Friday, October 1, 2021

* ನಾನಾಗುವೆ ತೃಪ್ತ *

ನಾ ಕಲಿಸುವೆ ಎನ್ನುವುದೇ 
ಒಂದು ಭ್ರಮೆ ...!
ಕಲಿಯಲು ಇವರಿಗಿಲ್ಲ 
ಅರ್ಹತೆ ಎನ್ನುವುದು ಒಂದು ಅಕ್ಷಮ್ಯ..!
ಕಲಿಸುವುದು ಏನಿದೆ ?
ಪುಸ್ತಕದ ಅಕ್ಷರ, ಅಂಕಿಗಳ ಮಾಲೆ ? 
ನಾ ಮೊದಲು ನೋಡಿದೆ 
ನಂತರ ಬಾಯಿ ತೆರೆದೆ.. 
ಅಷ್ಟರಲ್ಲಿ ಕಲಿಸಿದೆ ಎನ್ನುವ ಪಿತ್ತ 
ನೆತ್ತಿಗೇರಿದರೆ.... ಅವನೊಬ್ಬ ಹುತಾತ್ಮ !
ಕಲಿಸಿದ ನಾನೊಬ್ಬ  ಪ್ರೇತಾತ್ಮ!
ಪ್ರೀತಿ ಇಲ್ಲದ ಪಾತ್ರ ಯಾರು ಮಾಡಿದರೇನು ?
ಭಕ್ತಿಯಿಲ್ಲದ ತೀರ್ಥ ಯಾತ್ರೆ 
ಶಕ್ತಿ ಯಿಲ್ಲದ ಸೈನಿಕನ ದಂಡ ಯಾತ್ರೆ 
ಆಗ ನಾನೊಬ್ಬ ಕೆಂಭೂತ ! 
ಕೈಯಲ್ಲಿ ಕೋಲು 
ಮುಖವೆಲ್ಲ ಜೋಲು 
ನಿದ್ದೆಕಣ್ಣಿನಲ್ಲಿ ಗುಣಗುಣಿಸಿದರೆ 
ನಿನ್ನ  ಪಾಲಿಗೆ ನಾನೊಬ್ಬ ಹದ್ದು 
ಇದಕ್ಕೆ ಯಾರಲ್ಲಿ ಇಲ್ಲ ಮದ್ದು.
ನನ್ನ ನೋಡಿಯೇ ನೀನು 
ಕಲಿಯಬೇಕು ಬದುಕಿನ ಲೆಕ್ಕ 
ಆಗ ನಾನೊಬ್ಬ ಗುರು ಪಕ್ಕಾ
ಅಳಿಸಲಾಗದ ಕಪ್ಪು
ಯಾರೆ ಬಳಸಿದರೂ ಅದು ತಪ್ಪು 
ಅಪ್ಪಿ, ಒಪ್ಪಿಕೊಂಡು ಮಾರ್ಗದರ್ಶನ, 
ಮಾಡಿದಾಗ ನಾನಾಗುವೆ ತೃಪ್ತ //


        ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...