ಯಾವ ಕಲೆಗಾರನ ಕುಂಚದ ಕುಡಿಯಿದು
ಕುಡಿನೋಟದಿಂದಲೆ ಕಲ್ಲು ಹೃದಯ
ಕೊಲ್ಲುವ ಕತ್ತಿಯ ಮೊನೆಯಿದು
ಸ್ನಿಗ್ಧ ಸೌಂದರ್ಯದ ಬಲೆಯಿದು॥
ಯಾರು ಜೀವಕಳೆ ತುಂಬಿದರು
ಮುಗ್ಧತೆಯ ಮಡಿಲು ಸೌಂದರ್ಯ ಬೆಡಗು
ಬಂದಳು ಕುಂಬ ಮೇಳದ ರುದ್ರಾಕ್ಷಿ ಬಾಲೆಯಾಗಿ॥
ಯಾವ ಜಂಗಮವಾಣಿಯ ರಸಗವಳ
ಹೊಂಗನಸಿನ ಸಂಗೀತದ ಹೊಸರಾಗವಿದು।
ರಂಭೆ ಊರ್ವಸಿಯೂ ನಸುನಾಚುವಂತೆ
ಸೇರಹಿಡಿದ ಗೊಂಬೆಯ ಬಿಂಬವಿದು॥
ಯಾರು ಸೆರೆಹಿಡಿದು ತೇಲಿ ಬಿಟ್ಟರು
ಈ ಬ್ರಹ್ಮ ಗೀಚಿದ ಚಿತ್ರ ಬರಹ।
ಸಾವಿರ ಮನಸ್ಸುಗಳ ಸೂರೆಗೊಂಡು
ದೂರ ಉಳಿವ ಕೃಷ್ಣನ ಕೈಚಳಕವಿದು॥
ಯಾವ ಹಳ್ಳಿಯ ಹೈದನ
ತೋಟದಲ್ಲರಳಿದ ಚೆಂಗುಲಾಬಿಯಿದು ।
ಪರಿಮಳ ಸೂಸುವ ಮಲ್ಲಿಗೆಯು
ಸುರಿಯುತಿದೆ ಎಲ್ಲೆಲ್ಲೋ ಮುಂಗಾರು ಮಳೆ ॥
ಯಾವ ಪ್ರಕೃತಿಯು ನೀಡಿದ ಆಕೃತಿಯಿದು
ಬಣ್ಣವೆ ಬಡಿವಾರವೆಂದ ಬಂಡವಾಳವೆ ಬಯಲು।
ಬಣ್ಣಿಸುವ ಪದಗಳು ಬರಿದು ಮಾಡಿದವಳಿವಳು
ಆಶೆಗಣ್ಣಿಗೆ ಉಷ್ಣ ವೇರಸಿದ ಕೃಷ್ಣವೇಣಿಯಿವಳು॥
Super sir
ReplyDelete