Tuesday, July 13, 2021

* ಜೀವ ಮಣ್ಣು - ಹೊಣ್ಣು*

ಸುಗ್ಗಿ ಕಾಲ ಇದ್ದಲ್ಲಿ  ಸುಳಿಯದು ಅಣ್ಣ 
ಹಿಗ್ಗಿ ಉಣಲು ಬಗ್ಗಿ ದುಡಿಯಬೇಕಣ್ಣ/
ಬೆವರು ಹನಿ ಬೇರಿಗಿಳಸಲು ಹಸಿರಣ್ಣ 
ಹವನವಲ್ಲ ಬಸವ ಗಂಟೆ ಕೇಳಿಸಲಣ್ಣ//

ಬೋಧಿಸದರೆ ಬರುವುದೇನು ಮೌಲ್ಯ   
ಅದನ್ನು ನಾವು ನಡದೆ ಕಲಿಸಬೇಕಣ್ಣ/ 
ಹೃದಯದಿಂದ ಪ್ರೀತಿ ಬಿತ್ತಬೇಕು ಅಣ್ಣ 
ಮೆದುಳಿನಿಂದ ಅಳತೆ ಮಾಡಬೇಕಣ್ಣ//

ಹದವಾದ ಮಣ್ಣಿನ ಶ್ರೀಗಂಧ ಪರಿಮಳ
ಬೀದಿಯಲ್ಲಿ ಸಿಗುವುದೇನು ಭರಮಣ್ಣ/
ಗದ್ದೆಯಲ್ಲೆ ಮಳೆ ಬಿದ್ದರೆ ಅದೆ ಹೊಣ್ಣು
ಪೆದ್ದ ನೀನು ತಯಾರಿಸು ಜೀವ ಮಣ್ಣು//

ಕೈಲಾಸವೆಂದು ಕರೆಯದು ಹೂ ತಂದು 
ಕೆಲಸದಿಂದ ಇಳಿಯಿವುದು ಇಳೆಗಿಂದು/
ಸಾಲಾಗಿ ನಡೆ ಇರಿವೆಯಂತೆ ಮುಂದೆ 
ಸಲಾಮು ಸಿಗುವುದು ಶ್ರಮದ ಹಿಂದೆ//

                   ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...