* ಪಟ್ಟ *
ಇಲ್ಲಿ ಕೋಳಿಗಳೆ ಕೂಗುವವು
ಹುಂಜದ್ದೇನಿದ್ದರು ಬರಿ ಕರ್ತವ್ಯ.
ಕಾಣುವುದು ಸತ್ಯ ಎನ್ನ ಲಾದೀತೆ ?
ಮಣ್ಣು ಹೊತ್ತವರು ಮಣ್ಣಿನಲ್ಲಿಯೇ
ಹೂತು ಹೋದರು ಖಡ್ಗ ಹಿಡಿದವರೆ
ಕಟ್ಟಿದರೆಂದು ಹೊಗಿಳಿದೆವು
ಕೋಳಿಗಳದೇನು ಮಹಾ ಬಿಡಿ.
ಇದನ್ನೆ ಉರು ಹೊಡೆದು ಜ್ಞಾನಿಗಳಾಗಿಲ್ಲವೆ?
ದರ್ಪದಿಂದ ಓಣಿ ತಿರುಗಿದ ಹುಂಜ
ತಿಪ್ಪಿ ಕೆದರಿ ಕಾಲುಕೆದರಿದ್ದೆ ಬಂತು
ಪಟ್ಟ ಕಟ್ಟುವುದು ಮೃದುವಾಗಿ ಮುತ್ತಟ್ಟರಿಗೆ ಮಾತ್ರ ,ಅಲ್ಲವೆ..?.ಇಲ್ಲ ಕೆಲವರು
ಮೊಟ್ಟೆ ಇಟ್ಟದ್ದಕ್ಕೆ ಎಂದರೆ
ಬೇಡ ಎನ್ನಲಾದೀತೆ ? ಏನು ಮಾಡಲಾಗುವುದಿಲ್ಲ,
ಕಣ್ಣಿದ್ದವರೆ ಹೇಳಿದ್ದಾರಲ್ಲವೆ.
ಬಹುಜನರು ಒಪ್ಪಿದರೆ ಅದೆ ಪ್ರಜಾಪ್ರಭುತ್ವ ,
ಅದುವೆ ಸರಿ, ಬಹುಪರಾಕ ಹೇಳಲೇ ಬೇಕು
ಅಂದರೆ ನಂಬಲೇ ಬೇಕು
ನಮ್ಮೂರ ನರಸಮ್ಮ ಆರು ಕೋಳಿ
ಏಳು ಹುಂಜ ಸಾಕಿದ್ದಳು.
ವಾರದ ಹಿಂದೆ ಆರು ಹುಂಜವೆ ಮಾಯ...
ಕೇಳಿದೆ... ಅಜ್ಜಿ ಆರು ಹುಂಜ ?
ಅಜ್ಜಿ ಹೇಳಿತು " ಯಾವ
ದಾಬಾದ ಒಲೆಯ ಮೇಲೆ,
ಚಪ್ಪರಿಸುವವರ ನಾಲಿಗೆ ಮೇಲೆ
ನಲಿದಾಡಿದೆ ಏನೊ.. ಎಚ್ಚರಿಸಿದವರಿಗೆ
ಇದೆ ಗತಿ ಎನ್ನಬೇಕೆ !
No comments:
Post a Comment