Friday, July 30, 2021

* ನಾಕವರಳಿಸು ಧರಣಿಯಲ್ಲಿ *

ಯಾರಾದರೇನು ಆಳುವ ಅರಸ
ಯಾರಲ್ಲಿ ಭೇಧತಾರದ ಜಗವಿರಲಿ 
ನಾರಿಯೆ ನರನೆ ನಮಗಿಲ್ಲ ಚಿಂತೆ 
ಹರಿ ಬಂದು ಪವಡಿಸಬೇಕು ಅಲ್ಲಿ/

ಅರಳು ಹುರಿದಂತೆ ಸವಿ ಮಾತಾಡಿ
ಕೊರಳು ಕೊಯ್ಯಲು ಕೈ ಹಾಕದಿರಲಿ
ಹರಿತ ಆಯುಧ ಮಾಡಿರಿ ತಪ್ಪಿದಲ್ಲಿ
ಸರಿಯಾದ ಪಾಠವಾಗಲಿ ಕಣದಲ್ಲಿ/
 
ನಾಮ ಹೋಮ ಬಲದಿಂದ ಹತ್ತುವರು
ರಾಮನಾಳಿದ ಸೀಮೆಯ ಅಶ್ವ ಮೇಧ
ಸಮ ಪಾಲಿಗೆ ಕಾದಿರುವರು ಭರತರು
ಗಮನಿಸಿ ನಾಕವರಳಿಸಿ ಧರಣಿಯಲ್ಲಿ/

ರಾಗಿ ಬೆಳೆದವಗೂ ಸಿಗಲಿ ರಾಮರಾಜ್ಯ
ಬಾಗಿ ನಡೆದವರಿಗೂ ಬರಲಿ ಅಭಯ
ಸಾಗಿ ಹರಿದ ನದಿ ಸೇರಿವವು ಸಾಗರಕೆ
ಸಾಗದೆ ಸಂಗ್ರಹದ ಕೊಳೆ ಬೇಡ ಅಲ್ಲಿ /

                ಶ್ರೀ ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...