ರವಿವಾರದ ತನಗಗಳು
ಮಂದಹಾಸವ ಬೀರಿ
ಹಂದರದಲ್ಲಿ ಕಟ್ಟಿದೆ
ತಾಳಿಕೊಳ್ಳಲು ತಾಳಿ
ಇವಳು ಬಿರುಗಾಳಿ.
ಸಂಸಾರ ಅದ್ಹೇಗೆ
ಆಗುತ್ತದೆ ಸಸಾರ
ಬಾಗಿದವನ ಮೇಲೆ
ಸದಾ ಇರುತ್ತೆ ಬಾರ.
ಹುಡುಗಿಯಾ ಅಲ್ಲಲ್ಲ
ಇವಳು ತುಡುಗಿಯೇ
ಕದ್ದಳು ಕಾಪಿಟ್ಟಿದ್ದ
ಮುತ್ತಿನಂತ ಹೃದಯ.
ಮಂಚದ ಮೇಲೆ ಲಂಚ
ಎಚ್ಚರ ಬೇಕು ಕೊಂಚ
ಅದಲ್ಲ ನಿನಗೆ ಲಂಚ್
ನಿನ್ನ ಮುಗಿಸೊ ಸಂಚು.
ಬಸನಗೌಡ ಗೌಡರ
No comments:
Post a Comment