* ವೃತ್ತಿ ಗೌರವ ಎತ್ತರಿಸಿದವರು.*
"Some minds are like natural theropy to the pressure minds who give them treatment without pay they lives in heaven and they make healthy atmosphere to live.
"ನಕ್ಕು ನಗಿಸಿ ನರಕ ಕತ್ತರಿಸಿ
ನಾಕ ಮಾಡುವ ನರರುಂಟು ನಮ್ಮನಡುವೆ
ಯಾಕೆ ಮಾಡುವೆ ಚಿಂತೆ,ನಕ್ಕು ಬಿಡು
ಸಿಗುವರು ಅಲ್ಲಿ ಇಲ್ಲಿ. ವಜ್ರದಂತೆ
ಅವರೆ ನಮ್ಮ ನಾಡ ಕಟ್ಟುವ ಗಾರುಡಿಗರು" ಸಾವಿರಕ್ಕೊ, ಲಕ್ಷಕ್ಕೋ ಒಬ್ಬರು, ಇಬ್ಬರು ಇಂಥವರು ಸಿಗುತ್ತಾರೆ. ಹಿಂದೆ ಪ್ರತಿ ಹಳ್ಳಿಗಳಲ್ಲಿ ಇಂತಹ ಜನ ಸಿಗುತ್ತಿದ್ದರು. ಈಗ ಅಂತವರ ಸಂಖ್ಯೆ ಆಧುನಿಕ ನಾಗಲೋಟಕ್ಕೆ ಸಿಕ್ಕು ಬದುಕೆಂದರೆ ಬರಿ. ವ್ಯವಹಾರವೆಂದು ನಂಬಿ ಕಡಿಮೆಯಾಗುತ್ತಿದ್ದಾರೆ .ಆ ಮಾತು ಹಾಗಿರಲಿ.ನಾನು ಒಂದು ಸತ್ಯ ಸಂಗತಿಯನ್ನು ತಮ್ಮಮುಂದೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಅದುವೆ ಎಲ್ಲದಕ್ಕೂ ಎಸ್.. ಎಸ್.. ಎನ್ನುವ ಪಾಂಡು. (S S ಪಾಂಡು) .ಹುದ್ದೆ ಪ್ಯೂನ ಆದರೂ ಜೀವನವನ್ನು ಗೆದ್ದ ಪ್ರಧಾನಿ , ಅವರು ಬದುಕನ್ನು ಪ್ರೀತಿಸಿ ಬದುಕುಲು ಕಲಿಸುವ ಮಾರ್ಗದರ್ಶಿ. ಆತ ಹುದ್ದೆಯ ಗೌರವ ಎತ್ತಿ ಹಿಡಿದ ನಿಗರ್ವಿ . ಸಾಮಾನ್ಯ ಮನುಷ್ಯ ಉನ್ನತ ಹುದ್ದೆ ಹಿಡಿದು ಗೌರವ ಎತ್ತರಿಸಿಕೊಳ್ಳಲು ಪ್ರಯತ್ನಿದರೆ ಪಾಂಡು ಮಾತ್ರ ಹುದ್ದೆ ಯ ಗೌರವ ಎತ್ತರಿಸಿದ ಮಾಂತ್ರಿಕ ಈ ಪಾಂಡು ಇರುವುದು ಬೇರೆ ಎಲ್ಲಿಯೂ ಅಲ್ಲ, ಆತ ಇರುವುದು ಎಸ್ ಎಸ್ ಆರ್ ಪದವಿ ಪೂರ್ವ ಕಾಲೇಜು ಮೂಡಲಗಿಯಲ್ಲಿ ಮಾತನಾಡಿಸಿದರೆ ಜಾನಪದ ಒಗಟುಗಳನ್ನು ಪಟ ಪಟನೆ ಹಾರಿಸಿ ನಗೆ ಬುಗ್ಗೆ ಎಬ್ಬಿಸುವ ಗಾರುಡಿಗ ಅಲ್ಲಿ ಬದುಕಿನ ಸಾರವಿದೆ ಅನುಭವದ ಅಮೃತವಿದೆ. ಅದೆಷ್ಟೋ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರು