Thursday, December 26, 2024

ಇತಿಹಾಸ ಬೋಧನೆ

ಇತಿಹಾಸ ಬೋಧನೆ .
  ಹದಿಮೂರು ವರ್ಷಗಳ ಪ್ರೌಢಶಾಲೆಯ ಹಾಗೂ 18 ವರ್ಷಗಳ ಕಾಲೇಜಿನ ಉಪನ್ಯಾಸಕ ವೃತ್ತಿಯ ಬೋಧನೆಯ ಅನುಭವದ ಆಧಾರದ ಮೇಲೆ ಅಭಿವ್ಯಕ್ತಪಡಿಸಬಹುದಾದ ಕೆಲವು ಸಂಗತಿಗಳ ಕಿರು ನೋಟವಿದು.ಅದು ಇನ್ನೊಬ್ಬರ ಮೇಲೆ ಹೇರಬಹುದಾದ ಒತ್ತಾಯವು ಅಲ್ಲ, ಉಪದೇಶವೂ ಅಲ್ಲ. ಆದರೆ ಅದು ನಿರಂತರ 31ವರ್ಷಗಳ ಬೋಧನೆಯ ಅನುಭವದ ಸಾರ. 
       ಇತಿಹಾಸ ಬೋಧನೆಯು ಒಂದು ಸವಾಲಿನ ಕೆಲಸವು ಹೌದು ಮಕ್ಕಳಿಗೆ ನೀಡುವ ಜ್ಞಾನದ ರಸದೌತಣವೂ ಹೌದು, ಹೇಗೆಂದರೆ ಅಮೂರ್ತ ವಿಚಾರಧಾರೆಗಳನ್ನು ವ್ಯಕ್ತಿಯೊಬ್ಬನ (ಮಕ್ಕಳ) ಮಸ್ತಕಕ್ಕೇರಿಸಿ ಆತನ ವ್ಯಕ್ತಿತ್ವ ವಿಕಸನ ಮಾಡಬೇಕಾಗಿರುವ ಔತಣ.ಅದು ಅಷ್ಟು ಸುಲಭದ ವಿಷಯವೇನಲ್ಲ ! ಯಾಕೆಂದರೆ ಇತಿಹಾಸ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಪೂರ್ವ ಜ್ಞಾನದ  ಗುಣಮಟ್ಟ ಅಷ್ಟು ಎತ್ತರದ ಮಟ್ಟದಲ್ಲಿ ಇರಲಾರದು ಎನ್ನುವುದು ಎಲ್ಲರಿಗೂ ತಿಳಿಯದ ವಿಷಯವೇನಲ್ಲ ಹಾಗೆಂದು ಹಿಂದೆ ಸರಿಯುವ ಹಾಗೆಯೂ ಇಲ್ಲ. ಹಾಗಾದರೆ ಮಾಡಬೇಕಾದದ್ದು ಏನು?
