ಪ್ರೀತಿಯ ಬೆನ್ನು ಹತ್ತಿ
ಬಿತ್ತು ಪಾತರಗಿತ್ತಿ
ತಿಳಿಯಲಿಲ್ಲ ಭಿತ್ತಿ
ಬೆಂಕಿಯೊಳಗ ಸತ್ತ
ತಡಿ ಹಾಕಿ ನೀನಡೆ
ಸುಡು ಅರಿಷಡ್ವರ್ಗ
ಹಿಡಿ ತಡಮಾಡದೆ
ಪದಕ ನಿನ್ನ ಕಡೆ .
ಹೂವು ಕಿತ್ತು ಕಟ್ಟಿದ
ಹೆರಳಿಗಾಭರಣ
ಬೆಳದ ರೈತಗ್ಯಾಕ
ಅಕಾಲದ ಮರಣ.
ಸೂಳಿಯ ಸಂಗ ಕಟ್ಟಿ
ಬಾಳ್ವಂತ ಮಗ ಕೆಟ್ಟ
ಗಾಳಿಯ ಮಾತು ನಂಬಿ,
ಸೋಮಾರಿ ಮಗ ದೊಂಬಿ.
🖋.ಬಸನಗೌಡ ಗೌಡರ
No comments:
Post a Comment