ಈತನ ಮಾತಿಗೆ ತಲೆದೂಗಿದ್ದಾರೆ, ಸೈ ಎಂದು ನಕ್ಕು ಮುಂದೆ ಸಾಗಿದ್ದಾರೆ ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಈತ ಕೇವಲ ಕಾಲೇಜಿಗೆ ಮಾತ್ರ ಸೀಮಿತವಲ್ಲ ಅದು ಸುಖದ ಕಾರ್ಯಕ್ರಮವಾಗಿರಬಹುದು ಇಲ್ಲವೆ ದುಃಖದ ಕಾರ್ಯಕ್ರಮ ಇರಬಹುದು ಅಲ್ಲಿ ಪಾಂಡು ಹಾಜರ.ಜಾನಪದ ಗೀತೆಗಳನ್ನು,ಭಜನಾ ಪದಗಳನ್ನು ಸುಂದರವಾಗಿ ಹಾಡುವದರಲ್ಲಿ ಎತ್ತಿದ ಕೈ .ಆದರೆ ಯಾರಿಂದಲೂ ಒಂದು ಪೈಸೆ ನಿರೀಕ್ಷೆ ಮಾಡಿದವನಲ್ಲ
ಪ್ರೀಯಾಗಿ ಹಾಡಿ ಬರುವದು ಈತನ ರೂಢಿ. ಕೆಲಸದ ವಿಷಯದಲ್ಲಿ ಪಾದರಸ, ಪ್ರತಿಯೊಂದನ್ನು ಅಚ್ಚು ಕಟ್ಟಾಗಿ ಮಾಡುವುದು ಆತನಿಗೆ ಸಿದ್ದಿಸಿದೆ. ನಾನು ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯಕ್ಕೆ ಜಾಗೃತ ದಳದ ಸದಸ್ಯನಾಗಿ ಎಸ್ ಎಸ್ ಆರ್ ಪ.ಪೂ ಕಾಲೇಜು ಮೂಡಲಗಿಗೆ ಹೋದಾಗ ಕಂಡ ವ್ಯಕ್ತಿ . ಪ್ಯಾಕಿಂಗ ಕಾರ್ಯ ನೆಡೆದಾಗ ಎಡಗೈಯಲ್ಲಿ ಬಂಡಲ್ ಹೊಲಿಯಲು ನಿಂತರೆ ಆತನ ಮಾತು ಮತ್ತು ಸೂಜಿದಾರಗಳು ಸ್ಪರ್ಧೆಗೆ ಇಳಿದಿರುತ್ತವೆ ಒಗಟು,ನುಡಿಗಟ್ಟು ಗಳು ಬುಗ್ಗೆಯಂತೆ ಜಿಗಿತಯುತ್ತಿರುತ್ತವೆ, ಉಳಿದವರು ನಗೆಗಡಲಲ್ಲಿ ತೇಲುತ್ತಿರುತ್ತಾರೆ. ಇದ್ದ ಹುದ್ದೆಯಲ್ಲಿ ಸಂತೃಪ್ತಿ ಪಡೆಯದೆ ಸದಾ ಹೆಚ್ಚಿನ ಹುದ್ದೆಗೆ ಹಪಹಪಿಸುವವರಿಗೆ ಇವನೊಂದು ಪಾಠಶಾಲೆ .ಅಂದರೆ ಹೆಚ್ಚಿನ ಹುದ್ದೆಯನ್ನು ಬಯಸಬಾರದು ಅಂತಾ ಅರ್ಥವಲ್ಲ. ಹಿಡಿದ ಹುದ್ದೆಯ ಗೌರವ ಹೆಚ್ಚಿಸುವ ಕಾರ್ಯ ಮಾಡಬೇಕೆನ್ನುವುದು ಆತನ ಸಿದ್ದಾಂತ. ಶರಣ ಸಂಸ್ಕೃತಿ ಮೈಗೂಡಿಸಿಕೊಂಡಿರುವ ಇವನು ಯಾವಾಗಲೂ ಸೈಕಲ್ ನ್ನು ಸ್ನೇಹಿತನಂತೆ ಪ್ರೀತಿಸುವ ಪ್ರಿಯಕರ.ಒಂದು ಸ್ಥಳದಲ್ಲಿ ನಿಲ್ಲದೆ ನಿತ್ಯವೂ ಜಂಗಮ .ಬಹು ದೊಡ್ಡದಾದ ಸಂಸ್ಥೆಯಲ್ಲಿ ಎಲ್ಲಾ ವಿಭಾಗಗಳ ಬೇಡಿಕೆಯ ಅಜ್ಜ .ಕಬ್ಬಿಣ, ಕಟ್ಟಿಗೆ ,ಸಿಮೆಂಟ ಲೆಕ್ಕಾಚಾರವೂ ಇವನಿಂದ ಚಕಾ ಚಕ್.
