ಬಯಲು ದಾರಿಯಲ್ಲಿ
ಉರಿವ ಬಿಸಿಲು ಮೀರಿ
ಸಪ್ತ ಸಾಗರ ದಾಟಲು
ಸತ್ಯ ವೊಂದೆ ಹೊತ್ತು ಸಾಗವ
ಸಂಪತ್ತಿನಂತಹ ಆಸರೆ ।
ತಗ್ಗು ದಿನ್ನೆ ಗಳರುವ ದಾರಿ
ಬಗ್ಗಿ ನಡೆದು ಸುಗ್ಗಿ ಕಾಣಲು
ಗೆಳೆಯರ ಹಿತನುಡಿಗಳೆ
ಗಿಡಮರಗಳಂತೆ ನೆರಳು
ಬೆರಳು ತೋರಿಸಲಾಸರೆ ॥
ಬಡತನವೆಂಬ ಭೂತ
ಸಿಗದ ಪ್ರೀತಿ,ಎಲ್ಲ ನನ್ನದೆಂಬ ಭ್ರಾಂತಿಉರಿವ ಕೆಂಡದಲ್ಲೂ ಬದುಕಲು,
ಸಾಕ್ಷಿಪ್ರಜ್ಞೆಯೊಂದೆ ಜಲದಂತೆ
ಬದುಕಿಗಾಸರೆ ॥
ವಿಶಾದವೂ ವಿನೋದವೊ
ಬಿರುಗಾಳಿಗೆ ಸಿಕ್ಕು ಓಲುವಾಗ
ಸಿಗುವ ಭ್ರಾತೃ ಭಾವನೆ
ದಡಸೇರಿಸುವ ಭರವಸೆಯೇ
ಜೀವಕಾಸರೆ ॥
ಉಕ್ಕಿ ಹರಿವ ನದಿಗಳು
ದಿಕ್ಕು ಕಾಣದಂತೆ ಸುರಿವ ಮಳೆಯಲಿ
ಸಿಕ್ಕ ಸಹಕಾರದ ಹನಿಗಳು
ಹೊಕ್ಕು ತುಂಬಲು ಶೆಲೆಗಳು
ಒರತೆ ಗಾಸರೆ ॥
No comments:
Post a Comment