Wednesday, October 13, 2021

ನಾಡ ಹಬ್ಬ

* ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸುತ್ತಿರುವ*

*ನಾಡ ಹಬ್ಬ ದಸರಾಜ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕವನ ರಚನೆ ಸ್ಪರ್ಧೆ*


  * ನಾಡ ಹಬ್ಬ🙏


ಕರುನಾಡ ಕನ್ನಡಿಗರ ಹಬ್ಬ
ಸಂಸ್ಕೃತಿ ಸೀಮೆಯ ಸಿರಿ ಹಬ್ಬ/ 
ಪರಂಪರೆ ಮಹಾನವಮಿ ದಿಬ್ಬ 
ಹರಡಿದೆ ಮೈಸೂರಿನಿಂದಬ್ಬರ/
ಕರಿ,ಕಲಿ,ಕವಿಗಳ ದಿಬ್ಬಣ 
ಅರಮನೆ ಪಥದಲ್ಲಿ ನಡೆದೈತಿ// 

ಅರಮನೆಯ ಮುಂದೆ 
ಅರಸನ ಅಂಬಾರಿ ಆನೆ/
ದಸರೆಯ ತುಂಬಾ ದೇವಿ 
ಚಾಮುಂಡೇಶ್ವರಿ ಸೇನೆ/ 
ಕರುನಾಡಿನ ಚಂದನವನದಲ್ಲಿ
ಕಲಾರಸಿಕರ ದಂಡೆ ತುಂಬೈತಿ  //

ದೇವಲೋಕ, ಮೃತ್ಯ ಲೋಕ  
ಭವದೊಳಗೆ ನಾನೆಲ್ಲೂ ಕಾಣೆ/
ಜಂಬೂ ಸವಾರಿ, ನಂಬಿ ಬಂದವರಿಗೆ 
ಮೈತುಂಬಾ ಮೈಸೂರು ಮಲ್ಲಿಗೆ / 
ಬಾಯಿ ತುಂಬಾ ಮೈಸೂರು 
ಪಾಕು ವಿಳ್ಯದೆಲೆ ಬಿದ್ದೈತಿ//

ಬಂಗಾರದ ಅಂಬಾರಿ 
ಬಲರಾಮನ ಮೇಲೆ ಏರೈತಿ/ 
ಜಂಭದ ನಡಿಗೆ ಜಂಬೂದ್ವೀಪದ ಬೆಡಗು
ದರ್ಶನಕ್ಕೆ ನಾಡೆಲ್ಲ ನಿಂತೈತಿ / 
ಯದುವಂಶದ ಕುಡಿಯ ಕಂಡು 
ಖುಷಿಯಿಂದ ಕುಣದೈತಿ//

ನವಮಿ ಹಬ್ಬ ನಾರಿಯರ ಹಬ್ಬ 
ಮಹಿಷಾಸುರನ ಕೊಬ್ಬು ಇಳಿಸೈತಿ/ 
ಅಸುರರ ಮೇಲೆ ಸಂಹಾರದ ಮಾಲೆ
ಜನಸಾಗರದೊಳಗರಳೈತಿ/ 
ದುರ್ಗಾನ ಅವತಾರ ನಮಗೆಲ್ಲ 
ಸ್ವರ್ಗದ ಸರಮಾಲೆ ತಂದೈತಿ//

 ಶ್ರೀ ಬಸನಗೌಡ ಗೌಡರ 
ಉಪನ್ಯಾಸಕರು ಗುಳೇದಗುಡ್ಡ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...