Wednesday, January 26, 2022

*ಎಳೆಯೋಣ ತಲೆ ಎತ್ತಿ *

ನಾವು ತಲೆಯತ್ತಿ ನಡೆಯಲು 
ತಲೆಯನ್ನೆ ನೀಡಿದ 
ಓ ವೀರ ಪುತ್ರರೆ !
ನೀವು ನಡೆದ ಪುಣ್ಯ ಭೂಮಿ 
ತಂದಿದೆ ನಮಗಿಂದು 
ಸ್ವರ್ಗದ ದಾರಿ ಹತ್ತಿರ. //

ಸಮಾನತೆ, ಸ್ವಾತಂತ್ರ್ಯ 
ಬಂಧುತ್ವ, ಸಾಮಾಜಿಕ ನ್ಯಾಯ 
ಹಾಗೆ ಬಂದುವಲ್ಲ ಹೇ ಪುತ್ರ
ನೆನಪುಗಳು ನೆನೆಯದ ಉತ್ತರ 
ಬರಿ ತಿಂದು ತೇಗಲು ಬಂದ 
ಹರಾಮಿ ಧರ್ಮ ಛತ್ರ .//

ಕ್ಷಣ ಗಡಿಯ ಕಡೆ ನೋಡು 
ಇಂದೂ ಒಣಗಿವೆ ಜೀವ kkm
ಉರುಳುತಿವೆ ಹಿಮ ರಕ್ಕಸ/
ದಿನವೆಲ್ಲ ಕಾಡುತಿವೆ ಒಳಗೂ  
ಹೊರಗೂ ಉಳಿಯದ 
ಕುದಿಯುವ  ಬಿಸಿ ನೆತ್ತರ// 

ನಿಂತ ನೆಲ ಅಲುಗಾಡಿದೆ 
ಅನಂತ ಸ್ವಾರ್ಥದ ಬಾರ 
ಅರಿಯದೆ ವಿರಮಿಸಿದರೆ 
ಹೊರೆ ಭಾರತ/ 
ತರು ಲತೆ ಬೆಳೆಗಲಾದರೂ
ಹರಡಲಿ ನಿನ್ನೊಲಮೆಯ 
ಚುರುಕಿನ ಹೊಸ ಚಿತ್ರ// 

ಭಾವಗಳ ಹೊಸೆದು ಜೀವಗಳ ಸೇರಿಸಿ 
ಹೊಸ ಧ್ವಜವ ಹೆಣೆಯೋಣ
ಮನಸುಗಳ ಮನೆ ಮನಗಳಲಿ
ಮೌನ ಮಹಡಿಯ ಕಟ್ಟೋಣ /
ಸ್ವಾಭಿಮಾನದ ಬಣ್ಣ ಹಚ್ಚಿ
ತ್ಯಾಗದ ಬಾವುಟ ತಲೆ ಎತ್ತಿ 
ಧರ್ಮದ ದಾರ ಎಳೆಯೋಣ ಒತ್ತಿ ಒತ್ತಿ//

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...