Saturday, November 5, 2022

*ಭಾವ ಪೂರ್ಣಶ್ರದ್ಧಾಂಜಲಿ*

ಪಾತ್ರ ತೊರೆದ ಯಾತ್ರಿಕ ನೀ 
ಯಮನೂರಿ,ತೆರಳುತ್ತಿದ್ದಿ 
ಯಮನ ಊರಿಗೆ ನಾವು ಬರವುದೈತಿ
ಉಂಡಮೇಲ ಅಲ್ಲಿ ನೀರಿಗೆ ॥

ಬಾರದೂರಿಗೆ ನಿನ್ನ ಪಯಣ 
ಅವಧಿ ಮುಗಿಯದ ನಿನ್ನ ಶಯನ 
ಕಣ್ಣೀರು ಕೋಡಿ ಹರಿಸುತೈತಿ
ಇಲ್ಲಿ ನಿನ್ನ ಮಂದಿರದ ಜನ ॥

ನನಗಿತ್ತಲ್ಲಿ ಗೆಳೆಯನ ಪಾತ್ರ 
ಈಗ ಏನ ಹೇಳೊದು ಉತ್ತರ
ನೀನಿಟ್ಟ ಸವಿನೆನಪಿನ ಚಿತ್ರ
ನೋಡಿ ತರತೇವು ನಿನ್ನ ಹತ್ರ॥

ನಾಯಕ ನಟನಲ್ಲೋ ನೀನು...
ಸಹಾಯಕ ನಟರಿಗೇನು ನಿನ್ನುತ್ತರ.
ಕಣ್ಣೀರ ಹರಿಸಿ ಆಗಿಹರು ತತ್ತರ
ಮನಸ್ಸಿನಲ್ಲಿಟ್ಟೊ ಕಿರಣ 
ಹೃದಯದಲ್ಲಿ ಆರಿಸಿದೆ ಶರಣ ॥

ಯಾರಿಗೇಳೋದು ಪುರಾಣ 
ಕೇಳಿ ಮರಿಲಾಕ ಇದಲ್ಲ ಶ್ರಾವಣ
ಇಂದು ನಿನ್ನದು ನಾಳೆ ನಮ್ಮದು 
ತಿಳಿಯುವದೇನು,ಯಮನ ಆಲಿಂಗನ ॥ 

ಗಚ್ಚಿನ ಮನೆಯಲ್ಲಿ ಬೆಚ್ಚಗಿರದೆ 
ಕಿಚ್ಟು ಹಚ್ಚಿ ನಿಚ್ಚಣಿಕೆಯೇರಿದ 
ಯಮನೂರಿ ಪ್ರೀತಿಯ ಮಯೂರಿ
ಕುಣಿತ ನಿಲ್ಲಿಸಿದಾ ಪಯಣಿ ॥

ಅಂಕವೆ ಮುಗಿದಿಲ್ಲ ಸಂಕಟ ತಂದಿ 
ವೆಂಕಟರಮಣನ ಚರಣ ಸೇರಿದೆ
ಯಮನೂರಿ ..ನೀ ಯಮನೇರಿ .
ನಮ್ಮೂರಿನ ಪ್ರೀತಿಯ ಯಮನೂರಿ॥

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...