Tuesday, June 28, 2022

ಎತ್ತಿನಮವಾಸ್ಯೆ

(ಮಣ್ಣು)ಎತ್ತಿನಮವಾಸ್ಯೆ

ಬಿತ್ತಿ ಬೆಳೆಯಲೆತ್ತಾಗಿ
ಸತ್ಯ ಕಾಮನ ಜೊತೆಯಾಗಿ !
ಕಷ್ಟದಲ್ಲಿ ಬಂಡಿ ಎಳೆದು
ಇಷ್ಟಗಳ ಖಂಡೆಯಾದೆ ದೊರೆಯೆ ! 
 
ನನ್ನ ಯೋಗಿ ನೀನಿಂದು 
ಸಣ್ಣ ಮಣ್ಣಿನ ದೇವರಾದೆ !
ನೀನಿತ್ತ ಅನ್ನ ನನ್ನವರಿಗೂ ಹಾಕಿ  
ನಾ ದಾನಿ, ನನಗದು ಹೊರೆಯೆ !

ಹತ್ತಿ ಹೊಡೆದೆ ಬಿತ್ತಿ ಬೆಳೆದೆ 
ಕತ್ತು ಬಾಗಿಸಿ ನೀ ದುಡಿದೆ /
ಕತ್ತು ಹಿಸುಕಿದರೂ ಸತ್ತು ಬದುಕಿದೆ
ಸಹಿಸಿ ಸಂತಸ ನೀಡದ್ದು ಮರೆಯೆ !

ಕಡೆಗಾಳು ನೀನುಂಡು 
ಹೆಡಗಿ ಗೊಬ್ಬರ ನೀಡಿ /
ಗುಡಿ ಗೋಪುರಕ್ಕಿಂತ 
ಮಿಗಿಲಾದೆ ದೊರೆಯೆ !

ಮಣ್ಣಲ್ಲಿ  ಮಣ್ಣಾಗಿ ಹೊನ್ನಾದೆ
ಕಣ್ಣು ಕಾಣದೆ ನಾ ನಿನ್ನ ಮಾರಿದೆ /
ನನ್ನ ವರೆ ಕನ್ನ ಹಾಕಿದರೆನ್ನ ಭಾವಕ್ಕೆ  
ಇನ್ನು ಮರೆತರಿಲ್ಲ ಕ್ಷಮೆ ಜಡ ದೇಹಕ್ಕೆ!

ನೀ ಮೆರೆದ ಊರೆ ಸ್ವರ್ಗ ದಾರಿ 
ನಾ ಮರೆತರೆ ಮನವೆ ನರಕದೇರಿ/
ನನ್ನ ನಾರಿತು ಪೂಜಿಸುತಲಿರುವೆ
ಬೆಳಕು ನೀಡಿದೆನ್ನ ಪರೋಪಕಾರಿ!

Wednesday, June 22, 2022

ನನಗೂ ಕಲಿಸು ಯೋಗ

* ನನಗೂ ಕಲಿಸು ಯೋಗ *

ನಾ ಕಲಿಯಬೇಕು ಮಗುವೆ.! 
ನಗುತ ಬಾಳುವ,ನೊಗವ ಎಳೆವ
ಜಗದೊಳಗೆ ಬಾಗುವ  
ಮಗ್ದ ನಿನ್ನ ಯೋಗ ಭಾವ.!!

ನಾಳೆಗಳ ಸಂತೆ ನಿನಗಿಲ್ಲ ಚಿಂತೆ
ನಳಿನಳಿಸುವ ನೀ ಪುಷ್ಪದಂತೆ
ಬೆಳಕು ನೀಡುವ ದೀಪದಂತೆ 
ಮಳೆ ನೀಡುವ ಮೋಡದಂತೆ !!

ಹರನ ಮರೆತು ತಿರುಗಿತು ಚಿತ್ತ 
ಹರಿಯಿತು ಲೋಭ ಸಂಸಾರದ ಸುತ್ತ
ಮರಳಿ ಬರುವುದೇನು ಇವತ್ತ
ಕೆರಳಿಸಬೇಡ ಮೋಹ ಮತ್ತೆ !!
  
ಮೇಲೆ ಬರಲು ತಿರುಗಿದೆ 
ಮಾಲೆಗಳ ಸುತ್ತ ಮುತ್ತ.
ನೆಲದ ಮೇಲಿರಲಿಲ್ಲ ಚಿತ್ತ
ಮೈಮೇಲೆಳದು ನಾನು ಸತ್ತೆ.!!

