Friday, June 25, 2021

* ಅಡತಡೆಗಳು *

         ಅಂದು ಶ್ರೀನಿವಾಸ ಬೇಗನೆ ಎದ್ದು ಕರ್ಮಾದಿಗಳನ್ನು ಮುಗಿಸಿ ಸೇವ್ ಮಾಡಿಕೊಂಡು ಸ್ನಾನ ಮಾಡಿದಾಗ ಗಂಟೆ 6.00 ತೋರಿಸುತ್ತಿತ್ತು ತನ್ನ ಆಫೀಸಿಗೆ ತಲುಪಬೇಕಾದರೆ 2.00 ಗಂಟೆ ಪ್ರಯಾಣದ ಅವಧಿ ಬೇಕು, ಅರ್ಧ ಗಂಟೆಯಲ್ಲಿ ರಡಿಯಾಗಬೇಕು ಅಂದರೆ 6.30 ಕ್ಕೆ ಮನೆಯಿಂದ ಹೊರಗೆ ಬರಬೇಕು ಅಂದರೆ 7.00 ಕ್ಕೆ ಬಸ್  ನಿಲ್ದಾಣದಿಂದ ನಿರ್ಗಮಿಸು

ತಿತ್ತು ...ಬಸ್ ಚಾಲಕ ಮತ್ತು ನಿರ್ವಾಹಕರು ಎಂದೂ ಲೇಟ ಮಾಡಿದವರೆ ಅಲ್ಲ 5 ನಿಮಷ ತಡವಾದರೆ ಬಸ್ ನಿಲ್ದಾಣದಿಂದ ಹೊರಗೆ ಹೋಗಿರುತ್ತಿತ್ತು ಆ ಕಾರಣಕ್ಕೆ ಮನೆಯಿಂದ ಬಸ್ ನಿಲ್ದಾಣಕ್ಕೆ ಬರಬೇಕಂದರೆ ಇಪ್ಪತ್ತೈದು ನಿಮಿಷ ಇನ್ನೂ ಐದು ನಿಮಿಷ ಮೊದಲೆ ಬಸ್ ನಿಲ್ದಾಣ ಸೇರುತ್ತದ್ದ ಶ್ರೀನಿವಾಸ.ವೇಳೆಯನ್ನು ನಾವು ಹಿಂಬಾಲಿಸಿ ಹೋಗಬೇಕು ಅದು ನಮ್ಮನ್ನು  ಹಿಂಬಾಲಿಸದು ಹಾಗಾಗಿ ಈತ ಅದಕ್ಕೆ ಹೊಂದಿಕೊಂಡದ್ದಿ, ವ್ಯವಸ್ಥೆ ಎಂದರೆ ಹೀಗಿರಬೇಕು ಇಲ್ಲ ದಿದ್ದರೆ ವೇಳೆಗೆ ಎಂದೂ ಮಹತ್ವ ಬಾರದು.ಅದಕ್ಕೆ ಹೊಂದಿಕೊಳ್ಳಬೇಕಾಗಿತ್ತು ಶ್ರೀನಿವಾಸ.  ಅಂದು ಸೋಮವಾರ ಅತ್ಯಂತ ಚುರುಕಿನಿಂದ  ಎಲ್ಲಾ ಹೊಂದಿಸಿಕೊಂಡ ಏಕೆಂದರೆ  ವಾರಕ್ಕೊಮ್ಮೆ ಮನೆಗೆ ಬಂದು ಸೋಮವಾರ ತನ್ನ ಕರ್ತವ್ಯಕ್ಕೆ ತೆರಳುತ್ತಿದ್ದ. ಅದಕ್ಕೆ ಹೇಳಿದ್ದು 2.00 ಗಂಟೆ ಪ್ರಯಾಣವೆಂದದ್ದು. ಬಸ್ ಏರಿ ಕುಳಿತು ಕೊಳ್ಳುವುದು ಮಾತ್ರ ಚಾಲಕನ ಸಮೀಪ .ಮುಂದಿನ ಸೀಟ್ ಗೆ  ಕುಳಿತು ಕೊಳ್ಳುವ ಕಾರಣ ಎರಡು ಲಾಭ ಒಂದು ನಿಸರ್ಗ ಆಸ್ವಾದಿಸುವ ಅವಕಾಶ ಇನ್ನೊಂದು ಪ್ರಯಾಣಿಕರು ಹತ್ತುವ ಇಳಿಯುವಾಗ ಸಂಭವಿಸಬಹುದಾದ ಕಿರಿಕಿರಿ ಯಿಂದ ಪಾರಾಗಲು .