕಂಡರಾಗದ ಜನರ ಮೂಢತನ
ತುಂಡು ತುಂಡಾಗಿ ತೊಲಗಲಿ//
ಅಂತಸ್ತಿನ ಹಂತ ಅರಿಯುವ
ಯೋಗ್ಯತೆ ,ಅಳತೆ ಮಾನವಾಗಲಿ/
ಜಾತಿ ಎಂಬ ಸೂತಕ ಹರಿಯಲು
ಅಂತ್ಯಜನೂ ಧನಿಕನಾಗಲಿ //
ಲಿಂಗ,ಜಾತಿ ಭೇಧ ಅಳಿಯುವ
ಶರಣರ, ಸಂತತಿ ಸತತ ಏರಲಿ/
ಸಂಸ್ಕಾರದ ಸತಿ ಸುತರಿರುವ
ಸಂಸಾರದಲ್ಲಿಯೆ ಸದ್ಗತಿ ಸಿಗಲಿ //
ದಾನದಿಂದ ಧರ್ಮ ಮೆರೆಯುವ
ವಿಚಾರ ,ಸಂಕೀರ್ಣ ಮೊಳಗಲಿ/
ವಚನ ಮಂತ್ರ ನೇಗಿಲು ತಂತ್ರ
ಸರ್ವಸ್ವತಂತ್ರ ಗಣತಂತ್ರ ಏರಲಿ//
ಬಸನಗೌಡ ಗೌಡರ
No comments:
Post a Comment