ನಿಸ್ವಾರ್ಥ ನಿಗರ್ವ ನಿಶ್ಚಲ
ನೀ ನೀಡುವ ಸಂದೇಶ 
ನನಗಲ್ಲದೆ ಇನ್ನಾರಿಗೆ ಮತ್ತೆ ? 
ಬರಿ ಕೂಡಿ ಕಳೆದೆ ದಿನನಿತ್ಯ !!

ನನಗೂ ಕಲಿಸಬಾರದೆ 
ನಿನ್ನ ನಿಷ್ಕಲ್ಮಶ ಭಾವ
ನಿನಗೆ ಸರಿ ಸಮವಿಲ್ಲ 
ಇರುವನೇನು ಬೇರೆ  ದೇವ !!

ಧ್ಯಾನದಲ್ಲಿ ಮೌನ ಗಾನ 
ದಾನವನು ತಿಳಿದಾಗ ಅಭಿಯಾನ 
ತಿಳಿದು ಮಾಡಿದರೆ ಯೋಗ 
ಅರಿಯದೆ ಮಾಡಿದರೆ ರೋಗ !!

Monday, June 13, 2022

ಕೃಷಿಗೆ ಸಂಬಂಧಿಸಿದ ಕವನ

ಅಖಿಲ ಭಾರತೀಯಸಾಹಿತ್ಯ ಪರಿಷತ್ತು ರಾಣಿಬೆನ್ನೂರು ಘಟಕ ನಡೆಸುತ್ತಿರುವ ಕವನ ರಚನೆನಡೆಸುತ್ತಿರುವ
ಕೃಷಿಗೆ ಸಂಬಂಧಿಸಿದ ಕವನ 

* ಮರೆಯಾದ ಮಳೆ

ರೋಹಿಣಿ ಮಳೆ ಬಂತು 
ಮೋಹದ ಸಿರಿ ತಂತು 
ಹಿಗ್ಗಿ ದುಡಿದಾನ ರೈತ ನಿಂತು !

ಕಾಯ ಹಣ್ಣಾಗಿ  
ಮಣ್ಣು ಮೃದುವಾಗಿ  
ಧರೆಯೇ ಅನ್ನವಾಯಿತು
ಬೆಳದಾನ ಅಣ್ಣ ಅಕ್ಕಿ !!

ಬಗ್ಗಿದ ಬಾಳು  ಎಗ್ಗಿಲ್ಲದ ಗೋಳುi
ಸುಗ್ಗಿಯ ಕನಸು ಸೆರಗಲಿ ಇಟ್ಟು 
ಒಗ್ಗದ ಮೃಗಶಿರ ಸರದಾನ ಮರೆಯಾಗಿ 
ಅತ್ತಾನ ನಮ್ಮ  ರೈತ ಬಿಕ್ಕಿ! ಬಿಕ್ಕಿ!

ಬೆವರಿನ ಬೆಲೆ ಕಟ್ಟುವರೇನು 
ಇಟ್ಟಾರೊ ನೆಲದಾಗ ಶಾಸಕ್ಕಿ !!
ಬಲಭೀಮನಾಂಗ ದೇಹ,
ಜನರ ಉದರ ತುಂಬ್ಯಾನ ಅವಲಕ್ಕಿ!!

ಸಗಣಿ ಗೊಬ್ಬರಕ ಸುಗುಣ ಗೊರಕಿ
ಖಾಲಿ ಗೆಣುದ್ದು ಲಂಗೂಟಿ ಹಾಕಿ
ಗಾಲಿಗಳ ಮೇಲೆ ತಿರುಗಿದರ ಜ್ವಾಕಿ
ಸಂಸಾರಕ ಸಾಲ ಮಾಡತಿದಿ ಮಿಕ್ಕಿ!!

ದನಕರ ಕಟ್ಟಿ ದಿನಕರನಾಗಬೇಕು
ದೊರೆತನ ಬರತೈತಿ ದಿನ ಮೆತ್ತಿ   
ಸರತಿಯ ಸಾಲಿನಾಗ ನಿಂತು 
ಸೊರಗಿ ಸಾಯೋದು ತಪ್ಪತೈತಿ!!

