* ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸುತ್ತಿರುವ*
*ನಾಡ ಹಬ್ಬ ದಸರಾಜ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕವನ ರಚನೆ ಸ್ಪರ್ಧೆ*
* ನಾಡ ಹಬ್ಬ🙏
ಕರುನಾಡ ಕನ್ನಡಿಗರ ಹಬ್ಬ
ಸಂಸ್ಕೃತಿ ಸೀಮೆಯ ಸಿರಿ ಹಬ್ಬ/
ಪರಂಪರೆ ಮಹಾನವಮಿ ದಿಬ್ಬ
ಹರಡಿದೆ ಮೈಸೂರಿನಿಂದಬ್ಬರ/
ಕರಿ,ಕಲಿ,ಕವಿಗಳ ದಿಬ್ಬಣ
ಅರಮನೆ ಪಥದಲ್ಲಿ ನಡೆದೈತಿ//
ಅರಮನೆಯ ಮುಂದೆ
ಅರಸನ ಅಂಬಾರಿ ಆನೆ/
ದಸರೆಯ ತುಂಬಾ ದೇವಿ
ಚಾಮುಂಡೇಶ್ವರಿ ಸೇನೆ/
ಕರುನಾಡಿನ ಚಂದನವನದಲ್ಲಿ
ಕಲಾರಸಿಕರ ದಂಡೆ ತುಂಬೈತಿ //
ದೇವಲೋಕ, ಮೃತ್ಯ ಲೋಕ
ಭವದೊಳಗೆ ನಾನೆಲ್ಲೂ ಕಾಣೆ/
ಜಂಬೂ ಸವಾರಿ, ನಂಬಿ ಬಂದವರಿಗೆ
ಮೈತುಂಬಾ ಮೈಸೂರು ಮಲ್ಲಿಗೆ /
ಬಾಯಿ ತುಂಬಾ ಮೈಸೂರು
ಪಾಕು ವಿಳ್ಯದೆಲೆ ಬಿದ್ದೈತಿ//
ಬಂಗಾರದ ಅಂಬಾರಿ
ಬಲರಾಮನ ಮೇಲೆ ಏರೈತಿ/
ಜಂಭದ ನಡಿಗೆ ಜಂಬೂದ್ವೀಪದ ಬೆಡಗು
ದರ್ಶನಕ್ಕೆ ನಾಡೆಲ್ಲ ನಿಂತೈತಿ /
ಯದುವಂಶದ ಕುಡಿಯ ಕಂಡು
ಖುಷಿಯಿಂದ ಕುಣದೈತಿ//
ನವಮಿ ಹಬ್ಬ ನಾರಿಯರ ಹಬ್ಬ
ಮಹಿಷಾಸುರನ ಕೊಬ್ಬು ಇಳಿಸೈತಿ/
ಅಸುರರ ಮೇಲೆ ಸಂಹಾರದ ಮಾಲೆ
ಜನಸಾಗರದೊಳಗರಳೈತಿ/
ದುರ್ಗಾನ ಅವತಾರ ನಮಗೆಲ್ಲ
ಸ್ವರ್ಗದ ಸರಮಾಲೆ ತಂದೈತಿ//
ಶ್ರೀ ಬಸನಗೌಡ ಗೌಡರ
ಉಪನ್ಯಾಸಕರು ಗುಳೇದಗುಡ್ಡ
No comments:
Post a Comment