ಭೂತಾಯಿ ಮನೆ ಮುಂದೆ
ನೇಗಿಲನ ರಂಗೋಲಿ
ಬಾಗಿದರೆ ಹೆತ್ತಮ್ಮ, ಭತ್ತದ ಚಿತ್ತಾರ
ಮಡಿಲೊಳಗ।
ಹುತ್ತರಿ ಹಬ್ಬಕ್ಕೆ ಉತ್ತರಕೆ ಪಯಣ
ನೆತ್ತರ ಬಸಿಯುವನು ಬಸವಣ್ಣ।
ಎತ್ತ ನೋಡಿದರು ಹಸಿರನ ತೋರಣ
ಎತ್ತಿನ ಕಷ್ಟ ನೆನೆಯೋಣ॥
ಮಕರನ ಮನೆ ಮುಂದೆ
ಬಾಳಿನ ಬಾಸ್ಕರ ಬಂದಾನ
ಬದಲಾವಣೆಯ ಸಂಕ್ರಾಂತಿ ತಂದಾನ.
ಜಗಕೆಲ್ಲ ಎಳ್ಳು ಬೆಲ್ಲದ ಸ್ನಾನ
ಸುಗ್ಗಿಯ ಬೆಳೆ ತಂದು ಎಗ್ಗಿಲ್ಲದೆ
ಹಂಚಿದರ ಬದುಕೆಲ್ಲ ಸಗ್ಗದ ಸಿರಿ ಕಾಣೋ
ರೈತನ ಬೆವರಿಗೆ ನಾಡೆಲ್ಲ ಸಿಂಗಾರ।
ಭತ್ತದ ರಾಶಿ ಬಂಗಾರ॥
No comments:
Post a Comment