ಅದೆ ತಾನೆ ಡೀಫೊಕ್ಕೆ ಹೊಸದಾಗಿ ಬಂದ ಬಸ್ಸು ಬಹಳ ಸುಂದರವಾಗಿತ್ತು ಚಾಲಕ ತನ್ನ ಪ್ರೀತಿಗಾಗಿ ಅಲಂಕರಿಸಿ ತನ್ನ ವಾಹನದ ಪ್ರಯಣಿಕರಿಗೆ ಸಂಗೀತ ಕೇಳುವ ಭಾಗ್ಯ ಕರುಣಿಸಿದ್ದ ಅದೂ ಡಾ ರಾಜಕುಮಾರ್, ಎಸ್ ಪಿ ಬಾಲಸುಬ್ರಹ್ಮಣ್ಯರ ಹಾಡುಗಳೆಂದರೆ ಕೇಳಬೇಕೆ ? ಟಾಕೀಜನಲ್ಲಿ ಕುಳಿತ ಅನುಭವವಾಗುತ್ತಿತ್ತು.ಚಾಲಕ ಹನಮಂತ ಬಹು ಶಿಸ್ತಿನ ಮನುಷ್ಯ ಹೀಗಾಗಿ ಇಂಜಿನ್ ಮೇಲೆ ಯಾರನ್ನು  ಕಾಲು ಮೇಲಿಟ್ಟು ಕುಳಿತು ಕೊಳ್ಳದಂತೆ ನೋಡಿಕೊಳ್ಳುತ್ತದ್ದ. ಆ ಬಸ್ ಇಂಜಿನ್ ಮೇಲೆ ಈ ರೀತಿಯಾಗಿ ಬರೆಯಿಸಲಾಗಿತ್ತು " ಇಂಜಿನ್ ಮೇಲೆ ಯಾರೂ ಕಾಲ ಇಡಬಾರದು" ಈ ಬರಹ ಶ್ರೀನಿವಾಸನ ಕಣ್ಣುಗಳನ್ನು ರಾಚುತ್ತಿತ್ತು ಆದರೆ ಯಾರೊಬ್ಬರು ಆ ಕಡೆ ಗಮನ ಹರಿಸಿದಂತೆ ಕಾಣಲಿಲ್ಲ ಬಹುಶ: ಅದು ಸರಿ ಎಂದು ಭಾವಸಿದ್ದರೊ ಅಥವಾ ಕೆಲಸದ ಒತ್ತಡದಲ್ಲಿ ಯಾರೂ ಗಮನಿಸಿರಲಿಲ್ಲವೊ ಗೊತ್ತಿಲ್ಲ. ಅವನು ಮಾತ್ರ ಯಾರಾದರು ಅದರ ಬಗ್ಗೆ ಮಾತಾಡಿದಾಗ ಮಾತಾಡಿದರಾಯಿತು ಎಂದು ಸುಮ್ಮನಿದ್ದ ಅದು ಕೂಡಿಯೂ  ಬರಲಿಲ್ಲ. ಆ ಮಾತು ಬೇರೆ ಬಸ್ಸು ವೇಗವಾಗಿ ಹೋಗುತ್ತಿತ್ತು ಆತನ ವಿಚಾರ ಲಹರಿಯೊ ಅಷ್ಟೇ ವಿಮಾನದ  ವೇಗವನ್ನು ಮೀರಿ ಹೋಗುತಿತ್ತು ಬಸ್ ನಲ್ಲಿ ದಡ್ ಎಂಬ ಶಬ್ದ !. ಏನಾಯಿತು ಎಂದು ನೋಡುವದರಲ್ಲಿಯೆ ಎರಡು ಹುಡುಗರು ಒಂದೆ ಸಮನೆ ಓಡುತ್ತಿರುವದು ಕಂಡಿತು. ಬಸ್ ನಿಲ್ಲಿಸಿ ವಾಹನ ತಪಾಸನೆ ಮಾಡಿದ, ಕಿಡಿಕಿಯ ಗಾಜು ಪುಡಿ ಪುಡಿಯಾಗಿ ಬಸ್ ಒಳಗಡೆ ಚೂರು ಪಾರಾಗಿ ಬಿದ್ದದ್ದು ಕಂಡಿತು. ಡ್ರೈವರ ಸೀದಾ ಕಿಡಿಕಿಯ ಬದಿಗೆ ಬಂದು ಮಮ್ಮಲು ಮರುಗಿದ ಅತ್ಯಂತ ಕುಕ್ಕುಲುತನದಿಂದ ಪ್ರೀತಿಸುತ್ತಿದ್ದ ಚಾಲಕನಿಗೆ ತನ್ನ ದೇಹಕ್ಕೆ ಗಾಯವಾದವನಂತೆ ವರ್ತಸಿದ ಏನು ಮಾಡುವುದು ನಡೆದು ಹೋಗಿದೆ .