Friday, March 18, 2022

* ನಾನೂ ಬರಲೆ *

NugV

* ನಾನು ಬರಲೆ *

ಆಶೆಗಳ ಕೊಂಡವರೆ ಆಗಸದಿ 
ನಡೆದವರೆ ದೇಶಾಂತರಕೆ 
ನಾನೂ ನಿಮ್ಮೊಂದಿಗೆ ಬರಲೆ /

ಏಣಿಯ ಏರಲು ಓಣಿಯ 
ಮಕ್ಕಳಿಗೆ ಯಾಕೆಲ್ಲ ನೆಲವು 
ಕನಸಿನ ಏಣಿ ಏರಿ ಬರುವೆ/

ಲೋಹದ ಹಕ್ಕಿಯ ಮೇಲೆ
ಮೋಹದ ರೆಕ್ಕೆಗಳ ಕಟ್ಟಿ
ನಡೆದಿರುವದಾದರೂ ಎಲ್ಲಿಗೆ/ 

ಬಾಂಬುಗಳ ಬಿತ್ತಿ ಭರವಸೆಯ 
ನಂಬುಗೆ ಕಿತ್ತು, ಪ್ರೀತಿಯ ಸುಟ್ಟು
ತುಂಬಿಕೊಂಡು ಹೋಗುವುದೆಲ್ಲಿ /

ಬಿಟ್ಟು ಹೋಗಲು ಉಳಿಸಿದ್ದೇನು
ಕೆಟ್ಟು ಹೋಗುವ ತೆಂಗಿನ ಚಿಪ್ಪು
ಬಿಟ್ಟರೂ ಮನಯಲ್ಲಾ ಕೊಳಕು/

ರೆಕ್ಕೆಗಳನು ಕಟ್ಟಿರಿ ನಮಗೆ ಒಮ್ಮೆ    
ಚುಕ್ಕೆಗಳ ಮುಟ್ಟಿ ಚಂದ್ರಮನ 
ಮೆಟ್ಟಿ  ಕುಣಿದಾಡಲು ಬರವೆ/

ಮನೆಪಾಠ ಒಂದು, ಶಾಲೆಗಳ 
ಸಹವಾಸ ಪಾಠ ಇನ್ನೊಂದು  
ಸಹಜತೆ  ತಿಳಿಯದೆ ನೊಂದೆ /

ಅಪ್ಪನ ಕನಸು ಉಪ್ಪರಗಿ ಮೇಲೆ
ಸಪ್ಪೆಯಾಗಿದೆ ಶಾಂತಿಯ ಕಳೆಯು
ಹೊತ್ತಿ ಉರಿದಿದೆ ಬೆಂಕಿಯ ಮಳೆ

Tuesday, March 8, 2022

* ಅಕಾಲಿಕ ಅರಗಿಣಿ *

ಅರಳು ಮರುಳು ಅರವತ್ತು 
ದಾಟಿದವರಿಗೆ ಹಿಡಿದವಳು
ಎನ್ನುವ ಕಾಲವೂಂದಿತ್ತು.  
ಯಾಕೆಂದರೆ ನನ್ನ ಅಜ್ಜ ಪ್ಯಾಂಟ್  
ಏರಿಸಿ ಜೀಪು ಮರೆತಾಗಲೆ 
ಅದು ಖಾತರಿಯಾಗಿತ್ತು //
ಅದು ಹಳೆಯ ಕಾಲ ಬಿಡು ! 
ಈಗೀಗ ಮೂವತ್ತು ಮುಗಿದು 
ನಲವತ್ತರ ಬೆನ್ನು ಹತ್ತಿದಾಗಲೆ 
ನನಗೆ ಅರ್ಥವಾಗಿದ್ದು 
ಅದರಲ್ಲಿ ಇಪ್ಪತ್ತು ಕಳೆದು ನಲವತ್ತಕ್ಕೆ 
ಇವಳು ಪಾದಾರ್ಪಣೆ ಮಾಡಿದ್ದು. 
ಚಸ್ಮಾ ತೆಲೆಗೇರಿಸಿ ಮನೆ ತುಂಬಾ 
ಹುಡುಕಾಡಿದಾಗಲೆ ಅದು 
ಇನ್ನೂ ಖಾತರಿಯಾಗಿತ್ತು .
ಇಲ್ಲ ಇಲ್ಲ...
ಅದು ನೆನಪು ಹಾರಿದ್ದೆ !
ಎಂಬುದು ನನ್ನ ವಳೊಂದಿಗೆ 
ನನ್ನ ವಾದ, ಏನು ಮಾಡಿಯಾಳು 
ದುಡಿದು ತಂದು ಹಾಕುವ ಗಂಡ 
ರಾಜಿಯಾಗಿತ್ತು..ಮತ್ತೆ ಅದೆ ಕತೆ 
ಮೊಬೈಲ್ ಚಾರ್ಜ್ ಗಿಟ್ಟು ಬಟನ್ನೆ ಒತ್ತಿಲ್ಲ ...!   
ಗಡಿ ಬಿಡಿ ಕಣೆ ನೂರೆಂಟು 
ರಗಳೆ ಮರೆತರೇನು ? 
ನೂಕುವುದೆ ಅರವತ್ತಕ್ಕೆ ?
ಆವತ್ತು ಟಿಪನ್ ರವೆ, ಉಪ್ಪಿಟ್ಟು 
ತಿಂದದ್ದೆ ಬಂತು, ಕೈ ಬಾಯಿಗೆ 
ನಡೆದಿತ್ತು ಕಸರತ್ತು. ಖಜಾನೆ ತುಂಬಿತ್ತು
ಸಂತೋಷ ಖಾಲಿಯಾಗಿತ್ತು.!
ಹಾಳಾದ ಬಸ್ಸು ಪದೆ ಪದೆ ಮಿಸ್ಸು..! 
ಅವಸರದಲ್ಲೆ ಬಟ್ಟೆ ಯಲ್ಲಾ ತೊಟ್ಟೆ  ..
ಮುಗಿಯಿತು ಗೆಟಪ್ ,ಪಾಪ ನನ್ನ ವಳಿಗೆ 
ನನ್ನದೆ ಕಾಳಜಿ ಪ್ಯಾನ್ ಕೆಳಗಡೆ 
ಮಧ್ಯಾಹ್ನ  ಟಿಪನ್ಗಾಗಿ ಚಪಾತಿ ಪಲ್ಯ
ಆರಿಸಲು ಟಿಪಾಯಿ ಮೇಲೆ  ಇಟ್ಟಿತ್ತು.
ಚೇ, ....ಯಾಕೊ ಕಣೆ ಹೊಟ್ಟೆ ಹಸಿವಿಲ್ಲ ! 
ಬೇಗನೆ ಹೋಗಬೇಕು, ?
ಮುಸಿ ಮುಸಿ ನಕ್ಕ ನನ್ನಾಕೆ ಬುತ್ತಿ  
ಕಟ್ಟಿ ಕೈಗಿಟ್ಟಳು ಬಾಕ್ಸ್ ... 
ಹೊರಸಿದಳು ಬ್ಯಾಗ್ ! 
ಪೇರಿ ಕಿತ್ತೆ...ಚಿತ್ತ  ಕಾಲೇಜಿನತ್ತ. 
ಅದು ಜೂನ್ ತಿಂಗಳ ಪ್ರವೇಶವೆ ಪ್ರಧಾನ 
ಪಾಠ ನಿಧಾನ ಪ್ರಾಚಾರ್ಯರ ಪರದಾಟ 
ಕರಣಿಕರ ಹೋರಾಟ. 
ಇಪ್ಪತ್ತರ ಉಪನ್ಯಾಸಕನಿಗೆ 
ಫೀ  ರೆಮಿಟನ್ಸ ಮಾಡುವ ಪಟ್ಟ  
ತನ್ನದೆ ಮೊಬೈಲ್, ಲೆಕ್ಕದಲ್ಲಿ ಲೀನ 
ತಟ್ಟನೆ ಚೀರದ ನನ್ನ ಮೊಬೈಲ್ ಎಲ್ಲಿ ? 
ಮುಸಿ ಮುಸಿ ನಗುವ ಸರದಿ ನನ್ನದು !
ಯಾಕೆಂದರೆ ಅವರಿಗೆ ಕೈಗೊಂದು ಡಿವೈಸ್, 
ಕಿವಿಗೊಂದು ಡಿವೈಸ್, 
ಕೂಡಿಸಲೊಂದು ಕೇಬಲ್ ಡಿವೈಸ್ 
ಮಾಡಿಯಾರು ಏನು? 
ನಾನೆ ವಾಸಿ ನಲವತ್ತಾದರೇನು ನವಯುವಕ 
ಹೆಂಡತಿಯ ಮುಂದೆ ಚಪ್ಪರಿಸಿದೆ
ತಿಂಡಿ ತಿಂದಷ್ಟೆ ಬಂಡ ಬಡಾಯಿ
ಆದರೂ ಒಳಗೊಳಗೆ ಅಪ್ಪಿಕೊಂಡಳು 
"ಅರಳು ಮರಳು", ಅವಳೆ ನನ್ನ 
ಅವಧಿಯ ಒಳಗಡೆ ಬಂದ 
ಅಕಾಲಿಕ ಅರಗಿಣಿ //

