ಮರದ ದಿಮ್ಮೆಯ ಮುಂದೆ
ಮುಗಿಲು ಚುಂಬಿಸಲು ಹಗಲಿರುಳೆನ್ನದೆ ಬೆಳೆದು
ಖಗ ಪಕ್ಷಿಗಳಿಗೆ ನೆರಳಾಗಿ ಉರುಳಿದೆ ನೀ ಕೊರಡಾಗಿ
ಹಗೆಯೆಂಬುದಿಲ್ಲ ಎಲ್ಲಾ ಜಗದುಳಿವಿಗೆ ನಗುವಿಗೆ ॥
ಬೋಳಾದರೇನು ಹಾಳಾದರೇನು ಉಳಿದು
ಬೆಳಯುವ ತಲೆಗಳಿಗೆ ನೀ ಆಸರೆಗಂಬ
ಕಳೆದು ತೀಡಿದರೆ ಸಿಂಹಾಸನ ರಾಜನಿಗೆ॥
ನೀನಿಟ್ಟ ಸೌಖ್ಯದ ಸಿರಿ, ಬೆಳೆ ಬಾನೆತ್ತರಕೆ
ಬರಿ ಬೆತ್ತಲೆ, ಕತ್ತಲೆ ದಿನಕರ ಉರುಳಿದಾಗ
ಸತ್ತರೂ ಸುತ್ತುವರೆದರೆ ನೀ ಆಹಾರ ಗೆದ್ದಲುಗಳಗೆ॥
ನಿನ್ನ ನಂತರದ ತಲೆಮಾರು ಚುಂಬಕದ ಸಾಲು
ಎತ್ತಿಕೊಳ್ಳಲು ತವಕದ ಬಿಂಬಗಳು ನೂರಾರು
ಒಣ ಕೊಂಬೆಯಾದರೇನು ನೀ ಬೆಲೆ ಕೆಂಡಗಳಿಗೆ॥
ಎತ್ತರ ಬೆಳೆದು ಕತ್ತು ಬಗ್ಗಿಸಿ ಕಿರಿಯಾದೆ ಮಲಗಿ
ಸುತ್ತಲೂ ಏರಿದೆ ಪ್ರೀತಿಯ ಅಮಲು ಮರೆತು
ಬತ್ತಳಿಕೆಯಲ್ಲಿಲ್ಲ ಹಮ್ಮಿ ಬಿಮ್ಮಿನ ಬಾಣ,ಬಿಲ್ಲುಗಳಿಗೆ ॥
ಮಾವು ಬೇವು ಹುಣಿಸೆ ಹಲಸು
ReplyDeleteಮರ ಯಾವುದೇ ಆಗಿರಲಿ,
ತೊಗಟೆ- ತ್ವಚೆ ಕಳಚಿ ಧರೆಗುರುಳಿದ ಮೇಲೆ, ಕಳೆದ ಬದುಕು ಉಳಿದ ಜೀವ
ತೆರೆದು ನೋಡುವ ಕಂಗಳಿಗೆ ,
ಅರಿದೊರೆದು ನೋಡುವ ಮನಕದುವೆ
ಸ್ಪೂರ್ತಿಯ ತಾಣ, ಪ್ರಕೃತಿ ಮಾತೆಯ
ಮಡಿಲು ಅಪಾರ ಸಿರಿಯೊಡಲು
ಕಾಣೋ ಜಾಣ l
.. ಅಭಿನಂದನೆಗಳು ಗೌಡರೆ,
ನಿಮ್ಮ ಸುಂದರ ಕವಿತೆ ಓದಿದ ಮೇಲೆ ಬರೆದದ್ದು. ಶುಭ ರಾತ್ರಿ.
ಎಸ್ ಜಿ ಕೋಟಿ. ವಿದ್ಯಾಗಿರಿ
Delete