ಯಾರಿಂದ ಏನೂ ನಿರೀಕ್ಷಿಸದ ಎಲ್ಲರ ನಿರೀಕ್ಷೆ ಈಡೇರಿಸುವ ಆಪ್ತ ಮಿತ್ರ.ಕೆಲಸವೆ ಈತನಿಗೆ ದೇವರು. ಹೀಗೆ ಕೆಲಸ ಮಾಡುತ್ತ ಕೆಲವೊಮ್ಮೆ ಎಲ್ಲಿಯೋ ನಿದ್ದೆ ಹೋದ ಒಂದು ಸ್ವಾರಸ್ಯಕರ ಸಂಗತಿ ಸುದ್ದಿ ನಮಗೆ ಹೇಳಿ ನನ್ನನ್ನು ನಗೆಗಡಲಲ್ಲಿ ತೇಲಿಸಿದ. ಅದೇನೆಂದರೆ
ಒಂದು ಅಂಗಡಿಯ ಮಂದೆ ಮಾತಾಡುತ್ತಾ
ಕುಳಿತು ನಿದ್ದೆ ಹೋದರಂತೆ ಅವರಿಗೆ ಪ್ರೀತಿ ಪಾತ್ರರಾದ ಯಾವನೊ ಒಬ್ಬ ಮಲಗಿದಾಗ ಕೊರಳಿಗೆ ಹೂವಿನ ಹಾರ ಹಾಕಿ ಪೋಟೋ ತೆಗೆದು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರಂತೆ... ಅದು ಪಾಂಡು ಹೋದ ಎಂದು ! .ಹೀಗೆ ವೈರಲ್ ಮಾಡಿದ್ದನ್ನು ಕೇಳಿ ನಕ್ಕಿದ್ದೆ ನಕ್ಕಿದ್ದು ..ಆತ ಮಂಜಾನೆ 5.30 ಗಂಟೆಗೆ ಎದ್ದು ಕಾಲೇಜಿನಲ್ಲಿ ಬಂದರೆ ಮನೆಗೆ ಹೋಗುವದು ಯಾವೊಗೋ ಏನೋ ! ಊಟದಲ್ಲಿಯೂ ಅಷ್ಟೆ ಅದರಲ್ಲಿಯ ಅವನ ಸಿದ್ದಾಂತ ಕೇಳಿ ನಾ ತಲೆದೂಗಿದೆ . ಸರ್ ನೀವು ಐದು ಗಂಟೆಗೆ ಊಟ ನೀಡಿದರೂ ಗಡದ್ದಾಗಿ ಹೊಡೆಯುತ್ತೇನೆ. ಈಗೀನವರಿಗೆ ಅದು ಸಾಧ್ಯವಿಲ್ಲ! ಏಕೆ ಹೇಳಿ ?ಉಂಡದ್ದು ಸರಿಯಾಗಿ ಜೀರ್ಣವಾದರೆ ತಾನೆ ?ನಸುಕಿನಲ್ಲಿಯ ಊಟ.! ನಿದ್ದೆಯೂ ಹಾಗೆಯೇ ಎಲ್ಲಿ ಕುಳಿತರೂ ನಿದ್ದೆ ಹಾಯಾಗಿ ಬರುತ್ತದೆ ಇದಕ್ಕಿಂತ ಸ್ವರ್ಗ ಇದೆಯೇ ಎಂಬ ಪಾಂಡುವಿನ ಪ್ರಶ್ನೆಗೆ ತತ್ವಜ್ಞಾನಿಯೋ, ವೈದ್ಯರೊ ತಲೆಬಾಗಲೆಬೇಕು.
