ನಡೆ ಮುಂದೆ, ನುಡಿ ಸಿರಿಯ
ಹಾಡೋಣ ಇಂದು//ಪ//
ಮರೆಯದಾ ಇತಿಹಾಸ ನಮ್ಮೆಲ್ಲರ
ಭವಿಷತ್ತು ಮುಂದು /
ಗಲ್ಲಿ ಗಲ್ಲಿಗಳಲ್ಲಿ ಹಿಡಿಯಿರಿ
ಕನ್ನಡದ ಬಾವುಟ, ಭಾರತದ ಮಡಿಲು
ಮಕ್ಕಳಾಗಿ ಇಂದು//
ಬಯಲು, ಮಲೆ, ಪಡುವಣದ
ಶರಧಿಯ ತೆರಗಳಬ್ಬರದ
ಶಬ್ದಗಳು ಸಿರಿ ಹಬ್ಬದ ಮಾಲೆ /
ಕನ್ನಡದ ಸವಿ ನುಡಿ,
ಸಹೋದರರ ಬಾಳ್ನುಡಿ
ಸದ್ವಿಕಾಸದ ಹೊತ್ತಿಗೆಯ
ಶಾಂತಿಯ ಬೆನ್ನುಡಿ//
ಸಾವಿರ ವರ್ಷಗಳ
ಶಾಸನದ ಸಾಲುಗಳು
ಭರವಸೆಯ ಉಕ್ತಿಗಳು //
ಸನ್ಮತಿಯ ಉನ್ನತಿಯು
ಜಗದಗಲ ಬೆಳಗುವ
ನಕ್ಷತ್ರಗಳು//
ದೇಗುಲದ ಭಿತ್ತಿಯ
ಶಿಲ್ಪದ ಕೆತ್ತನೆಗಳು
ಸಂಸ್ಕೃತಿ ಯ ಬಿತ್ತನೆಗಳು/
ಮೇಲ್ಕೆತ್ತಿದ ಮಹಾಕಾವ್ಯದ
ಸಂಸ್ಕಾರ ಚಿತ್ರಗಳು
ಧರ್ಮದ ಮರ್ಮದ
ಸಾರಗಳು //
ಗಂಗ,ಕದಂಬ
ರಾಷ್ಟ್ರ ಕೂಟ
ಬಲ ಚಾಲುಕ್ಯರು /
ಕಟ್ಟಿದ ಗುಡಿ ಗೋಪುರ
ಕಲ್ಯಾಣಿ ನಮ್ಮೆಲ್ಲರ
ಮುಕುಟ ಮಣಿಯು..
ಹೊಯ್ಸಳರ ಶೈಲಿಯ
ಕಲೆಯಿಂದಾದ ಬಲೆಯು
ಕೈಚಳಕದ ಗಣಿಯು//
ತಾಳೆ ಗರಿಯ ಹೊತ್ತಿಗೆಯು
ಮನುಕುಲವು ಗಳಿಸಿದ
ಸಂಪತ್ತು.../
ನಿನ್ನವರೆ ಹೆತ್ತವರು
ಸನ್ನಡತೆಯ ಪುತ್ರರು//
ಬಗ್ಗಿ ನಡೆದರೆ ಗುದ್ದು
ನುಗ್ಗಿ ನಡೆ ಸಗ್ಗ ಇಂದು/
ಬಾಂದಳಕೇರಲಿ ಕನ್ನಡದ ಕೀರ್ತಿ
ಭರವಸೆಯ ಬೆಳಕಿನೆಡೆ ತೇಲಲಿ
ಸಿರಿಗನ್ನಡದ ವಾರ್ತೆ //
ನಿನ್ನ ಅನ್ನವ ಪಡೆದು
ಕನ್ನಡವನ್ನುಲಿಯದಿರುವುದೆ
ಅನ್ಯರ ದ್ರೋಹ /
ಸಕಲರ ಕಾಯುವ
ದೇವರ ಗುಡಿ ಇದು ...
ಮಹಾದೇವಾಲಯವಿದು//
ಬಸನಗೌಡ ಗೌಡರ
No comments:
Post a Comment