Monday, March 7, 2022

*ಮೋಜು ಮಸ್ತಿ ಬಿಡಿ *

ಕೊರೋನಾದ ಕರಿನೆರಳು 
ಬಿದ್ದು ನಮಗೆಲ್ಲ ಆಗಿತ್ತು  
ಕರಾಳ ದಿನ/ 
ಒಳಗೊಳಗೆ ನಕ್ಕುರು ಕೆಲವು ಜನ/ 
ನಿಜವಾಗಿ ಅತ್ತವರು ಹಲವು ಜನ /
ಓದದೆ ಪಾಸು, ಇಲ್ಲ ನಪಾಸು
ಹೊಡೆದರು ಹೋಳಿ ಹಲಗೆ//
ನಿಜವಾಗಿ ಓದಿದವರಿಗೆ
ಬಂತು ಜೋಳಿಗೆ 
ಅವಕಾಶದ ಬಾಗಿಲು 
ಈಗ ಬಂದಿದೆ ಬಳಿಗೆ  
ಮಾರ್ಚ್ 28 ,ಎಪ್ರಿಲ್ 22 
ಅತ್ತವರು ನಗಬಹುದು 
ನಕ್ಕವರು ಅಳಬಹುದು.
ಅತ್ತವರು ಸಾಯುವರೇನು ? 
ದುಡಿದವರು ಬಡವರಲ್ಲ 
ಪಡೆದವರು ಶಾಸ್ವತವಲ್ಲ  
ತಡೆದು ಪಡೆಯಲು 
ಹೋರಾಡಿದವನೆ ಸಾಧಕ/
ಯಾಕಿನ್ನು ತಡ, ಪುಸ್ತಕ ಹಿಡಿ
ಮೋಜು ಮಸ್ತಿ ಬಿಡಿ,ಯುದ್ಧಕ್ಕೆ ನಡಿ/
ಪಾಸಾದರೆ ಮುಂದೆ ನಡೆ
ನಪಾಸಾದರೆ ಅನುಭವ ಪಡೆ 
ಅನುಭವವೆ ಶಿಕ್ಷಣ ಅಂಕವೊಂದೆ
ಮಾನದಂಡವಲ್ಲ, ಚಿಂತೆ ಬಿಡಿ //

