. .
Saturday, March 8, 2025
ಬಿ ಕೆ ನಂದನೂರ ಅಭಿನಂದನಾ ಬರಹ
ಆ ಕಾಲವೊಂದಿತ್ತು ಒಂದು ವರ್ಷದ ಐ ಟ ಸಿ ಮಾಡಿದರೆ ಪ್ರಾಥಮಿಕ ಶಾಲೆಯ ಶಿಕ್ಷಕ ರಾಗಿ ಜೀವನ ಕಟ್ಟಿಕೊಳ್ಳಬಹುದು ಅಂತಾ .ಅಂದು ಗುಳೇಗುಡ್ಡ ನಗರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿ ಗಳಿಗೆ ಹೇಳಿ ಮಾಡಿಸಿದ ಸರ್ಟಿಫಿಕೇಟ್ ಕೋರ್ಸ ಅದು, ಅದರಿಂದ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಕರಾಗಿ ತಮ್ಮ ಬದುಕು ಕಟ್ಬಿಕೊಂಡರು.ಬಹುತೇಕ ಬಡವರೆ ವಾಸಿಸುವ ಹಳ್ಳಿಯೂ ಅಲ್ಲದ ನಗರವು ಅಲ್ಲದ ಪ್ರದೇಶ ಗುಳೇಗುಡ್ಡ, ಇಲ್ಲಿ ಮೊದಲು ಪ್ರೌಢಶಾಲೆಯ ಶಿಕ್ಷಕರಾಗಿ ನಂತರ ಕಷ್ಟಪಟ್ಟು ಎಮ್ ಇಡಿ ಮಾಡಿ ಭಂಡಾರಿ ಕಾಲೇಜಿನ ಪ್ರಾಧ್ಯಾಪಕರಾದವರು ಡಾ. ವ್ಹಿ ಎ ಬೆನಕನಾಳ, ಇವರು ಗುಳೇಗುಡ್ಡದಲ್ಲಿ ನೂರಾರು ಶಿಕ್ಷಕರನ್ನು ಸೃಷ್ಟಿಸಿದ ಬ್ರಹ್ಮ ಇವರ ಗರಡಿಯಲ್ಲಿ ಸೃಷ್ಟಿಯಾದ ಶಿಷ್ಯರ ಬಳಗ ಇಂದು ನಾಡಿನಾದ್ಯಾಂತ ಹಬ್ಬಿದೆ, ಅದರಲ್ಲಿ ಒಂದು ಕುಡಿ ಮುಂದೊಂದು ದಿನ ಜಿಲ್ಲೆಯ ಉಪನಿರ್ದೇಶಕರಾಗಿ ಬದಲಾಗುತ್ತಾರೆ ಎಂದು ಯಾರು ನಿರೀಕ್ಷೆ ಮಾಡಿರಲಿಕ್ಕಿಲ್ಲ ಆದರೆ ಆದದ್ದು ಈಗ ಇತಿಹಾಸ ಅವರೆ ಬಷೀರ್ ಅಹ್ಮದ್ ಕೆ ನಂದನೂರು ಇವರು ನಮಗಿಂತ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರು ಆರಂಭದಲ್ಲಿ ಪರಿಚಯ ಅಷ್ಟ ಕ್ಕಷ್ಟೆ ಆದರೆ ಒಡನಾಟ ಬಂದದ್ದು ನಾನೂ ಒಂದು ಹಂತಕ್ಕೆ ಬಂದ ಮೇಲೆಯೇ ಅಂದರೆ ಪ್ರೌಢಶಾಲೆಯ ಶಿಕ್ಷಕರಾದ ನಂತರ. ಇವರ ಸಂಬಂಧಿ ಶ್ರೀ ಎ ಎಚ್ ಮೋಮಿನ ಕೂಡಾ 1994ರಲ್ಲಿ ಪ್ರೌಢಶಾಲೆಯ ಶಿಕ್ಷಕರಾದರು ಇವರೇನು ಅದೃಷ್ಟದ ಬಲದಿಂದ ಶಿಕ್ಷಕ ರಾದವರಲ್ಲ ಬದಲಾಗಿ ಕಷ್ಟದ ಕುಲುಮೆಯಲ್ಲಿ ಬೆಂದವರೆ .