Friday, June 11, 2021

* ಕನಸಿನ ಕಿವಿಮಾತು *

 ದತ್ತ ಪದ : ಕನವರಿಕೆ

  * ಕನಸಿನ ಕಿವಿಮಾತು * 

ಎದೆಯ ಭಾರ ಹದವಾಗಿ ಕಲೆತು
ಹೃದಯ ಗಾನ ಪಲ್ಲವಿ ಮೊಳೆತು/
ಪದಗಳ ನಾದ  ಸ್ವರಗಳಲಿ ತೇಲಿತು
ಇದು ಯಾವ ಕನಸಿನ ಕಿವಿ ಮಾತು//

ಬಣ್ಣದ ಭಾವತರಂಗ ಬಾಗಿ ಬೆಸೆದು 
ಬಣ್ಣಿಸಲು ಹಣ್ಣಾದೆ ನಾ ಬಸವಳಿದು/
ಕಣ್ಣಿಗೇರಿದ ಕಾಡಿಗೆ ಕಾರ್ಮೋಡ ಸೀಳಿ
ಮಣ್ಣಿಗೆ ಜಾರಿತು ಮುಂಗಾರು ಮಳೆ//

ಹರಿವ ನದಿಯ ನೊರೆ ಹೊರೆಯಾಗಿ 
ಹರಿದು ಬಯಲೆಲ್ಲಾ ಪ್ರವಾಹವಾಗಿ/
ಹೃದಯನಾಳ ತುಂಬೆಲ್ಲಾ ಕೊಳೆಯಾಗಿ
ಹರಿದಿದೆ ಹೊಳೆ, ಇಳೆ ಪ್ರಳಯವಾಗಿ//

ಕನಸು ಕಾಣುವೆ ಕನವರಿಕೆಯಲ್ಲ
ಸನಿಹ ಬಂದು ಸವಿ ನೀಡುವೆಯಲ್ಲ/
ಮನಸ್ಸು ಕದಿಯುವ ನಿನ್ನ ಜಾಲ 
ಮುನಿಸು ಬಂದು ಜಾರುವೆಯಲ್ಲ//

ಮುಂಗಾರು ಮಳೆ ಮುತ್ತಿಕ್ಕಿ ಮೂಗಿಗೆ
ಮುಂಗುರುಳು ಸೋತು ಹೆರಳಾಗಿ/
ತಂಗಾಳಿಯ ಶಕ್ತಿಗೆ ಸಪ್ತಸ್ವರವಾಗಿ 
ಸಂಗಾತಿ ಎನ್ನ ಸೇರು ಮೃದುವಾಗಿ//

           ಬಸನಗೌಡ ಗೌಡರ 
                      ಉಪನ್ಯಾಸಕರು

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...