Friday, March 4, 2022

* ಕರ್ತವ್ಯವೆ ದೇವರು *

ನಾನೊಬ್ಬ ಹಿಂದು ಭಾರತದ ಬಂಧು 
ಯಾಕೆಂದರೆ ನಾವು ಬಂದಿರುವುದೆ 
ಸಿಂಧೂ ನೆಲದಿಂದ //
ನನ್ನ ರಕ್ತ ದೊಂದಿಗೆ ಸಂಬಂಧ 
ಬೆಳೆಸದವನೂ ನನ್ನ ಸಂಬಂಧಿ //
ಎನ್ನ ಮನೆಯಂಗಳದಿ ಅನ್ನ 
ಉನ್ನದವನು ನನ್ನ ಬಂಧು /
ತನ್ನ ಮನೆಯಂಗಳದಿ ಎನಗೆ 
ಅನ್ನ ನೀಡದವನು ಎನ್ನ ಬಂಧು// 
ಏಕೆಂದರೆ ಭಾರತದ ಸಂಸ್ಕೃತಿಯೇ 
ವಸುದೈವ ಕುಟುಂಬಕಂ ಸೂತ್ರದಿಂದ//
ತನ್ನ ಪಲ್ಲಕ್ಕಿ ಹೊರಲು ಅನ್ನವನಿಕ್ಕಿ 
ಹೊಗಳಿ ಹೊನ್ನಸೂಲಕೇರಿಸಿದರೆ 
ಕರೆಯಲಿ ಹೇಗೆ ಬಂಧು? //
ಕಣ್ಣಿದ್ದು ಕುರುಡ,ಕಿವಿ ಇದ್ದು ಕಿವುಡ,
ಕಾಲು ಇದ್ದು ನಡೆಯದವರ 
ಬಾಯಿದ್ದು ಮಾತಾಡದವರ ಕಾಲವಿತ್ತು //
ಬಾಗಿಲಿಗೂ ಕಣ್ಣಿದೆ ಗೋಡಗೂ ಕಿವಿಯಿದೆ 
ಮನೆಯೇ ಓಡಾಡುವ ಬಂಡಿ
ಮರ್ಕಟ ಕಾಣದೆ ಜಿಗಯದು ಇವತ್ತು//
ಹನ್ನೆರಡು ತಲೆಮಾರು ಹಡದಿ ಹಾಸಿದರೂ ಸನ್ನಡತೆಯಿಂದ ಸದ್ಗುರುವೆ ಆಗಿಹರು /
ಹತ್ತು ತಲೆಮಾರು ಕತ್ತೆಯಂತೆ ದುಡಿದವರು 
ಉತ್ತಮ ಧಣಿಯೆ ಆಗಿಹರು//
ಅವರವರ ಕಾರ್ಯದಲ್ಲಿ ಅವರೆ ಶ್ರೇಷ್ಠ 
ಯಾವುದು ಇಲ್ಲ ಕನಿಷ್ಠ 
ಕಸಗೂಡಿಸುವ ಕೈಗಳಿಗೂ 
ಕೈಮುಗಿಸಿಕೊಳ್ಳುವ ಅರ್ಹತೆ ಯುಂಟು 
ಕರ್ತವ್ಯವೆ ದೇವರೆಂದಾಗ // 
ಇಲ್ಲದಿದ್ದರೆ ಕಸಕ್ಕಿಂತ ಕಡೆ 
ಕೊಟ್ಟ ಕೆಲಸ ಕಲಸಮಲಗೋರ ಮಾಡಿಟ್ಟಾಗ/

