ದಿನಾಂಕ 31.07 2022 ರಂದು ಶ್ರೀ ಜಗದ್ಗುರ ಗುರುಸಿದ್ದೇಶ್ವರ ಬ್ರಹನ್ಮಠ ಗುಳೇದಗುಡ್ಡ ದಲ್ಲಿ ನನಗೆ ಲಘು ಉಪನ್ಯಾಸ ಮಾಡುವ ಅವಕಾಶವನ್ನು ಶ್ರೀ ಮಠ ಅವಕಾಶ ಮಾಡಿಕೊಟ್ಟಿತ್ತು ಅದಕ್ಕೆ ಸ್ನೇಹಿತ ಸಹಾಯಕ ಪ್ರಾಧ್ಯಾtrಪಕ ಶ್ರೀ ಚಂದ್ರಶೇಖರ ಹೆಗಡೆ ಮುಖ್ಯ ಕಾರಣ. ಉಪನ್ಯಾಸ ಮುಗಿದ ಮೇಲೆ ಶ್ರೀ ಜಗದ್ಗುರು ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳು ಶ್ರಾವಣ ಮಾಸದ ಈ ಲಘ ಉಪನ್ಯಾಸಗಳನ್ನ ಕೃತಿ ರೂಪದಲ್ಲಿ ಏಕೆ ತರಬಾರದು ಎಂದು ಚಂದ್ರಶೇಖರ ಹೆಗಡೆಯವರಿಗೆ ಕೃತಿಯ ರೂಪದಲ್ಲಿ ತರುವ ಜವಾಬ್ದಾರಿ ವಹಿಸಿದ ಪ್ರಯುಕ್ತ ನನ್ನ ಲಘು ಉಪನ್ಯಾಸವನ್ನು ಬರೆದು ಅವರಿಗೆ ಕಳುಹಿಸಿ.ಅದನ್ನು ಹಿತೈಸಿಗಳ ಮುಂದೆಯೂ ಇಡಬಯಿಸುತ್ತಿದ್ದೇನೆ.
ವಿಷಯ: ಐತಿಹಾಸಿಕ ಭಕ್ತಿ ಚಳುವಳಿಗಳು
ನಿಸರ್ಗದ ವಿಸ್ಮಯಗಳಿಗೆ ಹೆದರಿದ ಮಾನವ ಅವುಗಳನ್ನು ಅರಿಯಲು ಮತ್ತು ಅವುಗಳಿಂದ ತಮಗೇನು ತೊಂದರೆಯಾಗ ಬಾರದೆಂದು ಅಗೋಚರ ಶಕ್ತಿ ಗಳನ್ನು ಆರಾಧಿಸಲು ಧರ್ಮ ಮತ್ತು ದೇವರುಗಳನ್ನು ಹುಟ್ಟು ಹಾಕಿದ ಇನ್ನು ಭಾರತಕ್ಕೆ ಬರುವುದಾದರೆ ಭಾರತದ ಧರ್ಮದ ಬೇರುಗಳನ್ನು ಸಿಂಧೂ ನಾಗರಿಕತೆ ಮತ್ತು ವೈದಿಕ ಕಾಲದಲ್ಲಿ ಕಾಣುತ್ತೇವೆ .ಋಗ್ವೇದ ಕಾಲದಲ್ಲಿ ಪ್ರಕೃತಿ ದೇವರುಗಳನ್ನು ಸಂತೃಪ್ತಿ ಪಡಿಸಲು ಋಕ್ಕುಗಳನ್ನು ಬರೆದು ರಾಗಬದ್ದವಾಗಿ ಹಾಡುತ್ತಿದ್ದರು.ಅವುಗಳ ಮುಖ್ಯ ಉದ್ದೇಶವೇ ದೇವರನ್ನು ಸಂತೃಪ್ತಿಪಡಿಸುವುದು ಮತ್ತು ಮೋಕ್ಷ ಸಾಧನೆ. ಅದು ಅವರ ಪರಮ ಗುರಿಯಾಗಿತ್ತು .ಸನಾತನ ಧರ್ಮದಲ್ಲಿ ಮೋಕ್ಷ ಸಾಧನೆಗೆ ಜ್ಞಾನ ಮಾರ್ಗ, ಕರ್ಮ ಮಾರ್ಗ, ಭಕ್ತಿ ಮಾರ್ಗ ಹೇಳಿದ್ದಾರೆ.