* ಪೂರ್ಣಿಮೆಯ ಮಹರ್ಷಿ *
ಶೀಗಿಯ ಹುಣ್ಣಿಮೆ
ಯೋಗವ ನೋಡೊಮ್ಮೆ /
ಯೋಗಿಯ ಜನ್ಮವು
ಭಾರತ ಪಡೆದುದೆ ಹೆಮ್ಮ/
ಆದಿ ಕವಿಯು ಮೊದಲು/
ಉದರಕಾದ ವ್ಯಾಧ/
ಮಡದಿಯ ಪುಣ್ಯಫಲ
ಉತ್ತರಕ್ಕೆ ಬದಲಾದ //
ನಾರದರ ಪ್ರಶ್ನೆಗೆ
ರತ್ನಾಕರ ಮಹಾಕವಿಯಾದ/
ವಲ್ಮದಲ್ಲರಳಿತು ನಲ್ಮೆಯ
ಮಹಾಕಾವ್ಯ ರಾಮಾಯಣ//
ಅಯೋಧ್ಯೆಯ ರಾಮ ಸಹೋದರ ಲಕ್ಷ್ಮಣ
ಸೀತಾಮಾತೆಯ ಆದರ್ಶ ಗುಣ/
ಕಲಿಯದಿದ್ದರೆ ಅದೆ ಮರಣ/
ಕಲಿತು ನೀನಾಗು ಶರಣ//
ದಶರಥನ ಕಂದ ಶ್ರೀರಾಮ ಚಂದ್ರ
ಕೈಕೆಯ ಆಸೆಗೆ ಬಲಿಯಾದ/
ರಾಮನ ನಡಿಗೆ ಕಾಡಿನ ಕಡೆಗೆ
ಸೀತೆ ಧರಿಸಿದಳು ನಾರು ಉಡುಗೆ/
ಸರ್ವವು ತ್ಯಾಗ ಕಾಡಿಗೆ ನಡೆದ
ಸಹೋದರ ಲಕ್ಷ್ಮಣನೊಂದಿಗೆ//
ಭರತ ಬಳಲಿ ರಾಜ್ಯ ಆಳಿದ
ಶ್ರೀರಾಮನ ಪಾದರಾಕ್ಷಿಯೊಳಗೆ/
ಕಾಡಿಗೂ ಓಡಿತು ಕರ್ಮದ ಕಷ್ಟ
ರಾಕ್ಷಸ ರಾವಣನ ಹೆಸರಲ್ಲಿ /
ಮಾಯದ ಜಿಂಕೆಗೆ ಮರುಳಾದ ಸೀತೆ
ಮರೆತು ರಾವಣ ಜಾಲದ ಬಲೆಗೆ/
ಲಂಕೆಯ ಅಂಕೆಯಲಿ ಮಂಕಾದಳು
ಸೀತೆ ಶ್ರೀ ರಾಮನ ನಾಮದಲ್ಲಿ/
ಹನುಮನ ಜನುಮದ ಒಲುಮೆಯ
ಗಮನ ರಾವಣ ನಿರ್ಣಾಮ//
ದುಷ್ಟ ಸಂಹಾರ ಶಿಷ್ಟ ರಕ್ಷಣೆ
ರಾಮರಾಜ್ಯದ ಕಥೆ ವಾಲ್ಮೀಕಿ
ಬರೆದ ಇತಿಹಾಸ ಪುರಾಣ//
No comments:
Post a Comment