Wednesday, March 2, 2022

* ಸಮಸ್ಯೆಗಳಿಗೆ ಇತಿಹಾಸವೂ ಮದ್ದು*

"ಸರ್ವ ವ್ಯಾಧಿಗಳಿಗೆ ಸರಾಯಿ ಮದ್ದು " ಎಂದು ಯಾವದೋ ಕುಡುಕನು ಹೇಳಿದ ಮಾತನ್ನು  ನಾನು ಕೇಳಿದ್ದ ನೆನಪು. ಅದು ತಮಾಷೆಯ ಮಾತೆ ಆಗಿರಬಹುದು. ಆದರೆ  ಕುಡುಕರು ತಮ್ಮನ್ನು ಸಮರ್ಥಿಸಕೊಳ್ಳಲು ಹೇಳಿದಂತಹ ಮಾತು ಇದಾಗಿರಬಹುದು. ಅದೇನೆ ಇರಲಿ ಅದು ಅವರವರ ಭಾವಕ್ಕೆ ಬಿಟ್ಟ ಮಾತು ಬಿಡಿ. ಆ ಮಾತು ಹಾಗಿರಲಿ ಈಗ ನಾನು ಹೇಳಲು ಹೊರಟಿರುವುದು, ಸರ್ವ ಸಮಸ್ಯೆ ಗಳಿಗೆ ಇತಿಹಾಸ ಮದ್ದು ಹೇಗೆ ಎನ್ನುವುದು  ನನ್ನ ಲೇಖನದ ಉದ್ದೇಶ , ನಾನೊಬ್ಬ ಇತಿಹಾಸ ಮೇಸ್ಟ್ರು ಆಗಿರುವದರಿಂದ ನನ್ನ ಚಿಂತನೆಗಳು ಆ ಮೊಸೆಯಿಂದಲೆ ಬರಬೇಕು ತಾನೆ.ಅದರಲ್ಲಿ ಇಲ್ಲಿ ಎರಡು ಮುಖ್ಯ ವಿಷಯವನ್ನು ನಾನು ಚರ್ಚಿಸಲು ಬಯಸುತ್ತೇನೆ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆ  ಮತ್ತು ಇನ್ನೊಂದು ರಷ್ಯ ಉಕ್ರೇನ ಮೇಲೆ ದಾಳಿ ಮಾಡುತ್ತಿರುವುದು. ಇದು ಜಗತ್ತು ಮೂರನೇ ಮಹಾಯುಧ್ಧದ ಕಡೆ ದಾಪುಗಾಲು ಹಾಕುತ್ತಿದೆಯೇನೊ ಎಂದು ಭಾಸವಾಗುತ್ತಿದೆ. ಈಗ ಮೊದಲನೆಯದಾಗಿ ಚಿಂತಿಸುವ ವಿಷಯ ಏನೆಂದರೆ  ಮಧ್ಯ ಕಾಲೀನ ಭಾರತದ ಇತಿಹಾಸದಲ್ಲಿ  ಅಂದರೆ ಸಾ. ಶ.1206 ರಿಂದ ಸಾಶ.1526 ರ ವರೆಗೆ ದೆಹಲಿ ಸುಲ್ತಾನ್ ಅರಸರು ಭಾರತ ದೇಶದ ಆಡಳಿತ ಮಾಡಿದರು ಆ ಅವಧಿಯಲ್ಲಿ ಐದು ಸಂತತಿಗಳು  ಭಾರತದಲ್ಲಿ ಆಡಳಿತ ಮಾಡಿದವು,ಅವುಗಳೆಂದರೆ.. ಗುಲಾಮಿ ಸಂತತಿ, ಖಿಲ್ಜಿ ಸಂತತಿ, ತುಘಲಕ್ ಸಂತತಿ, ಸೈಯದ್ ಸಂತತಿ ಮತ್ತು ಲೋಧಿ ಸಂತತಿ. ಅದರಲ್ಲಿ ಖಿಲ್ಜಿ ಸಂತತಿಯ  ಅಲ್ಲಾವುದ್ದೀನ್ ಖಿಲ್ಜಿಯ ಆಡಳಿತದ ಸುಧಾರಣೆ ಇಲ್ಲಿ ಸ್ಮರಣೀಯ ಅದರಲ್ಲಿಯೂ ಆತನ ಮಾರುಕಟ್ಟೆ ಸುಧಾರಣೆ ಇಲ್ಲಿ ಉಲ್ಲೇಖನೀಯ ಅಂದು ಆತ ಸೈನಿಕರ ಮೂಲ ಅಗತ್ಯತೆ ಗಳನ್ನು ಪೂರೈಸಲು ದೈನಂದಿನ ಉಪಯೋಗದ ಎಲ್ಲಾ ವಸ್ತುಗಳ ದರಗಳನ್ನು ನಿಗದಿಗೊಳಿಸಿದ್ದ ಅದಕ್ಕಾಗಿ  ಪ್ರತ್ಯೇಕ ಇಲಾಖೆ ಸ್ಥಾಪಿಸಿದ್ದ ಮತ್ತು ವಿಶೇಷ ಅಧಿಕಾರಿಗಳನ್ನು ನಿಯಮಿಸಿದ್ದ ಅಲ್ಲದೆ ರಾಜಧಾನಿಯಲ್ಲಿ ನಿಗದಿಗೊಳಿಸಿದ್ದ ದರಗಳು ಎಲ್ಲಾ ನಗರಗಳಿಗೂ ಅನ್ವಯಿಸುವಂತೆ ಮಾಡಿದ್ದ,  ಈ ಮೂಲಕ ಕಡಿಮೆ ಸಂಬಳದಲ್ಲಿಯೂ ಬ್ರಹತ್ ಸೈನ್ಯ ವನ್ನು ಕಟ್ಟಿದ್ದ ಎಂದು ಓದುತ್ತೇವೆ.