Saturday, April 16, 2022

* ಮುಗ್ಧ *

ಹೇಳಿ ಕೇಳಿ ನಾನೊಬ್ಬ ಪೆದ್ದ
ಹೇಳುವರು ನೀನೊಬ್ಬ ಮುಗ್ಧ.
ಇದಕ್ಕೆ ನಾನೂ ಬದ್ದ. 
ಇದರಲ್ಲಿ ನನ್ನದೇನು ತಪ್ಪಿಲ್ಲ ಬಿಡಿ  ?  
" ಬುದ್ದ, ಹಂಗಂದ್ರ ನೀ ದಡ್ಡ ಅಂತ"  
ಖಂಡಿತವಾಗಿಯೂ ಹೌದು.
ಏಕೆ ಹೇಳಿ? ಜಾಣ ಎನ್ನಲು 
ಚನ್ನಾಗಿಯೇ ನಾಟಕ ಮಾಡಬೇಕು.
ಭಾಗಿಸಿ ವಿಭಾಗ ಮಾಡಬೇಕು.  
ನನಗೇನು ಬರತ್ತೇ ಹೇಳಿ ?  
ಇಲಿಗೆ ಹುಲಿ ಎನ್ನಲು ಬರಲ್ಲ. 
ಜಾಲಿ ಮರಕ್ಕೆ ಆಲದ ಮರ 
ಎನ್ನಲು ಬರಲ್ಲ .
ಖಾಲಿ ಜೈಕಾರ ಹಾಕಲು 
ಧ್ವನಿ ಬರಲ್ಲ 
ಸತ್ಯವೆಂಬ ಭೂತವನ್ನು 
ನಿತ್ಯ ಮಾತಿಗಂಟಿಸಿ 
ಹರಿಶ್ಚಂದ್ರ ನಂತೆ ನಡೆದದ್ದೇ ಬಂತು.
ಹೋಗುವದಾದರೂ ಎಲ್ಲಿಗೆ ?  
ಸುಡಗಾಡ...... ಅಲ್ಲವೆ ? 
ಹೀಗಾಗಿ ನಾನೊಬ್ಬ ಪೆದ್ದ ? 
ಯಾವಗಲೂ ನಿಯಮಗಳ ಪಾಲನೆ  
ನಮಗೆಲ್ಲಿದೆ ಪೋಷಣೆ !.
ಮುರಿದವನೆ ಜಾಣ 
ಪಾಲಿಸುವವನೆ ಕೋಣ !
ನಡೆದದ್ದೇ ನಡೆದದ್ದು 
ಮುಟ್ಟಿದೆನೇನು ದಡ !  
ಈಗ ನಿಯಮಗಳೆ ಅದಲು ಬದಲು 
ಮುರಿದ ನಿಯಮಗಳೆ 
ಈಗ ಸಕ್ರಮಗಳು.....
ಹೀಗಾಗಿ ನಾನೊಬ್ಬ ಮುಗ್ಧ !
ನನ್ನಂತೆ ಸಾವಿರ ಸಾವಿರ ಜನ  
ನಾವ್ಯಾರು ಜಾಣರಲ್ಲ, 
ಏಕೆ ಹೇಳಿ ? ಕಿವಿ ಕೇಳುವುದಿಲ್ಲ 
ಕೇಳಿದರೂ ಮಾತು ಬರಲ್ಲ, 
ಬಂದರೂ ನಾವು ಕೂಡಿ ಹೋಗುವುದಿಲ್ಲ 
ಹಾಗಾಗಿ ನಾವೆಲ್ಲಾ ಮುಗ್ಧರು !!!!!!

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...