Wednesday, June 23, 2021

* ಕಳೆ ಕೀಳುವವ ಕೀಳಲ್ಲ *

ಕೆಲಸ ಮಾಡಿಸುವವರು ಶ್ರೇಷ್ಠರೆಂದು 
ಕಳಸದಂತೆ ತುಂಬಿರುವರು ಜಗತುಂಬ
ವಲಸೆ ತರಬೇಕು ಕೆಲಸಗಾರನ್ನೆಲ್ಲಿಂದ! 

ಕಾಯಕವೆ ಕೈಲಾಸವೆಂದ ಬಸವಣ್ಣ
ಕಾರ್ಯ ಮಾಡಿಸಿದವನೆಂದಿಲ್ಲ ಅಣ್ಣ
ಕರ್ಮದ ತಾರತಮ್ಯ ಬಂತು ಎಲ್ಲಿಂದ!

ಕಳೆ ಕೀಳುವವನು ಕುಲ ಕೀಳಾದರೆ
ಜೋಳ ಬೆಳೆಯುವುದೆ ಹೊಲತುಂಬಾ
ಗಾಳ ಹಾಕಲು ಬಂದವ ಜಾಣನಿಂದು!

ಹಾಲು ನೀಡುವ ಹಸವಿನೊಲವಿಲ್ಲ
ಗೆಲುವು ತರುವದೆ ಆರೋಗ್ಯ ಬಲವು
ಹಾಲಾಗಿದೆ ಹಾಲಹಲ ಪಾಕೀಟಿನಿಂದ!

ರಾಸುಗಳಿರದ ಬೇಸಾಯ ಬಯಸಿ 
ಕಸಕೀಳದೆ ಭೂಮಿ ಹಸನುಗೊಳಿಸಿ
ಹೊಸ ಹೊಲಸಿರದ ಬಾಳು ಬೇಕಿಂದು!

ಕೆಸರಾದ ಕೈ ಮೊಸರಾಗಬೇಕು ಇಂದು
ಮೊಸಗಾರನ ಕೈ ಮೊದಲೆಂದರೆ ಸರಿಸಿ
ಹೊಸ ಮನ್ವಂತರ ಬೆಳಗಲಿ ಮುಂದೆ !

           ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...