ಸುಮ್ಮನೆ ಬಿಡುವ ಹಾಗಿಲ್ಲ ಆ ಹುಡುಗರನ್ನ ಪತ್ತೆ ಹಚ್ಚಿ ತನ್ನ ಬಸ್ಸಿಗಾದ ಹಾನಿ ವಸೂಲು ಮಾಡಲು ತಯಾರಿಯಾದ.ವೇಳೆಯಾದ ಕಾರಣ ಪ್ರಯಾಣಿಕರು ಬೇಗ ತಾವು ಹೋಗಬೇಕಾದ ಸ್ಥಳ ತಲುಪಲು ತವಕಿಸುತ್ತಿದ್ದರೆ ಹನಮಂತ ಮಾತ್ರ ಹುಡುಗರನ್ನು ಪತ್ತೆ ಹಚ್ಚಿ ತನ್ನ ಬಸ್ಸಿಗಾದ ನಷ್ಟ ಬರಿಸಲು ತವಕಿಸುತ್ತಿದ್ದ ಅದೇನೊ ಅಂತಾರಲ್ಲ ಅಜ್ಜಿಗೆ ಅರಳಿ ಚಿಂತೆಯಾದರೆ ಮೊಮ್ಮಗಳಿಗೆ .... ಇರಲಿ ಬಸ್ ಗೆ ಕಲ್ಲು ಹೊಡೆದ ಹುಡುಗರ ಊರು ದೂರವೇನು ಇರಲಿಲ್ಲ ಬಸ್ ಹೋಗುವ ಮುಖ್ಯ ರಸ್ತೆಯಿಂದ ಒಂದು  ಕಿಲೋ ಮೀಟರ್ ದೂರದಲ್ಲಿ ಮಾತ್ರ ಸೀದಾ ಊರು ಮುಂದಿನ ಅಗಸಿ ಬಾಗಲಿಗೆ ತಂದು ನಿಲ್ಲಿಸಿದ. ಊರಿನ ಹುಡುಗರೆಲ್ಲಾ  ಓ...ಎಂದು ಚೀರುತ್ತಾ  ಬಸ್ ಊರಲ್ಲಿ ಬಂದಿದೆ ಎಂದು ಸಿಳ್ಳೆ ಕೆಕೆ ಹಾಕಿ ಕುಣಿದಾಡಿದರು. ಹನುಮಂತ ತಮ್ಮೂರಿನ ಹುಡುಗರು ಬಸ್ ಗೆ ಕಲ್ಲು ಹೊಡೆದ ಬಗ್ಗೆ  ಹೇಳಿದ ಸುದ್ದಿಯು ಬಾಯಿಯಿಂದ ಬಾಯಿಗೆ ಹರಡಿ ಕಲ್ಲು ಹೊಡೆದ ಹುಡುಗರನ್ನು ಪತ್ತೆ. ಹಚ್ಚುವದು ಕಷ್ಟವಾಗಲಿಲ್ಲ ಆದರೆ ಹುಡುಗರು ನಾಪತ್ತೆಯಾಗಿದ್ದರು ಹುಡುಗರ ಪೊಷಕರನ್ನು ಕರೆಸಲು ಅಗಸಿಯಲ್ಲಿದ್ದ ಪ್ರಮುಖರು ಮುಂದಾದರು. ಬಸ್ಸಿಗೆ ಕಲ್ಲು ಹೊಡೆದ ಕಲ್ಯಾನ ಅಜ್ಜಿಯನ್ನು ಕರೆಯಿಸಲಾಯಿತು ಬಡಗಿ ಊರುತ್ತ ಬಂದ ಅಜ್ಜಿ  ಸರ್ ಅವ ನಮಗ ಮಿಕ್ಯಾನ ಏನು ಮಾಡುದರಿ ಈಗ್ಗೆ ಎರಡು ವರ್ಷಗಳ ಹಿಂದ ಅವರಪ್ಪ ತೀರಿಕೊಂಡ ಅವರವ್ವ ನಿಮ್ಮ ಊರಾಗ ಇರಲಿ ಅಂತ ಬಿಟ್ಟು ಹೋಗ್ಯಾಳು ಹೇಳುವವರು ಕೇಳುವರು ಯಾರು ಇಲ್ದಂಗ ಆಗ್ಯಾದ, ನಾನರ ಏನು ಮಾಡಲಿ ? ಎರಡು ಒದ್ದು ಹಿಡಕೊಂಡು ಹೋಗರಿ, ಬುದ್ದಿ ಕಲಸರಿ.ಅಂದಳು.