ಇವತ್ತು ಸೈನಿಕ ಹಾಗೂ ನಾಗರಿಕ ಆಡಳಿತದ ಅಧಿಕಾರಿಗಳ ಹಾಗೂ ನೌಕರರ ಸಂಬಳದ ಮೊತ್ತವನ್ನು ನೀವು ಸೂಕ್ಷ್ಮ ವಾಗಿ ಅವಲೋಕನ ಮಾಡಿದರೆ ಶೇಕಡಾ 70 ರಿಂದ 80 ರ ತೆರಿಗೆ ಹಣ ಸಂಬಳ ಮತ್ತು ಪಿಂಚಣಿಗಾಗಿ ಹೋಗುವುದು, ಆದರೂ ಅದು ಸಾಲದೆ ಮತ್ತೆ ಮತ್ತೆ ಏರಿಸುವ ಪ್ರಸ್ತಾಪ ಬಂದಿರುತ್ತದೆ, ಏರುತ್ತಾನು ಇರುತ್ತದೆ ತಪ್ಪೇನೂ ಅಲ್ಲ ಬಿಡಿ ,ಅದು ಬೆಲೆ ಸೂಚ್ಯಂಕದ ಮೇಲೆ ಏರುತ್ತಿರುತ್ತದೆ . ಅದರ ತೀವ್ರ ಪರಿಣಾಮ ತೆರಿಗೆದಾರರ ಮೇಲೆ  ಬೀಳುತ್ತದೆ ಅದು ಬೀಳಲಿ ಬಿಡಿ ಕಟ್ಟಿಬಹುದೇನೋ ಕಟ್ಟಿದ ತೆರಿಗೆ  ಪರೋಕ್ಷ ಪರಿಣಾಮ  ಜನಸಾಮಾನ್ಯರ ಮೇಲೆ ಆಗುತ್ತದೆ .ಹೇಗೆಂದರೆ ಬೆಲೆಗಳು ಗಗನಕ್ಕೇರುವವು. ಸರಕು ಮತ್ತು ಸೇವೆಗಳು ಜನಸಾಮಾನ್ಯರಿಗೆ ಕೈಗೆ ನಿಲುಕದೆ ತತ್ತರಿಸಿ ಹೋಗುವರು ನಿರ್ದಿಷ್ಟ ಆದಾಯದ ಮೇಲೆ ಅವಲಂಬನೆಯಾಗಿರುವ ಜನ ಕಷ್ಟಕ್ಕೆ ಒಳಗಾಗುತ್ತಾರೆ.ಇಂತಹ ಸಂದರ್ಭದಲ್ಲಿ  ಅಗತ್ಯ ವಸ್ತುಗಳ ಬೆಲೆಗಳು ಹಾಗೂ ಸೇವೆಗಳ ಬೆಲೆ ನಿರ್ಧಾರ ಮತ್ತು ತೂಕದಲ್ಲಿ ಮೊಸ ಮಾಡುವ ,ಹಾಗೂ ದಾಸ್ತಾನು ಕೋರರನ್ನು ದಮನ ಮಾಡುವ ಕ್ರಮಗಳನ್ನು  ಸರಕಾರ ನಿರ್ವಹಿಸಿದರೆ ಸರ್ವರಿಗೂ ನ್ಯಾಯ ಸಿಗಬಹುದೇನೋ ? ಎಂಬ ಪ್ರಶ್ನೆ ಬಂದಾಗ ನಾವು ಅಲ್ಲಾವುದ್ದೀನ್ ಖಿಲ್ಜಿ ಯಂತಹ ಒಂಭತ್ತು ನೂರು ವರ್ಷ ಗಳ ಹಿಂದಿನ ಆಡಳಿತ ನಮಗೆ ಮಾರ್ಗ ದರ್ಶನ ನೀಡಬಲ್ಲದು.ಇಲ್ಲವೆ  ಶಿಕ್ಷಣ, ಆರೋಗ್ಯ ಸೇವೆ ಗಳನ್ನು  ಸಂಪೂರ್ಣ ವಾಗಿ ಸರಕಾರವೆ ನೋಡಿಕೊಂಡು  ಬೇಕಾದರೆ ನೌಕರರ ಹಾಗೂ ಅಧಿಕಾರಿಗಳ ಸಂಬಳವನ್ನು ಶೇಕಡಾ  10 ರಿಂದ  15 ರಷ್ಟು ಸಂಬಳವನ್ನು ಇಳಿಸಿದರೂ ಆದೀತು, ಆ ಮೂಲಕ ಶ್ರೇಷ್ಠ ದರ್ಜೆಯ ಶಿಕ್ಷಣ  ಮತ್ತು ಆರೋಗ್ಯ ವನ್ನು ಸರ್ವರಿಗೂ ನೀಡಿದರೆ ಯಾರೂ ತಕರಾರು ತಗೆಯದೆ ಇರಬಹುದೇನೋ ? ಬಡವ ಬಲ್ಲಿದವನೂ ಒಂದೆ ತೆರನಾದ ಶಿಕ್ಷಣ  ಮತ್ತು ಆರೋಗ್ಯ ಪಡೆಯಲು ಸಾಧ್ಯವಾಗಬಹುದು ಆ ಮೂಲಕ ಸುಖಿ ಸಮಾಜ ನಿರ್ಮಾಣ ಮಾಡಲು ದಾರಿಯಾಗಬಹುದು ಅಲ್ಲಿಯೂ  ಕೂಡಾ ಎಡರು ತೊಡರುಗಳು ಬರಬಹುದು ಆ ಕಾಲಘಟ್ಟದಲ್ಲಿ ನಿಂತು ಅವುಗಳಿಗೆ ಪರಿಹಾರ ಕಂಡು ಕೊಳ್ಳಬಹುದು.ಇನ್ನೊಂದು  ಜ್ವಲಂತ ಸಮಸ್ಯೆ .ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆ.  ಇದಕ್ಕೂ ಇತಿಹಾಸದಲ್ಲಿ ಉತ್ತರ ಕಂಡು ಕೊಳ್ಳಬಹುದೇನೋ .1914 ರಿಂದ 1918 ರ ವರೆಗೆ 4 ವರ್ಷ ನಡೆದ ಪ್ರಥಮ ಜಾಗತಿಕ ಯುದ್ಧ ಹಾಗೂ 1939 ರಿಂದ  1945 ರ ವರೆಗೆ   6 ವರ್ಷ ನಡೆದ ಎರಡನೆಯ ಮಹಾಯುಧ್ಧಗಳಿಂದ ನಾವು ಕಲಿಬೇಕಾಗಿದ್ದು ಬಹಳ ಇದೆ, ಆದರೆ ಕಲಿತದ್ದು ಕಡಿಮೆ  ಎಂದು ನನ್ನ ಭಾವನೆ 1920 ರಲ್ಲಿ ಅಮೇರಿಕಾದ ಮಹಾನಾಯಕ  ವುಡ್ರೋ ವಿಲ್ಸನ್ ನಂತಹ ಮಹಾನ್ ನಾಯಕನ ಕನಸು ಅಂತರಾಷ್ಟ್ರೀಯ ಸಹಕಾರ ಶಾಂತಿ ಮತ್ತು ಭದ್ರತಾ ದೃಷ್ಟಿಯಿಂದ ಜನವರಿ  ಒಂದು 1920 ರಂದು ರಾಷ್ಟ ಸಂಘ ಸ್ಥಾಪನೆಯಾಯಿತು ಆದರೆ ಆದದ್ದಾದರೂ ಏನು ? ಸ್ಥಾಪನೆಗೆ ಮುನ್ನುಡಿ  ಬರೆದ ಅಮೇರಿಕಾ ಹೊರಗುಳಿದರೆ ರಾಷ್ಟ್ರ ಸಂಘ ಕೆಲವೇ ರಾಷ್ಟ್ರ ಗಳ ಸ್ವತ್ತಾಯಿತು, ತನ್ನದೇ ಆದ ಸೈನ್ಯ ವಿರಲಿಲ್ಲದ ಕಾರಣ ಮತ್ತು ಉದ್ದಟ ತನ ತೋರಿಸಿದ ಜರ್ಮನಿ ಮತ್ತು ಇಟಲಿಯಂತಹ ಸರ್ವಾಧಿಕಾರಿಗಳನ್ನು ಹತೋಟಿಗೆ ತಾರದೆ ಮತ್ತೊಂದು  ಜಾಗತಿಕ ಯುದ್ಧ ಕ್ಕೆ ಆಹ್ವಾನ ನೀಡಿದ್ದು ಈಗ ಇತಿಹಾಸ.  ಎರಡನೆಯ ಮಹಾಯುಧ್ಧದ ನಂತರ ಅಂದಿನ ಜಗತ್ತಿನ ಮಹಾನಾಯಕರಾದ ಎಫ್ ಡಿ  ರೂಸ್ ವೆಲ್ಟ ಮತ್ತು ಬ್ರಿಟನ್ ಪ್ರಧಾನಿ ಸರ್  ವಿನ್ ಸ್ಟನ್ ಚರ್ಚಿಲ್ ಶಾಂತಿ ಸ್ಥಾಪನೆಯ ಉದ್ದೇಶ ದಿಂದ 1941 ರಲ್ಲಿ ಅಟ್ಲಾಂಟಿಕ್ ಚಾರ್ಟರ್ ಘೋಷಿಸಿದರು, ನಂತರ ಅದಕ್ಕೆ ಯ.