ಕೆಸರಿನಲ್ಲಿ ಅರಳಿ ಹೆಸರು
ಅಜರಾಮರಗೊಳಸಿ, ಹೆಸರಿನಲ್ಲೆ
ಲಿಂಗ ಧರಿಸಿದ ಸಿದ್ದಿ ಪುರಷ,
ಸಾಹಿತಿ ಪುರುಷ ಸಿದ್ಧಲಿಂಗ ಅಯ್ಯ !
ಅಜರಾಮರಗೊಳಸಿ, ಹೆಸರಿನಲ್ಲೆ
ಲಿಂಗ ಧರಿಸಿದ ಸಿದ್ದಿ ಪುರಷ,
ಸಾಹಿತಿ ಪುರುಷ ಸಿದ್ಧಲಿಂಗ ಅಯ್ಯ !
ಕನ್ನಡ ಸಾಹಿತ್ಯ ಲೋಕಕ್ಕೆ
ಹೊಸ ಭಾಷ್ಯ ಬರೆದು
ಬಡತನದಲ್ಲಿ ಬೆಂದು ಅರಳಿ
ಬಾರದ ಲೋಕಕ್ಕೆ ತೆರಳಿದೆ ಅಯ್ಯ!
ಹೃದಯ ಸಿರಿತನದ ಕವಿಯಾಗಿ
ಮಾನವೀಯತೆಗೆ ಮಿಡಿದ
ಮಾನವತಾವಾದದ ಕುಡಿಗೆ
ಮನಮುಟ್ಟಿ ನಮಿಸುವೆವು ಅಯ್ಯ!
ದ್ವನಿ ಇಲ್ಲದವರ ದ್ವನಿಯಾಗಿ
ಧನಿಗಳ ಮನ ಕರಗುವಂತೆ ಬರೆದು
ಗುಣವರಿತ ಬಲಿತರ ನಡುವೆ ಕಲಿತು
ದಮನಿತರ ಗಮನ ಸೆಳೆದೆ ಅಯ್ಯ!
ಕೇರಿಯನರಿತು ಊರಿಗೆ ಅರುಹಿ
ದಾರಿಯಲ್ಲಿ ನಡೆಸಿದ ಹಿರಿಯ
ದೂರದ ಸೌಧದ ದಾರಿ ತುಳಿದ
ಹಿರಿಯರ ಸೌಧದ ಗೌರವವೇರಿಸಿದೆ ಅಯ್ಯ!
No comments:
Post a Comment