ಬಸ್ಸಿಗೆ ಆದ ಹಾನಿಗೆ ಬಂದರೆ ಬುದ್ಧಿ ಕಲಿಸುವ ಉಸಾಬರಿ ಬ್ಯಾರೆ ಮೈಮೇಲೆ ಬಿದ್ದಂಗಾಯಿತು ಹನಮಂತನ ಸ್ಥಿತಿ, ಗುಡ್ಡ ಅಗಿದು ಇಲಿ ಹಿಡಂದಂಗ ಅನ್ನುವ ಪರಿಸ್ಥಿತಿಗೆ ಬಂದು ನಿಂತಿತು.ಇನ್ನೊಬ್ಬ ಹುಡುಗನನ್ನು ಪತ್ತೆ ಹೆಚ್ಚಿದರೆ ಅದು ಇನ್ನೊಂದು ಕರುಣಾಜನಕ ಕಥೆ, ತಾಯಿಯನ್ನು ಕಳೆದುಕೊಂಡ ಕುಡುಕ ತಂದೆಯ ಮಗ. ಸಂಶೋಧನೆ ಮಾಡಿ ಹನುಮಂತನ ಪರಿಹಾರ ಕೊಡಿಸುವ ವೇಳೆಗೆ ಅಸಾಯಕ ಪ್ರಯಾಣಿಕರ ಮಾನಸಿಕ ವೇದನೆಗೆ ಪರಿಹಾರ ಕೊಡುವವರು ಯಾರು ? ನಿಧಾನವಾಗಿ ಎದ್ದು ನಿಂತ ಪ್ರಯಾಣಿಕ  "ಬಸ್ ಬಿಡಿ ಅದರ  ನಷ್ಟ ನಾನೆ ಬರಿಸುತ್ತೇನೆ" ! ಎಂದಾಗ ಪ್ರಯಾಣಿಕರ ಕ್ಷಣ ಸ್ತಂಬಿಭೂತರಾದರು ಅವರಾರು ಬೇರೆ ಅಲ್ಲ, ಅದೆ ಬಸ್ ನಲ್ಲಿ ಚನ್ನಾಗಿ ಡ್ರೆಸ್ ಮಾಡಿ, ಸೂಕ್ಷ್ಮವಾಗಿ ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದ ಪ್ರಯಾಣಿಕ ಒಬ್ಬ ನಿವೃತ್ತ ಶಿಕ್ಷಕ . ತನ್ನ ಸೇವಾವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳ ಹಣೆಬರಹ ಬರೆದ ಮತ್ತು ಇಂತಹ ನೂರಾರು ಕರುಣಾಜನಕ ಸಂಗತಿಗಳನ್ನು ಕಂಡ ಪುಣ್ಯಾತ್ಮ! ಬಸ್ ತನ್ನ ಗುರಿ ತಲುಪಲು ಮತ್ತೆ ದಾವಂತದಿಂದ ಓಡಲು ಪ್ರಾರಂಭಿಸಿತು.ಶ್ರೀನಿವಾಸನ ಮನದಲ್ಲಿ ಹಳ್ಳಿಯ ಬದುಕಿನಲ್ಲಿ ನಡೆಯುವ ಅದೆಷ್ಟು ಇಂತಹ ಮಕ್ಕಳ ಜೀವನದ ಚಿತ್ರಣಗಳು ಬಯಲಿಗೆ ಬರದೆ ಮುರುಟಿ ಹೋಗತ್ತಿರಬಹುದು ಎಂದು ಲೆಕ್ಕ ಹಾಕುತ್ತಿರುವಾಗಲೆ ಕಂಡಕ್ಟರ್ ಸೀಟಿ ವಾಸ್ತವಕ್ಕೆ ಕರೆದು ತಂದಿತ್ತು ಶ್ರೀನಿವಾಸ ಬಾಸ್ ನ ಕಾಕದೃಷ್ಟಿಯನ್ನು ನೆನೆಯುತ್ತ ಆಫೀಸ್ ದಾರಿ ಹಿಡಿದ. 


                  ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...