Friday, July 15, 2022

" ದೇಗುಲಕೆ ಸ್ವಾಗತ "


ಸ್ವಾಗತವು ತಮಗೆ ಹರುಷವು ನಮಗೆ  
ಸುಜನರು ಕಟ್ಟಿದ ಶಾರದೆಯ ಮಂದಿರಕೆ
ಜ್ಞಾನದ ಹಸಿವೊಂದೆ ಸಾಕು ಇತಿಹಾಸ ನಿಮಗೆ/ 

ಗುಡ್ಡದ ಬಯಲಲ್ಲಿ ದೊಡ್ಡವರು ಕಟ್ಟಿದ
ದೊಡ್ಡ ಮಂದಿರವಿದು, ದುಡ್ಡು ದುಗ್ಗಾನಿ ಇಲ್ಲ.
ದಡ್ಡತನವಳಿಯಲು ಬಗ್ಗಿ ಬನ್ನಿ ಸ್ವಾಗತವು ತಮಗೆ/ 

ಪುರಸಭೆಯ ಅಡಿಯ ಪುರಜನರ ಹರಕೆ 
ವರವಾಗಿ ಬೆಳದಿದೆ ಗುಳೇಬಂದವರಿಂದ  
ಹೆಮ್ಮರ ನೋಡುವುದೆ ನಮಗೆಲ್ಲ ಚಂದ/

ಹತ್ತು ಹಳ್ಳಿಯ ಜ್ಞಾನದ ಹಸಿವು 
ಒಪ್ಪತ್ತೇಶ್ವರನ ಮಠದ ಬಾಗಿಲಿಗೆ ತಾಕಿ
ಬಿತ್ತು ದಾನ ಜೋಳಿಗೆಯ ಬುತ್ತಿಯಾಗಿ 

ನೇಕಾರ, ಕೂಲಿ ಚಾಕರಿಯ ಮಗನಿಗೂ
ಆಕಾರ ಮಾಡಿದ ಗುರಕುಲವೆ ಇಲ್ಲಿದೆ
ಸಾಕಾರ ತೋರುವುದು ಜಗಕೆ ಬೆಳಕಾಗಿ/

ಶತಮಾನ ಕಂಡು ಗತವೈಭವ ಸಾರುವ
ಹಿತವಾದ ಶಾಲೆಯ ಕಥೆ ಕೇಳುವ ಬನ್ನಿ
ಪ್ರೌಢಶಾಲೆಯುಂಟು ಪದವಿಯೂ ಉಂಟು/

ನಡೆದಷ್ಟು ದಾರಿಯಲ್ಲಿ ಪಡೆದಷ್ಟು ಭಾಗ್ಯ.          ಪಡೆಯದವನೆ ಇಲ್ಲಿ ಮಹಾ ಕೋಡಿ  
ಪಡೆಯ ಬಾರೊ ಗುರುಗಳು ಮಾಡವರು ಮೋಡಿ/

ನಿತ್ಯ ಸಾವಿರ ಮಕ್ಕಳೋದುವ ಮಂದಿರ
ಎತ್ತರೆತ್ತರೆಕೆ  ಬೆಳದು ಸತ್ಯವರುಹಲು ನಿಂತಿದೆ 
ಕತ್ತು ಬಾಗಿಸಿ ಕರಮುಗಿದು ಬಾ ಸ್ವಾಗತವು ನಿಮಗೆ !

ಇಂದು ದಿನಾಂಕ 16.07.2022 ರಂದು ನಮ್ಮ ಹೆಮ್ಮೆಯ ಬಾಲಕರ ಸರಕಾರಿ  ಪದವಿ ಪೂರ್ವ ಕಾಲೇಜು ಗುಳೇದಗುಡ್ಡದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ಪಿಯಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭ ಸರ್ವ ಶಿಕ್ಷಣಾಭಿಮಾನಿಗಳಿಗೆ ಹಾರ್ದಿಕ ಸುಸ್ವಾಗತ 🙏🙏

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...