ಅಂತಯೆ ಕುಟುಂಬದ ಸದಸ್ಯರನ್ನು ಬೆರಗುಗೊಳಿಸಿದ ಉತ್ತರ ಹೇಳಿ ನಮ್ಮ ಮುಂದೆ ಸಮಾಜ ಸೇವಕ , ತತ್ವಜ್ಞಾನಿಯಾಗಿದ್ದ. ಮನೆಯೊಡತಿ ಪ್ರಶ್ನೆ "ತಾವು ಯಾವಾಗಲೂ ಶಾಲೆ, ಕಾಲೇಜು ಎಂದರೆ ಮನೆಯ ಬಗ್ಗೆ ಏನು ಕಾಳಜಿ ಇಲ್ಲವೆ ? ಅಂದದ್ದಕ್ಕೆ ಈತ ಮಾರ್ಮಿಕವಾಗಿ ಹೇಳಿದನಂತೆ " ನಾನು ನಾಳೆ ಮನೆ ಮನೆಯಂತ ಸತ್ತರೆ ನೀವು ಮೂರೇ ಮಂದಿ ಅಳತ್ತೀರಿ ನಾನು ಹೀಗೆ ಸತ್ತರೆ ಇಡಿ ಮೂಡಲಗಿ ಮಂದಿ ಅಳುತ್ತಾರೆ " ಎಂದರಂತೆ .ಎಂತಾ ಮಾರ್ಮಿಕವಾದ ಮಾತಲ್ಲವೆ .ಇವರಿಗೆ ಎರಡು ಹೆಣ್ಣು ಮಕ್ಕಳು ಅವರೀರ್ವರೂ ಜಾಣ ವಿದ್ಯಾರ್ಥಿಗಳು. ಹಿರಿಮಗಳು ಬಿ ಎಸ್ಸಿ ,ಸಣ್ಣ ಮಗಳು ಹೈಸ್ಕೂಲ್ ಓದುತ್ತಿದ್ದಾಳೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಅಂದರೆ ಅವರ ಅಪ್ಪನ ಆದರ್ಶ ಅವರಿಗೆ ಸ್ಪೂರ್ತಿಯಾಗಿದೆ, ಅಲ್ಲವೆ ? ಅಂದರೆ ಕಲಿಸಬೇಕಾಗಿಲ್ಲ ಕಲಿಯುವಂತೆ ಬದುಕಬೇಕಷ್ಟೆ.
ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ನಾನು ಕಂಡ ನನ್ನ ಕೆಲವೆ ಕೆಲವರಲ್ಲಿ ನಮ್ಮ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ಯೂನ ನಾಗಮ್ಮ ಮತ್ತು ಈ ಪಾಂಡು ವೃತ್ತಿ ಮೌಲ್ಯ ಹೆಚ್ಚಿಸಿದ ಅಪರೂಪದ,ಸಮಾಜ ನೆಚ್ಚುವ ಅಭಿನಂದನಾರ್ಹ ವ್ಯಕ್ತಿಗಳು . ಸಮಾಜ ಅಂತವರನ್ನು ಗೌರವಿಸುವ ಮೂಲಕ ಸ್ವಸ್ಥ ಸಮಾಜ ಕಟ್ಟಬೇಕಾಗಿದೆ. ಕನ್ಪ್ಯೂಶಿಯಸ್ ಒಂದು ಮಾತು ಹೀಗೆ ಹೇಳುತ್ತಾರೆ "ಸಮಾಜ ಜಾಣರನ್ನು ಗೌರವಿಬೇಕು" ಎಂದು. ನಾನು ಮುಂದುವರೆದು ಹೇಳಲು ಬಯಸುವುದು " ವೃತ್ತಿಯನ್ನು ಗೌರವಿಸುವವರನ್ನು ಗೌರವಿಸಿ ಎಂದು.ಒಪ್ಪುತ್ತೀರಲ್ವೆ ?.
ನಮಸ್ಕಾರಗಳು.
No comments:
Post a Comment