ವೀರಪ್ಪ ಮೊಯ್ಲಿವರು ಮುಖ್ಯ ಮಂತ್ರಿಯಾಗಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮೆರಟ್ ಆಧಾರದ ಮೇಲೆ ಒಂದು ನೈಯಾ ಪೈಸೆ ಯಾರಿಗೂ ಕೊಡದೆ ಪ್ರೌಢಶಾಲೆಯ ಗುರು ಸ್ಥಾನ ಕ್ಕೇರಿದವರು. ಅವರ ಮತ್ತು ನನ್ನ ಮಾರ್ಗ ಒಂದೆ ಆದ ಕಾರಣ ನನಗಿಂತ ಅವರು ವಯಸ್ಸಿನಲ್ಲಿ ಹಿರಿಯರಾದರೂ ಅವರ ಜೊತೆ ನನ್ನ ಗೆಳೆತನ ಆಳಕ್ಕೆ ಇಳಿಯಿತು ಕಾರಣ ಇಷ್ಟೆ ನಮ್ಮಿಬ್ಬರ ಸ್ವಭಾವವು ಒಂದೇ ಆಗಿತ್ತು ಅಂದರೆ ಶಿಸ್ತು ಮತ್ತು ಸತತ ಪ್ರಯತ್ನ .ಇವರ ಸಂಬಂಧಿ ಬಿ ಕೆ ನಂದನೂರ ಆದ ಕಾರಣ ಇವರ ಜೊತೆಗಿನ ಒಡನಾಟ ಹೆಚ್ಚಾಯಿತು.ಇವರ ಬಗ್ಗೆ ಮೊದಲು ಕೇಳಿದ್ದು ಶಿಕ್ಷಣ ಶಾಸ್ತ್ರ ದಲ್ಲಿ ಬುಕ್ ಬರೆದಿದ್ದಾರೆ ಎಂದು . ಆದರೆ ನಂತರ 1993 ರಲ್ಲಿ ಕೆ ಇ ಎಸ್ ಪಾಸಾಗಿ ಗುಬ್ಬೆವಾಡದಲ್ಲಿ ಮುಖ್ಯೋ ಪಾಧ್ಯಾರಾದಾಗಲೆ ಇವರ ಪ್ರತಿಭೆ ಅನಾವರಣವಾದದ್ದು . ಶಿಸ್ತಿನ ಸಿಪಾಯಿ ,ಯಾವಾಗಲೂ ಎಡಗೈಯಲ್ಲಿ ಒಂದು ಪುಸ್ತಕ, ನಡಿಗೆ ಗತ್ತು ನೋಡುಗರ ಹೊಟ್ಟೆ ಉರಿಯುವಂತೆ ಮಾಡುತ್ತಿತ್ತು ಆದರೆ ಅದಾವುದಕ್ಕೆ ಅವರು ತಲೆ ಕೆಡಿಸಿಕೂಂಡವರಲ್ಲ. ಬಿ ಕೆ ನಂದನೂರ ಸರ್ ಮೊಗಲಾಯಿ ಭಾಗದಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ (ಬೀದರ ರಾಯಚೂರ ಗುಲ್ಬರ್ಗ ಜಿಲ್ಲೆಗಳನ್ನು) ನಾನು ಬಿ ಸಾಲವಾಡಗಿಯಲ್ಲಿ ಪ್ರೌಢಶಾಲೆಯ ಶಿಕ್ಷಕರಗಿ ಸೇವೆ ಸಲ್ಲಿಸುತ್ತಿದ್ದೆ ಆವಾಗ ನನಗೆ ಬಾಗಲಕೋಟೆಯ ಪ್ರತಿಭಾವಂತ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ತರಬೇತಿಗೆ ಹಾಕಿದ್ದರು ಆ ಸಂದರ್ಭ ದಲ್ಲಿ ಅವರು ಕೂಡಾ ಅಲ್ಲಿಗೆ ಬಂದಿದ್ದರು.