Friday, May 14, 2021

 888 ನೇ ಬಸವ ಜಯಂತಿಯ ಶುಭಾಶಯಗಳು, ಕೊರೋನಾದ ಈ ಸಂಕಷ್ಟಗಳ ದಿನಮಾನದಲ್ಲಿ ಬಸವೇಶ್ವರರು ಕಂಡ ಸಮಸಮಾಜದ  ಕಲ್ಯಾಣದ ಆದರ್ಶ ಚಿಂತನೆಗಳನ್ನು ಎನ್ನ ಮನದಲ್ಲಿ ಕಾಪಿಟ್ಟು, ನನ್ನ ಈ ಚಿಕ್ಕ ಕವನವನ್ನು ಬಸವೇಶ್ವರರ ಪಾದಕಮಲಗಳಗೆ  ಸಮರ್ಪಿಸುತ್ತೇನೆ.ಶರಣು,ಶರಣು ಸಕಲಜೀವಾತ್ಮಗಳಿಗೆ.


* ವಚನ ಮಂತ್ರ ನೇಗಿಲು ತಂತ್ರ *

ಭಾವಗಳ ಬೆಸೆವ ಬಸವ
ಜಯಂತಿ, ಜಗವೆಲ್ಲ ಜರುಗಲಿ /
ಕಲ್ಲು ಮನಗಳನು ಕರಗಿಸಿ
ಸಮಾನತೆಯ ಜ್ಯೋತಿ ಬೆಳಗಲಿ//

ಕೂಡಿ ಬಾಳಿ ಕರ್ಮ ಮಾಡುವ 
ಬದುಕು, ಭಕ್ತಿ ಭಂಡಾರವಾಗಲಿ/
ಕಂಡರಾಗದ ಜನರ ಮೂಢತನ 
ತುಂಡು ತುಂಡಾಗಿ ತೊಲಗಲಿ// 

ಅಂತಸ್ತಿನ ಹಂತ ಅರಿಯುವ 
ಯೋಗ್ಯತೆ ,ಅಳತೆ ಮಾನವಾಗಲಿ/
ಜಾತಿ ಎಂಬ ಸೂತಕ ಹರಿಯಲು
ಅಂತ್ಯಜನೂ  ಧನಿಕನಾಗಲಿ // 

ಲಿಂಗ,ಜಾತಿ ಭೇಧ ಅಳಿಯುವ
ಶರಣರ, ಸಂತತಿ ಸತತ ಏರಲಿ/
ಸಂಸ್ಕಾರದ ಸತಿ ಸುತರಿರುವ
ಸಂಸಾರದಲ್ಲಿಯೆ ಸದ್ಗತಿ ಸಿಗಲಿ //

ದಾನದಿಂದ ಧರ್ಮ ಮೆರೆಯುವ
ವಿಚಾರ ,ಸಂಕೀರ್ಣ ಮೊಳಗಲಿ/
ವಚನ ಮಂತ್ರ ನೇಗಿಲು ತಂತ್ರ 
ಸರ್ವಸ್ವತಂತ್ರ ಗಣತಂತ್ರ ಏರಲಿ//


          ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...