ಸುಗ್ಗಿ ಕಾಲ ಇದ್ದಲ್ಲಿ ಸುಳಿಯದು ಅಣ್ಣ
ಹಿಗ್ಗಿ ಉಣಲು ಬಗ್ಗಿ ದುಡಿಯಬೇಕಣ್ಣ/
ಬೆವರು ಹನಿ ಬೇರಿಗಿಳಸಲು ಹಸಿರಣ್ಣ
ಹವನವಲ್ಲ ಬಸವ ಗಂಟೆ ಕೇಳಿಸಲಣ್ಣ//
ಹಿಗ್ಗಿ ಉಣಲು ಬಗ್ಗಿ ದುಡಿಯಬೇಕಣ್ಣ/
ಬೆವರು ಹನಿ ಬೇರಿಗಿಳಸಲು ಹಸಿರಣ್ಣ
ಹವನವಲ್ಲ ಬಸವ ಗಂಟೆ ಕೇಳಿಸಲಣ್ಣ//
ಬೋಧಿಸದರೆ ಬರುವುದೇನು ಮೌಲ್ಯ
ಅದನ್ನು ನಾವು ನಡದೆ ಕಲಿಸಬೇಕಣ್ಣ/
ಹೃದಯದಿಂದ ಪ್ರೀತಿ ಬಿತ್ತಬೇಕು ಅಣ್ಣ
ಮೆದುಳಿನಿಂದ ಅಳತೆ ಮಾಡಬೇಕಣ್ಣ//
ಹದವಾದ ಮಣ್ಣಿನ ಶ್ರೀಗಂಧ ಪರಿಮಳ
ಬೀದಿಯಲ್ಲಿ ಸಿಗುವುದೇನು ಭರಮಣ್ಣ/
ಗದ್ದೆಯಲ್ಲೆ ಮಳೆ ಬಿದ್ದರೆ ಅದೆ ಹೊಣ್ಣು
ಪೆದ್ದ ನೀನು ತಯಾರಿಸು ಜೀವ ಮಣ್ಣು//
ಕೈಲಾಸವೆಂದು ಕರೆಯದು ಹೂ ತಂದು
ಕೆಲಸದಿಂದ ಇಳಿಯಿವುದು ಇಳೆಗಿಂದು/
ಸಾಲಾಗಿ ನಡೆ ಇರಿವೆಯಂತೆ ಮುಂದೆ
ಸಲಾಮು ಸಿಗುವುದು ಶ್ರಮದ ಹಿಂದೆ//
ಬಸನಗೌಡ ಗೌಡರ
No comments:
Post a Comment