ಬೀಜದ ಒಡೆತನದ ಬೋಜಾ ಕಸಿದು
ಬಾಗಿಸಿ ಬಡದಾರ ಕರಮುಚ್ಚಿ 
ಅನ್ನ ನೀಡಿದರೂ ತನ್ನವರೆ ಇಲ್ಲ  
ಇನ್ನೇಷ್ಟು ದಿನ ಗ್ರಹಣ ಹಿಡಿತೈತಿ!!

ಶ್ರೀ ಬಸyನಗೌಡ ಗೌಡರ ಉಪನ್ಯಾಸಕರು
ಬಾಲಕರಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ 
ಜಿಲ್ಲಾ:ಬಾಗಲಕೋಟೆ?t

Sunday, June 12, 2022

" ಕಷ್ಟಗಳೆ ಇಷ್ಟ"


 
ಇಷ್ಟಗಳ ಮುಟ್ಟಲು
ಕಷ್ಟಗಳೆ ಮೆಟ್ಟಿಲು
 
ದಾರಿ ಬಹು ದೂರ 
ಏರಬೇಕು ನೀ ವೀರ 
ತಳಮಳವು ಸಹಜ 
ತಾಳ್ಮೆ ಯೊಂದೆ ಅಸ್ತ್ರ 

ತವಕವು ಉಂಟು. 
ವಿವೇಕದೊಂದಿಗಿರಲಿ ನಂಟು
ಕಾಗೆಗಳು ಕರೆಯುವವು ಕೆಳಗೆ 
ನೀಡುವವು ಹೋಳಿಗೆ. 

ಮೂರು ದಿನದ ಬುತ್ತಿ 
ನೂರು ದಿನಕಿವರ ಚಿತ್ತ 
ಹತ್ತುವಾಗ ಕಾಣುವೆ 
ಭರವಸೆಯ ಹತ್ಯೆ  

ಕಳೆದುಕೊಳ್ಳದೆ ಏರಬೇಕು ನೀ ನಿತ್ಯ 
ಕೆಡುವವರು ಉಂಟು 
ಗಡಿ ದಾಟುವವರೆಗೆ
ಹಿಡಿ ಗಟ್ಟಿ ಅದೆ ಸತ್ಯ.

Monday, June 6, 2022

* ಸ್ವಾರ್ಥದ ಗಾಡಿ *

ಓಡುತಿದೆ ನರನ ಸ್ವಾರ್ಥ ಬಂಡಿ
ಕಡಿಯಬೇಡಿ ಪರಿಸರದ ಕೊಂಡಿ

ಮರಗಳ ಮಾರಣ ಹೋಮ
ಬರದುರಿಗೆ ಬಿರಿಯಿತು ಸತ್ವ ನೆಲ
ಕರವೆ ಕರ್ಮದ ಕಹಿ ಮೂಲ 
ಅರಿತರೆ ಅಣು ಅಣು ಅಮೃತ ಜಲ!

ನಿನ್ನದೆ ಕರ ತಂದಿದೆ ಬರ ಒಂದು ಕಡೆ, 
ನಾಕ ಕಟ್ಟಿದೆ ಇನ್ನೊಂದು ಕಡೆ  
ಖರೀದಿಸದೆ ಕಂಡಿದೆ ಮುನ್ನುಡಿ
ಹಣೆಬರಹ ಬರೆದಿದೆ ನೀ ಪಡೆ

ಹಸಿರು ಉಳಿದರೆ ಉಸಿರಿನ ಕಳೆ 
ಹಕ್ಕಿ ಪಕ್ಕಿಗಳ ಬರುವದು ಗುಳೆ !
ಹರಸಾಹಸ ಬಿಡು ಬರಿ ಗೊಳು
ಹರಸುವಳು ಭೂರಮೆ ತಾಳು !

ಬೇಗ ಬೆಳೆಯಲು ಬೆಟ್ಟ ಮಾರಣ
ಕಟ್ಟಡವೆ ಇವರ ನೆಮ್ಮದಿ ಭವನ.
ಕಾಣಬಹುದೆ ಸಂತಸದ ಜೀವನ
ಕತ್ತರಿಸಬೇಕು ಕನಸಿನ ಬ್ರಮಣ !

ನಂಬಿ ನಡೆದರೆ ಸಿಗುವುದಂಬಲಿ  
ನಂಬದಿರೆ ಪರಿಸರದಲ್ಲಿ ನೀ ನರಬಲಿ
ತುಂಬಬೇಕು ವೈಚಾರಿಕ ನೆಲೆ
ಕರದಲೆ ಕಾಣುವೆ ಸ್ವರ್ಗವೆ ಇಳೆ !  
  

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...