Saturday, December 3, 2022

ತನಗ

ಹಿರಿಯ ಕವಿ ಸಿದ್ಧಲಿಂಗಪ್ಪ ಬೀಳಗಿಯವರ ತನಗದ ವಿವರಣೆಯಿಂದ ಪ್ರೇರೇಣೆ ಪಡೆದು ನಾಲ್ಕು  ತನಗ ಬರೆದೆ ಸರಿ ಇದ್ದರೆ ಸರಿ ಅನ್ನಿ ಇಲ್ಲದಿದ್ದರೆ ಇಲ್ಲ ಅನ್ನಿ ಏನೂ ಅನ್ನದಿದ್ದರೆ ಶನಿವಿವಾರದ ಅರ್ಧ ಬಿಡುವಿನ ತಲೆನೋವು ಅನ್ನಿ ಅಂತೂ ಅನಿಸಿಕೆಗಳನ್ನು ಹೊರಹಾಕಿದೆ.

ಬಣ್ಣದ ಬೆನ್ನು ಹತ್ತಿ 
ತನ್ನವರೆನ್ನುವುದು 
ಮರೆತು ಓಡುತಿವೆ
ಸ್ವಾರ್ಥ  ಕುದುರೆಗಳು
 
ಎದುರು ಮನೆಯಲ್ಲಿ 
ಬೆದರಿಸವ ಬೊಂಬೆ
ಬಣ್ಣ ಮಾತ್ರ ಕರಿದು
ಗೆರೆ ಬಿಳಿದೇ ಬೇಕು

ಕಣ್ಣಿಗೆ ಪಟ್ಟಿ ಕಟ್ಟಿ
ಹುಡುಕುವರು ಬಿಟ್ಟಿ 
ಸಿಗುವುದೇನು ರೊಟ್ಟಿ
ಉಪವಾಸವೆ ಗಟ್ಟಿ

ಬೀಗಬೇಕೆಂದಿಹರು 
ಸಾಲವ ಮಾಡಿ ತಂದು 
ಸಾಗಹಾಕಲಾದೀತೆ
ಸಾಲಗಾರರ ಶೂಲ

ಬಸನಗೌಡ ಗೌಡರ 
ಉಪನ್ಯಾಸಕರ ಗುಳೇದಗುಡ್ಡ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...