ಅದರಲ್ಲಿ ಭಕ್ತಿ ಮಾರ್ಗವು ಪಾಮರರೂ ಕೂಡಾ ಮೋಕ್ಷ ಪಡೆಯಲು ಇರಬಹುದಾದ ಬಹು ಸುಲಭ ಮಾರ್ಗವಾಗಿದೆ.ಭಕ್ತಿ ಎಂದರೆ ಭಗವಂತನಲ್ಲಿ ಅಚಲವಾದ ನಂಬಿಗೆ ಇಡುವುದು ಎಂದರ್ಥ. ಪರಿಶುದ್ಧವಾದ ಭಕ್ತಿಯಿಂದ ದೇವರಲ್ಲಿ ಶರಣಾದರೆ ಭಗವಂತನ ಸ್ವರೂಪ ಸಾಕ್ಷಾತ್ಕಾರವಾಗುತ್ತದೆ ಇದನ್ನೆ ಮೋಕ್ಷ ಎನ್ನುವುರು. ಆದರೆ ಉತ್ತರ ವೇದ ಕಾಲದಲ್ಲಿ ಪುರೋಹಿತರ ಸ್ವಾರ್ಥದ ಪರಿಣಾಮವಾಗಿ ಜನಸಾಮಾನ್ಯರು ಅವುಗಳ ಬಗ್ಗೆ ಪ್ರೀತಿಯನ್ನು ಕಳೆದುಕೊಳ್ಳುವಂತಾಯಿತು . ಫಲಶೃತಿಯಾಗಿ ಹೊಸ ಧರ್ಮಗಳು ಉದಯಿಸಿದವು ತದನಂತರ ವೈದಿಕ ಧರ್ಮ ತನ್ನ ಮಹತ್ವವನ್ನು ಕಳೆದುಕೊಳ್ಳಬೇಕಾಯಿತು ಕಾಲಾನಂತರದಲ್ಲಿ ಅದರ ಪುನರುತ್ಥಾನ ಮಾಡಿದವರು ಗುಪ್ತರು. ಆದರೆ ಮತ್ತೆ ಹಿಂದೂ ಧರ್ಮಕ್ಕೆ ಹಿನ್ನಡೆಯಾಗುವ ಸನ್ನಿವೇಶ ಸೃಷ್ಟಿಯಾಯಿತು ಅದಕ್ಕೆ ಕಾರಣ ಅರಬ್ ನಾಡಿಲ್ಲಿ ಜನಿಸಿ ಪೂರ್ವದ ದೇಶದಲ್ಲಿ ಪ್ರಚಾರಕ್ಕೆ ಆಗಮಿಸಿದ ಇಸ್ಲಾಮಿಕ್ ಪ್ರಚಾರಕರು. ಇನ್ನೊಂದು ಕಾರಣ ಹಿಂದೂ ಧರ್ಮದಲ್ಲಿ ಸೇರುತ್ತಿರವ ಕೆಲವೊಂದು ಅನಿಷ್ಟ ಪದ್ದತಿಗಳು.ಇಂಥಹ ಸಂದರ್ಭದಲ್ಲಿ ಹಿಂದೂ ಧರ್ಮಕ್ಕೆ ನವ ಚೈತನ್ಯ ನೀಡಲು ಹಾಗೂ ಹಿಂದೂ ಮುಸ್ಲಿಂ ಐಕ್ಯತೆ ಸಾಧಿಸಲು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಂದೋಲನ ರೂಪದಲ್ಲಿ ಭಕ್ತಿ ಚಳುವಳಿ ಪ್ರಾರಂಭವಾದವು. ಆಚಾರ್ಯತ್ರಯರು ,ಆಳ್ವಾರರು, ನಾಯಿನಾರರು . ಆ ಧಾರ್ಮಿಕ ಆಂದೋಲನಕ್ಕೆ ಮೊದಲ್ಗೊಂಡರು ಅದರಲ್ಲಿ ನಾವು ಮೊದಲು ನೋಡುವುದು ಶಂಕರಾಚಾರ್ಯರನ್ನು ಅವರು ಅದ್ವೈತ ಸಿದ್ಧಾಂತ ಬೋಧಿಸಿದರು ಅದ್ವೈತ ಎಂದರೆ ಎರಡಲ್ಲದ್ದು ಅಂದರೆ ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ ಅಲ್ಲ ಎರಡೂ ಒಂದೇ. ನನ್ನಲ್ಲಿ ಆತ್ಮ ಇದೆ ಅಂದರೆ ದೇವರು ನನ್ನ ಹತ್ತಿರ ಇದ್ದಾನೆ ಅಂತಾ... ಅಂದರೆ ದೇವರೂ ನನ್ನಲ್ಲಿ ಇರುವದರಿಂದ ನಾನೇ ದೇವರು "ಅಹಂ ಬ್ರಹ್ಮಾಸ್ಮಿ " ಎಂದರು.ಜಗತ್ತು ಮಾಯೆ (ಮಿತ್ಯ ದೇವರು ಮಾತ್ರ ಸತ್ಯ ಎಂದರು)ಮೋಕ್ಷ ಸಾಧನೆಗೆ ಜ್ಞಾನ ಮಾರ್ಗ ಬೋಧಿಸಿದರು .ಆದರೆ ರಾಮಾನುಜರು ಶಂಕರಾಚಾರ್ಯರ ಮಾಯಾವಾದ ಖಂಡಿಸಿ ವಿಶಿಷ್ಠಾದ್ವೈತ ಬೋಧಿಸಿ ವಿಷ್ಣು ಮತ್ತು ಲಕ್ಷ್ಮಿ ಯನ್ನು ಆರಾಧಿಸಲು ಹೇಳಿದರು ಮತ್ತು ಅಸ್ಪೃಶ್ಯರೂ ಮೋಕ್ಷಕ್ಕೆ ಅರ್ಹರೆಂದು ಅವರನ್ನೂ "ತಿರುಕುಲತ್ತರ್" ಎಂದರು ರಾಮಾನುಜಾಚಾರ್ಯರು ಮೋಕ್ಷಕ್ಕೆ ಭಕ್ತಿ ಮಾರ್ಗ ತೋರಿದರು. ಭಕ್ತಿ ಮಾರ್ಗ ಪಾಮರನೂ ಕೂಡಾ ಮೋಕ್ಷ ಪಡೆಯಲು ಅತ್ಯಂತ ಸುಲಭ ಮಾರ್ಗ ಅದಕ್ಕಾಗಿ ಅವರು ಗುರುವಿಗೆ ಶರಣಾಗತಿ ಭಕ್ತಿ ಮಾರ್ಗ ವನ್ನು ಭೋಧಿಸಿದರು.ಇನ್ನು ಮಧ್ವಾಚಾರ್ಯರು ದೈತ ಸಿದ್ದಾಂತ ಬೋಧಿಸಿದರು ಇಲ್ಲಿ ಅವರು. ಮೂರು ಪ್ರಧಾನ ಅಂಶಗಳನ್ನು ತಿಳಸುತ್ತಾರೆ ಅವುಗಳೆಂದರೆ ಪರಮಾತ್ಮ, ಆತ್ಮ, ಜಡ. ಆತ್ಮ ಮತ್ತು ಜಡ ಪರಮಾತ್ಮ ನಿಗೆ ಅದೀನ ಎಂದರು. ಅಂದರೆ ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ, ಇದನ್ನೆ ದೈತ ಎನ್ನುತ್ತಾರೆ. ಸಿದ್ಧಾಂತ ಪ್ರಚುರ ಪಡಿಸಲು ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದ್ದಾರೆ ಮತ್ತು ಮೂರು ಪ್ರಧಾನ ಅಂಶಗಳಲ್ಲಿ ಐದು ಭೇಧಗಳನ್ನು ಗುರುತಿಸುತ್ತಾರೆ.ಹೀಗೆ ದಕ್ಷಿಣ ಭಾರತದಲ್ಲಿ ಉದಯವಾದ ಧಾರ್ಮಿಕ ಆಂದೋಲನವನ್ನು ಉತ್ತರ ಭಾರತದಲ್ಲಿ ಜನಪ್ರಿಯ ಗೊಳಿಸಿದವರೆ ರಮಾನಂದರು ಇವರು ಧರ್ಮ ಪ್ರಚಾರಕ್ಕೆ ಸಂಸ್ಕೃತದ ಬದಲಾಗಿ ಹಿಂದಿಯನ್ನು ಬಳಸಿದರು ಹಾಗಾಗಿ ಉತ್ತರ ಭಾರತದಲ್ಲಿ ಬಹುಬೇಗ ಹರಡಿತು.