Tuesday, June 8, 2021

* ಸೃಜನಶೀಲ ಸೃಷ್ಟಿಕಾರ *

 ದತ್ತ ಪದ : " ಪರಿಸರ "

* ಸೃಜನಶೀಲ ಸೃಷ್ಟಿಕಾರ *


ಬರಿ ಬದಲಿಸಿ ಬೆಳಸಿದೆನೆಂದರು
ಬರುವುದೆ ?. ಸೃಷ್ಟಿಸೊಂದು ಸಾಗರ,
ಬರದು. ತಿಳಿದರೂ ಬಡಿದಾಡುವರು.
ಬಡಿವಾರ ಬಿಡಲಾರದವರಿವರೆಲ್ಲಾ // 

ಹಕ್ಕಿಗಳಿಂಚರ ಹೂವಿನ ಗೊಂಚಲ
ಚದುರಿದ ಮೋಡದಿ ಅಡಗಿದ ಮಿಂಚು
ಸಂಜೆಯ ಹೊಂಬೆಳಕಿನ ಚಿತ್ರಕಾರ
ಚಂದಿರನ ಅಂದಕೆ ಸಮನಾರಿಲ್ಲ//

ಹಸಿರು ಗಿಡಮರ ಕೆಸರು ಗದ್ದೆ ಮೀರಿ
ಕೊಸರಿ ಹೋಗುವುದು ಎಲ್ಲಿಗೆ ?
ಹೊಸ ಆವಿಷ್ಕಾರ ಖರೀದಿಸಬಹುದು
ಕಾಸು ಕೊಟ್ಟು, ಪರಿಸರವನ್ನಲ್ಲ //

ಉಸಿರಿರುವರೆಗೆ ಹಸಿರು ಮಾಡು
ಹೆಸರಿಗಾಗಿ ಅಲ್ಲ, ಹಳೆಯ ಹೆಸರೆ
ಬೆಸೆದುಕೊಂಡಿವೆ, ಹೆಸರು ನಿಲ್ಲಲು 
ಹೊಸ ಸಾಲುಗಳಿಗೆ ಜಾಗವೆ ಇಲ್ಲಾ//

ಕಲ್ಲು ಮಣ್ಣಿನ ಗಿರಿ ಕಂದರ
ಎಲ್ಲಾ ಕಟ್ಟಿದ ಕನಸುಗಾರ 
ಎಲ್ಲಿಯೂ ಹೇಳಲಿಲ್ಲ ನಾ ಕೃತಿಕಾರ
ಇಲ್ಲಿ ನೆಡೆದಿದೆ ಹೆಸರಿನ ಸಮರವೆಲ್ಲಾ//

           ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...