ಆ ತರಬೇತಿಯ ಬಿಡುವಿನಲ್ಲಿ ನಾವು ಗುಳೇದಗುಡ್ಡ ಭಂಡಾರಿ ಕಾಲೇಜಿನ ವಿದ್ಯಾರ್ಥಿಗಳು ಎನ್ನುವ ಸೌಜನ್ಯ ದ ಮಾತುಕತೆ ಪ್ರಾರಂಭಿಸಿದೆವು " ಸರ್ ,ತಾವು ಅಧಿಕಾರಿಗಳಾಗಿದ್ದಿರಾ ನಾವು ಕೇವಲ ಪಾಠ ಮಾಡುವ ಮೇಷ್ಟ್ರು ಎಂದೆ " ಆವಾಗ ಅವರು ಏನು ಹೇಳಿದರು ಅಂದರೆ ಗೌಡರೆ ತಾವು ಮಕ್ಕಳ ಮುಂದೆ ನೆಮ್ಮದಿಯಾಗಿ ಪಾಠ ಮಾಡತಾ ಇರುತ್ತೀರಿ ಆದರೆ ನಾವು ದಿನ ಬೆಳಗಾದರೆ ಹೆಬ್ಬಟ್ಟಿನವಾನಾದರೂ ಸರಿ ಟೇಬಲ್ಲಿನ ಮೇಲೆ ಗುದ್ದಿ ಹೇಳಿದರೂ ಸರಿ,ಆತ್ಮಕ್ಕೆ ಒಪ್ತಿತವೋ, ಇಲ್ಲವೋ ಅವರಿಗೆ ನೋವಾಗದಂತೆ ನಟಿಸಿ ಕಳಿಸಬೇಕುಗುತ್ತದೆ ನಮ್ಮ ಡ್ಯೂಟಿ ಎನ್ನಬೇಕೆ !. ನನಗೆ ಅರಿವಿಲ್ಲದೆ ನನ್ನ ಮನ ಪಟಲದ ಮೇಲೆ "ಇರುವ ಭಾಗ್ಯವ ನೆನೆದು ಬಾರೆನೆಂಬದು ಬೀಡು ಸ್ವರ್ಗ ಕ್ಕಿದು ದಾರಿ" ಎಂಬ ಡಿ ವಿ.ಜಿ ಯವರ ಮಾತು ಒಂದು ಸಾರೆ ಸುಳಿದು ಹೋಯಿತು. ತದನಂತರ ಅವರು ಶಿಕ್ಷಣಾಧಿಕಾರಿಯಾಗಿ ಉಪನಿರ್ದೇಶಕರಾಗಿ,ಡೈಟ್ ಕಾಲೇಜು ಪ್ರಾಚಾರ್ಯ ರಾಗಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ತಮ್ಮ ದಕ್ಷ ಸೇವೆ ಸಲ್ಲಿಸಿ ಹೆಸರು ಮಾಡಿದ್ದಾರೆ.ಇವರಿಗೂ ಸಿ ಎಮ್ ಜೋಶಿಯವರಿಗೂ ಅತ್ಯಂತ ಗಳ್ಳಸ್ಯ ,ಗಂಟಸ್ಯ ಗೆಳೆತನ ಕಾಲೇಜು ದಿನಗಳಲ್ಲಿಯೆ ಇವರ ಗೆಳೆತನ ಬೆಳೆದಿತ್ತು.ಅದು ಈಗಲೂ ಹಸಿರಾಗಿದೆ ಆ ಮಾತು ಬೇರೆ .