       ಎಲ್ಲ ವಿಷಯ ಉಪನ್ಯಾಸಕರು ಮಾಡುವಂತೆ ಅವರ ಪೂರ್ವ ಜ್ಞಾನದ ಪರೀಕ್ಷೆ ನಂತರ ಅವರ ಸಾಮರ್ಥ್ಯದ ಆಧಾರದಲ್ಲಿ ವರ್ಗೀಕರಣ ಮಾಡಬೇಕು ಅದು ವಿದ್ಯಾರ್ಥಿಗಳಿಗೆ ತಿಳಿಯದ ಹಾಗೆ ಇರಲಿ. ಪ್ರತಿ ಪಾಠದ ಅವಧಿಯಲ್ಲಿ ನಮ್ಮ ಪಾಠ ಪ್ರವಚನ ಒಂದನೆಯ ವರ್ಗದ ವಿದ್ಯಾರ್ಥಿಗಳಿಂದ ನಾಲ್ಕನೆಯ ವರ್ಗದ ವಿದ್ಯಾರ್ಥಿಗಳು ಕಲಿಯುವಂತೆ ಸಾಗುತ್ತಿರಬೇಕು ಅಂದರೆ ಆ ಪಾಠವನ್ನು ಅವರು ಹೇಳಿಕೊಡಬೇಕೆ ? ಖಂಡಿತವಾಗಿಯೂ ಇಲ್ಲ, ಉಪನ್ಯಾಸಕರು ಇಲ್ಲಿ ಮೂಲ ಪರಿಕಲ್ಪನೆಯನ್ನು ಚರ್ಚಿಸುತ್ತಾ ನಡೆಯಬೇಕು ಮಹತ್ವದ ಸಂಗತಿಗಳನ್ನು ಬೋರ್ಡಿನಲ್ಲಿ ಬರೆಯುತ್ತಿರಬೇಕು ಸ್ಮಾರ್ಟ ಬೋರ್ಡ ಇದ್ದರೆ ಬರೆಯಬೇಕಾದದ್ದನ್ನು ಮೊದಲೆ ನಮ್ಮ ಲ್ಯಾಪ್‌ಟಾಪಿನಲ್ಲಿ ಬರೆದು ಅದನ್ನು ನಮ್ಮ ಪೆನ್ ಡ್ರೈವನಲ್ಲಿ. ಹಾಕಿಕೊಂಡಿರಬೇಕು (ನನ್ನ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ನಾನು ಹಾಗೆ ಮಾಡುತ್ತಿದ್ದೆ ಹೋದ ವರ್ಷದಿಂದ ಅದು ನನಗೆ ಲಭ್ಯವಿಲ್ಲ) ಕ್ಲಾಸಿಗೆ ಹೋದ ತಕ್ಷಣ ಅದನ್ನು ಹಾಕುವುದಲ್ಲ ಬದಲಾಗಿ ಐದು ನಿಮಿಷ ಹಿಂದಿನ ಪಾಠದ ವಿವರಣೆ ಮಾಡಿದ ಮೇಲೆ ಇಂದಿನ ಪಾಠದೊಳಗೆ ಐದು ನಿಮಿಷ ವಿದ್ಯಾರ್ಥಿಗಳ ಮನಸ್ಸು ತೊಡಗಿದ ಮೇಲೆ ವಿದ್ಯಾರ್ಥಿಗಳು ನಾವು ಹಾಕುವ ಮುಖ್ಯಾಂಶಗಳಿಗೆ ಹಾತೊರಿಯುವಾಗ ಅವು ನಮ್ಮ ಬತ್ತಳಿಕೆಗೆ  ಬಾಣವಾಗಿರಬೇಕು. ಬರಿ ಬೋರ್ಡಿನ  ವಿವರಣೆ ನಮ್ಮ ಪಾಠದ ಉದ್ದೇಶ ವಾಗಿರದೆ ತುಲನಾತ್ಮಕ ಅಧ್ಯಾಪನ ನಡೆಯಬೇಕು ಅಂದರೆ ಸಿಂಧೂ ನಾಗರಿಕತೆ ಕಲಿಸುವಾಗ ವೈದಿಕ ಸಂಸ್ಕೃತಿಯ, ಜೈನಧರ್ಮ ಕಲಿಸುವಾಗ ಬೌದ್ಧ ಧರ್ಮ, ಮೌರ್ಯರ ಬಗ್ಗೆ ಕಲಿಸುವಾಗ ಶಾತವಾಹನರ, ಗುಪ್ತರ ಬಗ್ಗೆ ಕಲಿಸುವಾಗ ಚಾಲುಕ್ಯರ ಇತಿಹಾಸ, ರಾಷ್ಟ್ರಕೂಟರ ಬಗ್ಗೆ ಕಲಿಸುವಾಗ ಮುಂದಿನ ಕಲ್ಯಾಣಿ ಚಾಲುಕ್ಯರ ಇತಿಹಾಸ, ಹೊಯ್ಸಳರ ಬಗ್ಗೆ ಕಲಿಸುವಾಗ ಉತ್ತರ ಭಾರತದ ಮುಸ್ಲಿಮರ ಆಡಳಿತದ ಆಗಮನದ ವಿವರಣೆ,ವಿಜಯನಗರದ ಬಗ್ಗೆ ತಿಳಿಸುವಾಗ ಮೊಗಲರ ಬಗ್ಗೆ ಚುಟುಕಾಗಿ ಚುರುಕಾಗಿ ತಿಳಿಸುತ್ತಾ  ಕ್ಷಣ ಮಾತ್ರದಲ್ಲಿ ಮೂಲ ಪಾಠದಲ್ಲಿರಬೇಕು ಹೀಗೆ ಮಾಡುವಾಗ ಉಪನ್ಯಾಸಕರಗೆ ವಿಷಯದ ಬಗ್ಗೆ ಆಳವಾದ ಜ್ಞಾನ  ಮತ್ತು ಹಿಡಿತವಿರುವುದು ತುಂಬಾ ಅವಶ್ಯ. ಈ ಅವಧಿಯಲ್ಲಿ ಉಪನ್ಯಾಸಕನ ಬತ್ತಳಿಕೆಯಲ್ಲಿ ನೇರವಾದ ಪಾಠದ ಮೂಲ ಪರಿಕಲ್ಪನೆಯನ್ನು ಹೆಕ್ಕಿ ತರುವ ಪ್ರಶ್ನೆ ಗಳಿರಲೆಬೇಕು ಆವಾಗ ನಾವು ಒಂದನೆಯ ವರ್ಗದ ವಿದ್ಯಾರ್ಥಿಗಳಿಗೆ ಕೇಳಿ ಅವುಗಳ ಮೂಲಕ ಉಳಿದ ಮೂರೂ ವರ್ಗದ ವಿದ್ಯಾರ್ಥಿಗಳು ಮನದಟ್ಟು ಮಾಡುವಂತೆ ಮಾಡಬೇಕು ಆಮೇಲೆ ಎರಡನೆಯ ಮತ್ತು ಮೂರನೆಯ ವರ್ಗದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಅವರು ಪರಿಕಲ್ಪನೆಯ  ಹೇಳುವಲ್ಲಿನ ತಪ್ಪುಗಳನ್ನು ತಿದ್ದುತ್ತಾ ವಿಷಯವನ್ನು ಮನದಟ್ಟು ಮಾಡಬೇಕು ಇನ್ನೂಂದು ಪ್ರಾಮುಖ್ಯ ವಾದ ವಿಷಯ ಮರೆತರೆ ನಮ್ಮ ಪಾಠ ಪರಿಪೂರ್ಣ ವಾಗಲಾರದು ಅದುವೆ ಪಾಠದಲ್ಲಿ ಬರುವ ಸ್ಥಳಗಳನ್ನು ನಕಾಶೆಯನ್ನು ಬರೆದು ಅದನ್ನು ತೋರಿಸಿಯೇ ಮುಂದೆ ಸಾಗಬೇಕು ಅದು ಭಾರತದ್ದೇ ಆಗಿರಲಿ ಇಲ್ಲವೆ ಜಗತ್ತಿನದೆ ಆಗಿರಲಿ ನಕ್ಷೆಯನ್ನು ತೆಗೆಯಲೇ ಬೇಕು ಇಲ್ಲವೆ ರೆಡಿಮೇಡಾದರೂ ಪರವಾ ಇಲ್ಲಾ ಬೋರ್ಡ ಮೇಲೆ ಹಾಕಬೇಕು. ಪುಸ್ತಕ ಹಿಡಿದು ಇಲ್ಲವೇ ಬರೆಸುತ್ತಾ ಪಾಠ ಮಾಡುವುದು ನನ್ನ ರ್ಥದಲ್ಲಿ ಪರಿಣಾಮ ಕಾರಿ ಪಾಠ ವಾಗಲಾರದು.