ಯಾರಾದರೇನು ಆಳುವ ಅರಸ
ಯಾರಲ್ಲಿ ಭೇಧತಾರದ ಜಗವಿರಲಿ
ನಾರಿಯೆ ನರನೆ ನಮಗಿಲ್ಲ ಚಿಂತೆ
ಹರಿ ಬಂದು ಪವಡಿಸಬೇಕು ಅಲ್ಲಿ/
ಯಾರಲ್ಲಿ ಭೇಧತಾರದ ಜಗವಿರಲಿ
ನಾರಿಯೆ ನರನೆ ನಮಗಿಲ್ಲ ಚಿಂತೆ
ಹರಿ ಬಂದು ಪವಡಿಸಬೇಕು ಅಲ್ಲಿ/
ಅರಳು ಹುರಿದಂತೆ ಸವಿ ಮಾತಾಡಿ
ಕೊರಳು ಕೊಯ್ಯಲು ಕೈ ಹಾಕದಿರಲಿ
ಹರಿತ ಆಯುಧ ಮಾಡಿರಿ ತಪ್ಪಿದಲ್ಲಿ
ಸರಿಯಾದ ಪಾಠವಾಗಲಿ ಕಣದಲ್ಲಿ/
ನಾಮ ಹೋಮ ಬಲದಿಂದ ಹತ್ತುವರು
ರಾಮನಾಳಿದ ಸೀಮೆಯ ಅಶ್ವ ಮೇಧ
ಸಮ ಪಾಲಿಗೆ ಕಾದಿರುವರು ಭರತರು
ಗಮನಿಸಿ ನಾಕವರಳಿಸಿ ಧರಣಿಯಲ್ಲಿ/
ಸಮ ಪಾಲಿಗೆ ಕಾದಿರುವರು ಭರತರು
ಗಮನಿಸಿ ನಾಕವರಳಿಸಿ ಧರಣಿಯಲ್ಲಿ/
ರಾಗಿ ಬೆಳೆದವಗೂ ಸಿಗಲಿ ರಾಮರಾಜ್ಯ
ಬಾಗಿ ನಡೆದವರಿಗೂ ಬರಲಿ ಅಭಯ
ಸಾಗಿ ಹರಿದ ನದಿ ಸೇರಿವವು ಸಾಗರಕೆ
ಸಾಗದೆ ಸಂಗ್ರಹದ ಕೊಳೆ ಬೇಡ ಅಲ್ಲಿ /
ಶ್ರೀ ಬಸನಗೌಡ ಗೌಡರ
No comments:
Post a Comment