Wednesday, October 27, 2021

* ನಾಡಗೀತೆಗಳ ಹಾಡೋಣ ಇಂದು *



ನಡೆ ಮುಂದೆ, ನುಡಿ ಸಿರಿಯ 
ಹಾಡೋಣ ಇಂದು//ಪ//

ಮರೆಯದಾ ಇತಿಹಾಸ ನಮ್ಮೆಲ್ಲರ  
ಭವಿಷತ್ತು ಮುಂದು /
ಗಲ್ಲಿ ಗಲ್ಲಿಗಳಲ್ಲಿ  ಹಿಡಿಯಿರಿ
ಕನ್ನಡದ ಬಾವುಟ, ಭಾರತದ ಮಡಿಲು 
ಮಕ್ಕಳಾಗಿ ಇಂದು//

ಬಯಲು, ಮಲೆ, ಪಡುವಣದ 
ಶರಧಿಯ ತೆರಗಳಬ್ಬರದ 
ಶಬ್ದಗಳು ಸಿರಿ ಹಬ್ಬದ ಮಾಲೆ /
ಕನ್ನಡದ ಸವಿ ನುಡಿ, 
ಸಹೋದರರ  ಬಾಳ್ನುಡಿ
ಸದ್ವಿಕಾಸದ ಹೊತ್ತಿಗೆಯ 
ಶಾಂತಿಯ ಬೆನ್ನುಡಿ//

ಸಾವಿರ ವರ್ಷಗಳ
ಶಾಸನದ ಸಾಲುಗಳು 
ಭರವಸೆಯ ಉಕ್ತಿಗಳು //
ಸನ್ಮತಿಯ ಉನ್ನತಿಯು 
ಜಗದಗಲ ಬೆಳಗುವ
ನಕ್ಷತ್ರಗಳು//

ದೇಗುಲದ ಭಿತ್ತಿಯ 
ಶಿಲ್ಪದ ಕೆತ್ತನೆಗಳು 
ಸಂಸ್ಕೃತಿ ಯ ಬಿತ್ತನೆಗಳು/
ಮೇಲ್ಕೆತ್ತಿದ ಮಹಾಕಾವ್ಯದ 
ಸಂಸ್ಕಾರ ಚಿತ್ರಗಳು
ಧರ್ಮದ ಮರ್ಮದ
ಸಾರಗಳು //

ಗಂಗ,ಕದಂಬ 
ರಾಷ್ಟ್ರ ಕೂಟ 
ಬಲ ಚಾಲುಕ್ಯರು /
ಕಟ್ಟಿದ ಗುಡಿ ಗೋಪುರ 
ಕಲ್ಯಾಣಿ ನಮ್ಮೆಲ್ಲರ 
ಮುಕುಟ ಮಣಿಯು..
ಹೊಯ್ಸಳರ ಶೈಲಿಯ 
ಕಲೆಯಿಂದಾದ ಬಲೆಯು
ಕೈಚಳಕದ ಗಣಿಯು//

ತಾಳೆ ಗರಿಯ ಹೊತ್ತಿಗೆಯು
ಮನುಕುಲವು ಗಳಿಸಿದ 
ಸಂಪತ್ತು.../ 
ನಿನ್ನವರೆ ಹೆತ್ತವರು 
ಸನ್ನಡತೆಯ ಪುತ್ರರು//

ಬಗ್ಗಿ ನಡೆದರೆ ಗುದ್ದು  
ನುಗ್ಗಿ ನಡೆ ಸಗ್ಗ ಇಂದು/
ಬಾಂದಳಕೇರಲಿ ಕನ್ನಡದ ಕೀರ್ತಿ  
ಭರವಸೆಯ ಬೆಳಕಿನೆಡೆ ತೇಲಲಿ 
ಸಿರಿಗನ್ನಡದ ವಾರ್ತೆ  //
  
ನಿನ್ನ ಅನ್ನವ ಪಡೆದು
ಕನ್ನಡವನ್ನುಲಿಯದಿರುವುದೆ
ಅನ್ಯರ ದ್ರೋಹ  /
ಸಕಲರ ಕಾಯುವ 
ದೇವರ ಗುಡಿ ಇದು ...
ಮಹಾದೇವಾಲಯವಿದು//

ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...