ಡಾ ಸಿ ಎಮ್ ಜೋಶಿ ಸರ್ ಒಳ್ಳೆಯ ಸಂಘಟನಾ ಚತುರ, ಕವಿ, ಸಾಹಿತಿ, ಉಪನ್ಯಾಸಕ, ಪತ್ರಕರ್ತ ಅದಕ್ಕೆ ಅಲ್ಲವೆ ಇಂದು ಗೆಳೆಯ ಬಿ ಕೆ ನಂದನೂರವರ ಅಭಿನಂದನಾ ಗ್ರಂಥದ ಮುಂದಾಳತ್ವ ವಹಿಸಿದ್ದು. ಇರಲಿ ಮೊನ್ನೆ ಕೆಲವು ದಿನಗಳ ಹಿಂದೆ ಡಾ.ಸಿ.ಎಮ್ ಜೋಶಿ ತಮ್ಮ ಮೊಮ್ಮಗನ ನಾಮಕರಣ ಇಟ್ಟುಕೊಂಡಿದ್ದರು ಅಲ್ಲಿಯೂ ಬಿ ಕೆ ನಂದನೂರ ಹಾಜರ್ ಕಾರಣವಿಷ್ಠೆ ಗೆಳೆತನದ ವಿಷಯದಲ್ಲಿ ಎಂತಹ ಒತ್ತಡವಿರಲಿ ಇವರು ಹಾಜರಾಗುತ್ತಾರೆ ಎನ್ನುವ ಮಾತನ್ನು ನಾನು ಹೇಳಬೇಕಾಗಿದೆ .ಈ ಸಂದರ್ಭ ದಲ್ಲಿ ನಮ್ಮ ಕಾಲೇಜಿನ ಬಳಗವು ಹೋಗಿದ್ದೆವು ಆವಾಗ ಅವರು ಹೇಳಿದರು "ನಿಮ್ಮ ಕಾಲೇಜಿಗೂ ಒಂದು ಇಂನ್ಟ್ರಾಕ್ಸನ್ ಬೋರ್ಡ ಬರುವ ಹಾಗೆ ಮಾಡಿದ್ದೇನೆ ಎಂದರು"ಹುಟ್ಟಿ ಬೆಳೆದ ,ಕಲಿತ ಶಾಲೆಗೆ ಅವರ ಕಾಳಜಿಯನ್ನು ನಾವು ಮನಸಾರೆ ವಂದಿಸಿದೆವು.ಅವರು ಎಂತಹ ಹುದ್ದೆಯಲ್ಲಿರಲಿ,ಕೆಲಸದ ಒತ್ತಡ ವಿರಲಿ ಗುಳೇಗುಡ್ಡ ಕಾರ್ಯಕ್ರಮಕ್ಕೆ ತಪ್ಪಿಸಿದ್ದು ನಾನು ನೋಡಿಲ್ಲ.ಅದು ಭಂಡಾರಿ ಕಾಲೇಜಿನ ಕಾರ್ಯಕ್ರಮ ವಿರಬಹುದು ಅಥವಾ ಸಾಹಿತ್ಯದ ಕಾರ್ಯಕ್ರಮ ವಿರಬಹುದು, ಹಾಜರಾಗಿರುತ್ತಾರೆ ಮತ್ತು ತಾನು ಬೆಳದು ಬಂದ ದಾರಿಯನ್ನು, ಕಲಿಸಿದ ಗುರಗಳನ್ನು ಗೆಳೆಯರನ್ನು ಹೃದಯ ತುಂಬಿ ನೆನಪಿಸಿಕೊಳ್ಳುತ್ತಾರೆ. ಇದೆ ಅಲ್ಲವೆ ಮನುಷತ್ವ. ಬಷಿರ್ ಅಧಿಕಾರ ದರ್ಪದಿಂದ ಇದ್ದಾನೆ ಎನ್ನುವ ಮಾತನ್ನು ಕೇಳಿದ್ದೇನೆ ಅವರಲ್ಲಿರುವ ಹೃದಯ ಸಿರಿವಂತಿಕೆಯ ಅರಿಯದ ಜನ ಹಾಗೆ ಅಂದಿರಲೂಬಹುದು.ಕೆಲವೊಮ್ಮೆ ನಾವು ನಮ್ಮ ಹುದ್ದೆಗೆ ತಕ್ಕದಾಗಿ ನಡೆದು ಕೊಳ್ಳಬೇಕಾಗುತ್ತದೆ,ಅದು ಅನಿವಾರ್ಯ ಕೂಡಾ.