ಮೋಕ್ಷಕ್ಕೆ ದೇವರು ತನ್ನ ಪೂಜಕನ ಜಾತಿ ಯಾವುದೆಂದು ಎಣಿಸುವುದಿಲ್ಲ ಪೂಜಿ ಸಲ್ಲಿಸುವವನ ಪ್ರೀತಿಯನ್ನು ಮಾತ್ರ ಬಯಸುತ್ತಾನೆ ಎಂದರು. ಅಲ್ಲದೆ ಮಾನವ ಸಮಾನತೆ,ಲಿಂಗ ಮಾನತೆ ಬೋಧಿಸಿದರು. ಇವರ ಶಿಷ್ಯ ರಾದ ಕಬೀರ್ ನಂತರ ಬಂದ ಗುರುನಾನಕರು ಚೈತನ್ಯರು ಮೀರಾಬಾಯಿ ಹಿಂದೂ ಧರ್ಮ ಕ್ಕೆ ಚೈತನ್ಯ ನೀಡಲು ಶ್ರಮಿಸಿದರು ವಿಶೇಷವಾಗಿ ಕಬೀರರು ಹಿಂದೂ ಮುಸ್ಲಿಂ ಏಕತೆಯನ್ನು ಬಯಸಿದ ಮೊದಲ ಸಂತರು.ಮೂರ್ತಿ ಪೂಜೆ ಖಂಡಿಸಿದರು ತೀರ್ಥ ಯಾತ್ರೆ, ಪವಿತ್ರ ಸ್ನಾನ ಅಥವಾ ಜೋರಾಗಿ ಪ್ರಾರ್ಥಿಸುವದರಿಂದ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದರು.ಗುರುನಾನಕರು ಹಿಂದೂ-ಮುಸ್ಲಿಂ ರ ತಪ್ಪು ತಿಳುವಳಿಕೆಗಳೆ ಘರ್ಷಣೆಗೆ ಕಾಣವೆಂದರು.ಇನ್ನು ಭಾರತದ ಪೂರ್ವ ಭಾಗದಲ್ಲಿ ಆಧುನಿಕ ವೈಷ್ಣವ ಪಂಥ ಸ್ಥಾಪಿಸಿ ಮೋಕ್ಷಕ್ಕೆ ರಾಗ ಉತ್ತಮ ಮಾರ್ಗ ವೆಂದು ಬೋಧಿಸಿದರು.ಮಧ್ಯಕಾಲೀನ ಭಾರತದಲ್ಲಿ ಇಸ್ಲಾಮ್ ಧರ್ಮದ ಪ್ರಭಾವದಿಂದ ಸೂಫಿ ಪಂಥ ಉದಯಿಸಿತು ಇವರು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅನೇಕ ಆಚರಣೆಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸಮಾನತೆ, ಲಿಂಗ ಸಮಾನತೆ,ಧಾರ್ಮಿಕ ಸಾಮರಸ್ಯ ತರಲು ಪ್ರಯತ್ನಿಸಿದರು.
ಇಂದಿನ ಸಂಕಷ್ಟ ಕಾಲದಲ್ಲಿ ಭಕ್ತಿ ಪಂಥದ ಚಳುವಳಿಗಳ ಆದರ್ಶ, ಚಿಂತನೆಗಳು ಮಾನವ ಕುಲದ ಉಳಿವು ಮತ್ತು ಬೆಳವಣಿಗೆಗೆ ಅತ್ಯವಶ್ಯಕವಾಗಿವೆ.
No comments:
Post a Comment