Tuesday, October 4, 2022

ಅಂತರಾಷ್ಟ್ರೀಯ ಶಿಕ್ಷಕರ ದಿನಾಚರಣೆ

ಇಂದು ಅಕ್ಟೋಬರ್ ಐದು, ಜಾಗತಿಕ (ಅಂತಾರಾಷ್ಟ್ರೀಯ) ಶಿಕ್ಷಕರ ದಿನಾಚರಣೆ, ಶಿಕ್ಷಕರ ಸಮುದಾಯದ ಪ್ರತಿಯೊಬ್ಬ ಶಿಕ್ಷಕನಿಗೂ ಹೃದಯಪೂರ್ವಕ ಹಾರ್ದಿಕ ಸುಭಾಶಯಗಳು, ಸೆಪ್ಟೆಂಬರ 5 ,ಭಾರತದದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ರ ಜಯಂತಿಯನ್ನು  ಶಿಕ್ಷಕರ ದಿನಾಚರಣೆ ಎಂದು ಆಚರಿಸಿದ್ದೇವೆ . ಹಾಗೆಯೇ ವಿಶ್ವಸಂಸ್ಥೆಯ UNESCO ಸಂಸ್ಥೆಯು ಶಿಕ್ಷಕರನ್ನು ಸ್ಮರಿಸುವ ಸಲುವಾಗಿ ಅಕ್ಟೋಬರ್ 5,  ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಘೋಷಣೆ ಮಾಡಿದೆ. 1994 ಅಕ್ಟೋಬರ್ 5 ರಿಂದ ಇದು ಪ್ರತಿವರ್ಷ ಆಚರಿಲ್ಪಡುತ್ತಿದೆ.ಅದು ಪ್ರತಿ ವರ್ಷವೂ ಒಂದೊಂದು ಧ್ಯೇಯ ದೊಂದಿಗೆ ಶಿಕ್ಷಕರನ್ನು ಗೌರವಿಸುವ ಕಾರ್ಯ ಮಾಡುತ್ತಿದೆ. 2017 ನೇ ವರ್ಷ ಶಿಕ್ಷಕರನ್ನು ಸಶಕ್ತೀಕರಣ ಮಾಡುವ ಧ್ಯೇಯ ವಿಟ್ಟುಕೊಂಡಿದ್ದರೆ 2018 ರ ಘೋಷಣೆ , "ಶಿಕ್ಷಣದ ಹಕ್ಕುಎಂದರೆ ಅರ್ಹ ಶಿಕ್ಷಕರನ್ನು ಹೊಂದುವ ಹಕ್ಕು" ಎಂದು ಘೋಷಿಸಿದೆ ಇದಕ್ಕೆ ಕಾರಣ 1948 ಮಾನವನ ಹಕ್ಕುಗಳ ಘೋಷಣೆಯ 70 ನೇ ವರ್ಷದ ಆಚರಣೆಯ ನಡೆಯಿತು  ಅದರ ಫಲವೆ ಅರ್ಹ ಶಿಕ್ಷಕರನ್ನು ಹೊಂದುವ ಧ್ಯೇಯ. ಅಂದರೆ ಅರ್ಹತೆ ಹೊಂದಿದ ಶಿಕ್ಷಕರ ಲಭ್ಯತೆ ಇಲ್ಲದೆ ಶಿಕ್ಷಣದ ಹಕ್ಕು  ಪರಿಪೂರ್ಣ ವಾಗಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ಎನ್ನುವುದು ಸ್ಪಷ್ಟ. ಹಾಗಾಗಿ ಸರಕಾರಗಳು ಅರ್ಹತೆ ಹೊಂದಿದ ಶಿಕ್ಷಕರ ನೇಮಕಾತಿಗೆ ಹೋರಾಡುತ್ತಿರುವದು ಮತ್ತು ಅವರ ತರಬೇತಿಗೆ ಲಕ್ಷಾಂತರ ಹಣ ವ್ಯಯ ಮಾಡಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಯಾಗಿ ತಯಾರು ಮಾಡುತ್ತಿರುವುದು. ಅಲ್ಲದೆ ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರೆಸಲು ಪ್ರಯತ್ನ ನಡೆಯುತ್ತಿದೆ ಕೂಡಾ .ಶಿಕ್ಷಕನ ಬಗ್ಗೆ ಇರುವ ಕಾಳಜಿ ಪೂರ್ವ ನಿಲುವುಗಳು ಕೂಡಾ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ,ಅದಕ್ಕಾಗಿ 2017 ಥೇಮ ಶಿಕ್ಷಕರನ್ನು ಸಶಕ್ತರಾಗುವಂತೆ ಮಾಡುವುದು "Empowering Teachers " ಎಂಬುದು.ಸರ್ವ ಸಮಸ್ಯೆಗಳಿಗೆ ಶಿಕ್ಷಣ ಪಥ್ಯವಾಗಲೂ ಬಹುದು. ಈ ಶಿಕ್ಷಣ ವ್ಯವಸ್ಥೆಯಲ್ಲಿ ಅಂದು ಶಿಕ್ಷಕ ಕೇಂದ್ರ ಬಿಂದವಾಗಿದ್ದರೆ ಇಂದು ಮಗು ಕೇಂದ್ರಿತ ಶಿಕ್ಷಣವಿದೆ, ಇರಲಿ. ಶಿಕ್ಷಕನ ಸಶಕ್ತೀಕರಣವಿಲ್ಲದೆ ಶಿಕ್ಷಣದ ಮೂಲ ಉದ್ದೇಶ ಪೂರ್ಣಗೊಳ್ಳದು.ಇಂದು ಬಹಳಷ್ಟು ಬೋಧನೋಪಕರಣಗಳು ಚಾಲ್ತಿಯಲ್ಲಿವೆ ಅವುಗಳಾವವು ಉತ್ತಮ ಬೋಧಕನ ಮಟ್ಟಕ್ಕೆ ಏರಲಾರವು. ಅವು ಬೋಧನೆಯನ್ನು ಪರಿಣಾಮಕಾರಿ ಮಾಡಲು ಸಾಧನಗಳೇ ವಿನಹ ಶಿಕ್ಷಕನ ಮಟ್ಟಕ್ಕೇರಲಾರವು ಹಾಗಾಗಿ ಉತ್ತಮ ಶಿಕ್ಷಕರ ಆಯ್ಕೆ ಅವರಿಗೆ ತರಬೇತಿ ಮತ್ತು ಅವರುಗಳ ಸಮಸ್ಯೆಯ ನಿವಾರಣೆ, ಸಮಾಜ ಅವರನ್ನು ಗೌರವದಿಂದ ನಡೆಸಿಕೊಳ್ಳುವ ವಿಧಾನದಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ .ಶಿಕ್ಷಕರನ್ನು ಗೌರವಿಸೋಣ ಶಿಕ್ಷಣವನ್ನು ಪ್ರೀತಿಸೋಣ, ಸಂತೋಷದ ಸಮಾಜ ನಿರ್ಮಾಣ ಮಾಡೋಣ. 
ಅಂತರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಶುಭಾಶಯಗಳು

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...