Sunday, July 31, 2022

* ಕಾಯಬೇಕು ಕಲೆಗಾರನಿಗೆ *



ಕೆರಳಿಸುವ ಕಾರ್ಯಗಳಿಗೆ 
ಮರುಕಳಿಸುವದು ಇರುಳೊಮ್ಮೆ 
ಬರಿ ಅದು ನಟನೆಯ ಉರುಳು 
ಸರದಿಯಲ್ಲಿರು ಇಡಬೇಡ ಕೊರಳು!!

ನೆರಳಲ್ಲಿ ಛತ್ರಿ ಹಿಡಿಯುವರು
ಬಿರು ಗಾಳಿಗೆ ಚಾಮರ ಬೀಸುವರು
ಬಿರುಬಿಸಿಲನಲ್ಲಿ ಬೆಂಕಿ ಹೊತ್ತಿಸುವರು
ಬರಗಾಲದಲ್ಲೂ ಆಗಬೇಡ ಮರಳು

ಮೂಗಿಗೆ ಸವರುವರು ತುಪ್ಪ
ಕೆರಳಿಸಲು ಹಚ್ಚುವರು ಉಪ್ಪು
ಕಾಯಬೇಕು ತಮ್ಮ ಕಪ್ಪಾಗುವವರಿಗೆ
ಕಾಯದೆ ಸಿಗದು ನಿಮಗೆ ಉಪ್ಪರಿಗೆ!!

ಅಲ್ಲಲ್ಲಿ ಸಿಗಬಹುದು ಅರಳಿಸುವ
ಕಲೆಗಾರರು ಇಟ್ಟಿರುವರು ಇರುಳಲ್ಲಿ
ತಗೆಯಬೇಕು ತಮ್ಮ  ಪರದೆಯೊಮ್ಮೆ
ಸರದಿ ಬಂದಾಗ ಮರೆಯದೆ ಬರುವರು!!

ಬಾಜಾ ಬಜಂತ್ರಿ ಕೇಳುವವರಲ್ಲ
ಗಾಜಿನ ಮನೆ ಬಯಸಿದವರಲ್ಲ 
ಕೋಜಾಗಳ ಜಾತಕ ಬಲ್ಲವರಿವರೆಲ್ಲ
ಕಲ್ಲು ಅರಳಿಸುವ ಕಲೆಗಾರರಿವರೆಲ್ಲ!!

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...