Monday, January 20, 2025

ಕಣ್ಣಿನ ಕುಡಿ ನೋಟ

ಯಾವ ಕಲೆಗಾರನ ಕುಂಚದ ಕುಡಿಯಿದು
ಕುಡಿನೋಟದಿಂದಲೆ ಕಲ್ಲು ಹೃದಯ
ಕೊಲ್ಲುವ ಕತ್ತಿಯ ಮೊನೆಯಿದು
ಸ್ನಿಗ್ಧ ಸೌಂದರ್ಯದ ಬಲೆಯಿದು॥

ಯಾರು ಜೀವಕಳೆ ತುಂಬಿದರು 
ಚಿತ್ರಗಾರ ಡಾ ವಿಂಚಿಯ
ಮೊನಾಲೀಸಾ !
ಮುಗ್ಧತೆಯ ಮಡಿಲು ಸೌಂದರ್ಯ ಬೆಡಗು
ಬಂದಳು ಕುಂಬ ಮೇಳದ ರುದ್ರಾಕ್ಷಿ ಬಾಲೆಯಾಗಿ॥

ಯಾವ ಜಂಗಮವಾಣಿಯ ರಸಗವಳ 
ಹೊಂಗನಸಿನ ಸಂಗೀತದ  ಹೊಸರಾಗವಿದು।
ರಂಭೆ ಊರ್ವಸಿಯೂ ನಸುನಾಚುವಂತೆ
ಸೇರಹಿಡಿದ ಗೊಂಬೆಯ ಬಿಂಬವಿದು॥

ಯಾರು ಸೆರೆಹಿಡಿದು ತೇಲಿ ಬಿಟ್ಟರು
ಈ ಬ್ರಹ್ಮ ಗೀಚಿದ ಚಿತ್ರ ಬರಹ।
ಸಾವಿರ ಮನಸ್ಸುಗಳ ಸೂರೆಗೊಂಡು
ದೂರ ಉಳಿವ ಕೃಷ್ಣನ ಕೈಚಳಕವಿದು॥

ಯಾವ ಹಳ್ಳಿಯ ಹೈದನ 
ತೋಟದಲ್ಲರಳಿದ ಚೆಂಗುಲಾಬಿಯಿದು ।
ಪರಿಮಳ ಸೂಸುವ ಮಲ್ಲಿಗೆಯು
ಸುರಿಯುತಿದೆ ಎಲ್ಲೆಲ್ಲೋ ಮುಂಗಾರು ಮಳೆ ॥

ಯಾವ ಪ್ರಕೃತಿಯು ನೀಡಿದ ಆಕೃತಿಯಿದು
ಬಣ್ಣವೆ ಬಡಿವಾರವೆಂದ ಬಂಡವಾಳವೆ ಬಯಲು।
ಬಣ್ಣಿಸುವ ಪದಗಳು ಬರಿದು ಮಾಡಿದವಳಿವಳು  
ಆಶೆಗಣ್ಣಿಗೆ ಉಷ್ಣ ವೇರಸಿದ ಕೃಷ್ಣವೇಣಿಯಿವಳು॥

  

1 comment:

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...