ಎಸ್ ಎಸ್ ಆರ್ ಅಧ್ಯಕ್ಷ ಸ್ಟಾಲಿನ್ ಬಂದು ಸೇರಿಕೊಂಡರು ಪರಿಣಾಮವಾಗಿ 1945 ಅಕ್ಟೋಬರ್ 24 ರಂದು ವಿಶ್ವ ಸಂಸ್ಥೆಯು ಸ್ಥಾಪನೆಯಾಯಿತು. ಆರಂಭದಲ್ಲಿ ಅದರ ಸದಸ್ಯರ  ಸಂಖ್ಯೆ  ಕೇವಲ 51,ಈಗ ಅಂದರೆ 2012 ಕ್ಕೆ ಅದರ ಸಂಖ್ಯೆ 193 ಕ್ಕೆ ಏರಿದೆ. ಅದರ ಧ್ಯೇಯೋದ್ಯಶಗಳನ್ನು ನೋಡಿ ದಾಗ ಯಾವುದೇ ದೇಶ ಸದಸ್ಯತ್ವ ದಿಂದ ಹೊರಗಳಿಯಲು ಸಾಧ್ಯವಿಲ್ಲ ಅದು ಜಗತ್ತಿನ ಶಾಂತಿ ಮತ್ತು ಭದ್ರತೆ ಕಾಪಾಡುವ,ರಾಷ್ಟ್ರ ರಾಷ್ಟ್ರ ಗಳ ನಡುವೆ ಸ್ನೇಹ ಸಂಬಂಧ ವೃದ್ಧಿಸುವ,ಜಗತ್ತಿನ ಜನರ ಜೀವನ ಮಟ್ಟ ಸುಧಾರಿಸುವ ಧ್ಯೇಯೋದ್ಯಶಗಳನ್ನು ಹೊಂದಿದೆ. ಆ ಕಾರಣಕ್ಕಾಗಿಯೆ  6 ಅಂಗಗಳನ್ನು ಹೊಂದಿದೆ. ಅಲ್ಲದೆ ಆರ್ಥಿಕ ಮತ್ತು ಸಾಮಾಜಿಕ  ಮಂಡಳಿಯಲ್ಲಿ ವಿಶೇಷ ಅಂಗಗಳನ್ನು ಹೊಂದಿದ್ದು ಅನೇಕ  ರಾಜಕೀಯ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುತ್ತಿದೆ ಇದು ಶ್ಲಾಘನೀಯ ವಿಷಯವೇ ಸರಿ ಆದರೆ ಈಗ ನಡೆಯುತ್ತಿರುವುದಾದರೂ ಏನು ? ಎಲ್ಲರೂ ಒಂದು ಸಾರಿ ಆ ಎರಡೂ ಮಹಾಯುದ್ಧದಿಂದಾದ ಪರಿಣಾಮಗಳನ್ನು ಅವಲೋಕಿಸುವುದು ಒಳ್ಳೆಯದು. ಒಂದನೆಯ ಮಹಾಯುಧ್ಧದಲ್ಲಿ  ಅಂದಾಜು10 ಮಿಲಿಯನ್ ಜನ ಮರಣ ಹೊಂದಿದರೆ 20 ಮಿಲಿಯನ್ ಜನ ಗಾಯಗೊಂಡರು ಅದೆ ಎರಡನೆಯ ಮಹಾಯುಧ್ಧದಲ್ಲಿ 25 ಮಿಲಿಯನ್ ಜನ ಮರಣ ಹೊಂದಿದರೆ  50 ಮಿಲಿಯನ್ ಜನ ಗಾಯಗೊಂಡಿದ್ದಾರೆ, ಆರ್ಥಿಕ ನಷ್ಟಕ್ಕೆ ಲೆಕ್ಕವಿಲ್ಲ ! ಸಾಮಾಜಿಕ ಪರಿಣಾಮವೂ ಅಷ್ಟೇ ಭಯಾನಕ ಆದಗ್ಯೂ ಜಗತ್ತನ್ನು ಮೂರನೆಯ ಮಹಾಯುಧ್ಧದ ಕಡೆ ನೂಕುತ್ತಿರುವದು ಎಷ್ಟು ಸರಿ ? ಮಹಾನ್ ನಾಯಕರು ಮುತ್ಸದ್ಧಿಗಳು ,ಚಿಂತಕರು ಒಂದು ಬಾರಿ ಯೋಚಿಸುವುದು ಒಳಿತು, ಅಂದರೆ ಸಮಸ್ಯೆಗೆ ಪರಿಹಾರ ಸಿಕ್ಕೆ ಸಿಕ್ಕುತ್ತದೆ, ಇಲ್ಲದೆ ಹೋದರೆ ನಾಲ್ಕನೇ ಮಹಾಯದ್ದದ ಅಸ್ತ್ರಗಳು ಕಲ್ಲು ಬಡಗಿಗಳು  ಆಗುವದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕಾಗಿ ನಾನು ಹೇಳಿದ್ದು ಸರ್ವ  ಸಮಸ್ಯೆ ಗಳಿಗೆ  ಇತಿಹಾಸ ಮದ್ದು ಎಂದದ್ದು ಇದಕ್ಕೆ ನೀವೆನಂತೀರಾ?

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...