ಇಲ್ಲವೆ ಅತಿಯಾದ ಅನಿಮೇಷನ್ ಮಾಡಿದ ಇತಿಹಾಸ ಪಾಠಗಳು ಕೂಡಾ ಪಾಠದ ವಿಷಯಕ್ಕೆ ಮಕ್ಕಳನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬಹುದು ಎನ್ನುವುದಕ್ಕೆ ನನ್ನ ಲ್ಲಿ ಉತ್ತರಕ್ಕಾಗಿ ತಡಕಾಡಿದ್ದೇನೆ ಅದು ಯಶಸ್ವಿಯಾಗಿದ್ದರೆ ಅದನ್ನು ಮಾಡಬಹುದು ಒಟ್ಟಾರ ಹೀಗೆ ಕಲಿಸಬೇಕೆನ್ನುವುದು ಒತ್ತಾಯವಲ್ಲ, ಸರಿಯಾಗಿದ್ದು ಮಗುವಿಗೆ ತಿಳಯಬೇಕಷ್ಟೆ,ಅದಕ್ಕೆ ನಾನು ಆರಂಭದಲ್ಲಿಯೇ ಹೇಳಿದ್ದು.ಕಲಿಕೆಯನ್ನುವುದು ಮತ್ತು ಕಲಿಸುವುದು ಒತ್ತಾಯದ ಪರಿಕ್ರಮವಲ್ಲ. ಮಕ್ಕಳು ಕಲಿಯಲು ಸಿದ್ದರಾದರೆ ಮಾತ್ರ ಅಲ್ಲಿ ಕಲಿಕೆ ಸಾಧ್ಯ. ಮಗುವನ್ನೆ ಪ್ರಶ್ನಿಸುವಂತೆ ಮಾಡುವ ಕಲಿಸುವಿಕೆಗಿಂತ ಹಿರಿದಾದ ಕಲಿಕೆ ನಾನು ಕಂಡಿಲ್ಲ ಕಾಣುವುದು ಇಲ್ಲ.ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ಮಾಡಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಕಲಿಸಿಕೊಡುತ್ತೇನೆ ಅದರಿಂದ ಅವರು ತಾವೇ ಕಲಿತುಕೊಳ್ಳುತ್ತಾರೆ ಎಂದರಂತೆ The difference between man and man is the power of concentration ಅಂದದ್ದು ಇದೇ ಕಾರಣಕ್ಕೆ. ನಮ್ಮ ಇತಿಹಾಸದ ಕಲಿಕೆ, ಕಲಿಸುವಿಕೆ ಅದು ಜ್ಞಾನದ ಕಲಿಕೆ ಅದು ವ್ಯಕ್ತಿತ್ವ  ನಿರ್ಮಾಣದ ಕಲಿಕೆ ಎನ್ನುವದು  ನಮ್ಮ ಮನಪಟಲದ ಮೇಲೆ ಇರಬೇಕು. ಅದು ನಾಲ್ಕು ಘಟನೆ, ಸ್ಥಳ,ಇಲ್ಲವೆ ವ್ಯಕ್ತಿಗಳನ್ನು ನೆನಪಿನಲ್ಲಿಡಲು ಇತಿಹಾಸ ಬೋಧಿಸುವದಷ್ಟೆ ಶಿಕ್ಷಕನ ಕೆಲಸವಲ್ಲ ಆ ಮೂಲಕ ಪ್ರಚಲಿತ ಜ್ಞಾನದೊಂದಿಗೆ ಭವಿಷ್ಯ ವನ್ನು ಕಟ್ಟಿ ಕೊಡುವ ಭರವಸೆಯ ಮನುಷ್ಯ ರನ್ನು ಸೃಷ್ಟಿಸುವುದು ಇತಿಹಾಸ ಉಪನ್ಯಾಸಕರ ಜವಾಬ್ದಾರಿಯಾಗಿದೆ.ಅದನ್ನು ನಾನು ಮಾಡುತ್ತಿದ್ದೇನೆ ಎನ್ನುವ ನಂಬಿಕೆ ನನಗಿದೆ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...