ಅವರು ನಿವೃತ್ತಿಯಾದ ಮೇಲೂ ನಮಗೆ ಮತ್ತು ನಮ್ಮ ಇಲಾಖೆಗೆ ಅವರ ಮಾರ್ಗದರ್ಶನ ಬೇಕಾಗಬಹುದು ಅದನ್ನು ನಾವು ಸರಿಯಾಗಿ ಬಳಸಿಕೊಳ್ಳೊಣ ಅವರ ಶ್ರೀಮತಿಯವರೂ ಕೂಡಾ ಶಾಲಾ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ದಕ್ಷತೆಗೆ ಇನ್ನೂಂದು ಹೆಸರೆ ಕಿಲ್ಲೆದಾರ, ಕಿಲ್ಲಾ ಎಂದರೆ ಕೋಟೆ ಶಾಲಾ ಶಿಕ್ಷಣ ಇಲಾಖೆಯಲ್ಲಿ ಗುಣಮಟ್ಟದ ಶಿಕ್ಷಣದ ಕೋಟೆಯಂತೆ ಕೆಲಸ ಮಾಡುತ್ತಿದ್ದು ಈ ವಿಷಯದಲ್ಲಿ ಅವರು ಅದೃಷ್ಟ ಶಾಲೆಗಳ ಶಿಕ್ಷಣದ ಭದ್ರ ಬುನಾದಿಯನ್ನು ಕಟ್ಟಲು ಈ ಕುಟುಂಬ ಸಂಪೂರ್ಣವಾಗಿ ತೊಡಗಿಕೊಂಡಿದೆ ಸದ್ಯ ಡೈಟ್ ಪ್ರಾಚಾರ್ಯ ರಾಗಿರುವ ಬಿ ಕೆ ನಂದನೂರವರ ನಿವೃತ್ತಿ ಬದುಕು ಸುಖವಾಗಲಿ , ಅಲ್ಲಾ ಮತ್ತು ಶಿವ ಅವರಿಗೆ ಆಯುಸ್ಯ ಆರೋಗ್ಯ ದಯಪಾಲಿಸಲಿ ಎಂದು ಆಶಿಸುತ್ತೇನೆ.
Subscribe to:
Post Comments (Atom)
"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"
ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...
-
🌺 ಪ್ರಿಯ ಮಿತ್ರರೇ 💐🙏 ಭಾರತದ ಇತಿಹಾಸದಲ್ಲಿ ಗುಪ್ತರ ಕಾಲವನ್ನು "ಸುವರ್ಣಯುಗ" ಎಂದು ಕರೆಯಲಾಗುತ್ತದೆ, ಆದ್ದರಿಂದ ಕೆಎಎಸ್, ಪಿಎಸ್ಐ, ಇಎಸ್ಐ, ಎಸ್ಡಿಎ, ...
-
ಬಸವೇಶ್ವರರ ಸಾಮಾಜಿಕ –ಧಾರ್ಮಿಕ ಸುಧಾರಣೆಗಳು ಬಸವೇಶ್ವರರು ಬಾಗೆವಾಡಿಯಲ್ಲಿ ಮಾದರಸ ಮಾದಲಾಂಬಿಕೆಯ ಮಗನಾಗಿ ಜನಿಸಿ ಜಾತವೇದ ಮುನಿಗಳಲ್ಲಿ ವಿದ್ಯಾಭ್ಯಾಸ ಮಾಡಿ ಬಿಜ್ಜಳನ ಆಸ...
-
ಅಕ್ಬರನ ಸಾಧನೆಗಳು ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗ...
No comments:
Post a Comment