Wednesday, October 20, 2021

*ಯಾವುದು ಸತ್ಯ, ಅದಲ್ಲ ಸತ್ಯ *


*ಯಾವುದು ಸತ್ಯ, ಅದಲ್ಲ ಸತ್ಯ *

ಓಡಲಿಲ್ಲವೇನು.... 
ನಿನ್ನ ಕರ್ಮದ ಗಾಡಿ//

ಪಥವಿಲ್ಲ ಗತಿಯಿಲ್ಲ 
ದೃತಿಗೆಟ್ಟು ನಲುಗಿದೆಯಲ್ಲ
ಜ್ಞಾನವೆಂಬ ಚಾಲಕನಿಟ್ಟು 
ಅರಿವೆಂಬ ಮಾಲಿಕನಿಟ್ಟು  
ಓಡಲಿಲ್ಲವೇನು ......
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು .....
ನಿನ್ನ ಕರ್ಮದ ಗಾಡಿ//

ಕಾಲವನ್ನು ಕಳಿಚಿಟ್ಟು
ಕಾಲು ಗೆಜ್ಜೆ ಮೇಲ್ಕಟ್ಟಿ  
ಕುಣಿದು ಕುಪ್ಪಳಿಸಿ ಕೆಟ್ಟೆ
ಸತ್ಕರ್ಮ ಮಾಡಲಿಲ್ಲ
ಓಡಲಿಲ್ಲವೇನು.......
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು .....
ನಿನ್ನ ಕರ್ಮದ ಗಾಡಿ//

ಬಂದಾಗ ನಿಲ್ಲಲಿಲ್ಲ
ನಿಂತಾಗ ಅರಿಯಲಿಲ್ಲ
ಕುಂತಾಗ ಸಂತೆ ತಿಳಿಯಲಿಲ್ಲ
ಶಾಂತಿಗಾಗಿ 
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ನ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು...... 
ನಿನ್ನ ಕರ್ಮದ ಗಾಡಿ//

ಗುಡಿಯ ಹಿಂದನ ಗಡಿ 
ಬಿಡಿಸಿಕೊಂಡವರಿಲ್ಲ 
ಗಡಿ ದಾಟಿದವರು ಮೂಢರಲ್ಲ 
ಗಡಿಗಾಗಿ
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು...... 
ನಿನ್ನ ಕರ್ಮದ ಗಾಡಿ//

ಹುಡುಕಿದರೆ ಸಿಗುವುದಿಲ್ಲ 
ಸಿಕ್ಕರೂ ತಿಳಿಯುವುದಿಲ್ಲ 
ಸಿಕ್ಕವರೂ ಬಳಸಲಿಲ್ಲ
ಹಕ್ಕಿಗಾಗಿ 
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು.... 
ನಿನ್ನ ಕರ್ಮದ ಗಾಡಿ//

ಯಾವುದು ಸತ್ಯ, ಅದು ತಿಳಿಯಲಿಲ್ಲ 
ಯಾವುದು ಸುಳ್ಳು, ಅದು ಅರಿವಾಗಲಿಲ್ಲ  
ಸತ್ಯದ ಸತ್ಪುರಷರ ಹಿಂದೆ 
ಓಡಲಿಲ್ಲವೇನು....
ಕತ್ತಲಾವರಿಸುವ ಮುನ್ಶ
ಸತ್ತು ಬದುಕುವು ಮುನ್ನ 
ನಿತ್ಯ ನರಕ ಬಿಡಲು 
ಓಡಲಿಲ್ಲವೇನು .......
ನಿನ್ನ ಕರ್ಮದ ಗಾಡಿ//

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...