ಪಾತ್ರ ತೊರೆದ ಯಾತ್ರಿಕ ನೀ
ಯಮನೂರಿ,ತೆರಳುತ್ತಿದ್ದಿ
ಯಮನ ಊರಿಗೆ ನಾವು ಬರವುದೈತಿ
ಉಂಡಮೇಲ ಅಲ್ಲಿ ನೀರಿಗೆ ॥
ಬಾರದೂರಿಗೆ ನಿನ್ನ ಪಯಣ
ಅವಧಿ ಮುಗಿಯದ ನಿನ್ನ ಶಯನ
ಕಣ್ಣೀರು ಕೋಡಿ ಹರಿಸುತೈತಿ
ಇಲ್ಲಿ ನಿನ್ನ ಮಂದಿರದ ಜನ ॥
ನನಗಿತ್ತಲ್ಲಿ ಗೆಳೆಯನ ಪಾತ್ರ
ಈಗ ಏನ ಹೇಳೊದು ಉತ್ತರ
ನೀನಿಟ್ಟ ಸವಿನೆನಪಿನ ಚಿತ್ರ
ನೋಡಿ ತರತೇವು ನಿನ್ನ ಹತ್ರ॥
ನಾಯಕ ನಟನಲ್ಲೋ ನೀನು...
ಸಹಾಯಕ ನಟರಿಗೇನು ನಿನ್ನುತ್ತರ.
ಕಣ್ಣೀರ ಹರಿಸಿ ಆಗಿಹರು ತತ್ತರ
ಮನಸ್ಸಿನಲ್ಲಿಟ್ಟೊ ಕಿರಣ
ಹೃದಯದಲ್ಲಿ ಆರಿಸಿದೆ ಶರಣ ॥
ಯಾರಿಗೇಳೋದು ಪುರಾಣ
ಕೇಳಿ ಮರಿಲಾಕ ಇದಲ್ಲ ಶ್ರಾವಣ
ಇಂದು ನಿನ್ನದು ನಾಳೆ ನಮ್ಮದು
ತಿಳಿಯುವದೇನು,ಯಮನ ಆಲಿಂಗನ ॥
ಗಚ್ಚಿನ ಮನೆಯಲ್ಲಿ ಬೆಚ್ಚಗಿರದೆ
ಕಿಚ್ಟು ಹಚ್ಚಿ ನಿಚ್ಚಣಿಕೆಯೇರಿದ
ಯಮನೂರಿ ಪ್ರೀತಿಯ ಮಯೂರಿ
ಕುಣಿತ ನಿಲ್ಲಿಸಿದಾ ಪಯಣಿ ॥
ಅಂಕವೆ ಮುಗಿದಿಲ್ಲ ಸಂಕಟ ತಂದಿ
ವೆಂಕಟರಮಣನ ಚರಣ ಸೇರಿದೆ
ಯಮನೂರಿ ..ನೀ ಯಮನೇರಿ .
ನಮ್ಮೂರಿನ ಪ್ರೀತಿಯ ಯಮನೂರಿ॥
No comments:
Post a Comment