ಅಕ್ಷರಅಕ್ಷರ ದೀಪ ಸಾಹಿತ್ಯ, ಸಾಂಸ್ಕೃತಿಕ ಮತ್ತು ಕಲಾ ವೇದಿಕೆಯ ಚಿತ್ರ ಕವನ ಸ್ಪರ್ಧೆ ಗಾಗಿ
* ತನ್ಮಯತೆ *
ಕರಳು ಬಳ್ಳಿಯ ಹಣೆ ಬರಹಕೆಂದು
ಬೆರಣಿ ಇಲ್ಲದ ಬಿದಿರು ಬೊಂಬೆ ಬರಹ
ಬೆರಳಿನಿಂದರಳಿಸಿದೆ ಚಂದದ ಚಿತ್ರಗಳ
ಸರಳತೆ ಮೆರೆದೆ ನಿನ್ನೊಡಲ ಮಗವಿಗಾಗಿ//
ಬೆರಣಿ ಇಲ್ಲದ ಬಿದಿರು ಬೊಂಬೆ ಬರಹ
ಬೆರಳಿನಿಂದರಳಿಸಿದೆ ಚಂದದ ಚಿತ್ರಗಳ
ಸರಳತೆ ಮೆರೆದೆ ನಿನ್ನೊಡಲ ಮಗವಿಗಾಗಿ//
ನೂರು ಕಷ್ಟದ ಬೇರುಗಳನು ಮೀರಿ
ಸೂರು ಬಯಸದೆ ಶಿರವ ಬಾಗಿಸಿ
ಯಾರ ಗೊಡವೆ ಇಲ್ಲ, ಎಲ್ಲ ಕಲೆಗಾಗಿ
ಕರ ತಾಳಹಾಕುತಿವೆ ನಿತ್ಯ ಕರ್ಮಕ್ಕಾಗಿ//
ತನ್ಮಯತೆಯು ತವರಿನ ಸಿರಿಯಂತೆ
ಜಾಣ್ಮೆಯೊಂದೆ ಸಂತಸದ ಕಣಜವಲ್ಲ
ಏನಿಲ್ಲದೆ ಎಲ್ಲವೊ ಪಡೆದು ಬಲ್ಲವಳು
ತಲ್ಲೀನಳಾಗಿ ಜಗ ಕೈಲಾಸ ಮಾಡಿದವಳು//
ಭಾವನೆ ಬಿತ್ತಿ ವೊರೆ ಕೊರೆ ಕೆತ್ತಿದವಳು
ಭುವನದ ಮಾದರಿ ಮಾನವನಿಗಿತ್ತಳು
ಜೀವನ ಸಂದೇಶ ಮೌನದಿ ಹಾಡಿದಳು
ಯಾವ ಸಂತನಿಗೆ ಕಡಿಮೆ ಇಲ್ಲದವಳು//
ಶ್ರೀ ಬಸನಗೌಡ ಗೌಡರ
ಉಪನ್ಯಾಸಕರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ
No comments:
Post a Comment