Sunday, July 27, 2025

ಬದುಕು ಬಂಗಾರ

ಬೆನ್ನು ಬಾಗಿ, ಕಣ್ಣು ಮಂಜಾದವು
ಅನ್ನಹುಡುಕಲು ಅನುದಿನವೂ ಪಯಣ 
ತನ್ನವರು ತಂದು ಹಾಕುವುದೇ 
ಪರಹಾರವೆನ್ನದೆ ತಾ ದುಡಿದುದೆ ಪರಮಾನ್ನ //

ಬಿಸಿ ರಕ್ತ ಬಸಿಯುವಾಗ ಹೊಸ ಹುರುಪು
ಕುಸಿಯಿಂದ ಹೊಸ ನಗುವಿನಾ ಸಂಸಾರ
ಬಿಸಿಲು ಬಾಗಿ ಮುಸ್ಸಂಜೆಯಾವರಿಸಿ
ಕಸುವು ಕತ್ತಲೆಯಾವರಿಸಿದರೆ ಹಸಿವಿಗೆಲ್ಲಿದೆ ಬರ//

ಕಾಸಿಗೂ ಕಾಲಿಗೂ ಚೌಕಾಸಿ 
ನಡೆದಷ್ಟು ಪಡೆಯಲು ನಾ ಮುಂದು ತಾ ಮುಂದು
ನಡೆಯಿದಿದ್ದರೆ ಪಡೆಯವುದೇನಿದೆ 
ಬದುಕೊಂದು ಕಡೆಗೆ ನರಕದ ಮನೆ //

ಕನಸುಗಳು ಬೆನ್ನೇರಿ ಕವನಗಳ ಕಟ್ಟಿ
ಎಲ್ಲೆಲ್ಲೋ ಕವನ ಸಂಕಲನಗಳೇ
ಮನಸ್ಸುಗಳು ಹದವರಿತು  ಮೌನದಾಲಾಪ
ಮನವೆಲ್ಲಾ ಕಟ್ಟಿದ ಗಾನಗಂಧರ್ವ ಲೋಕ//

ನಡೆದದ್ದು ಬಹುದೂರ ಮಾಡಬೇಕಿದೆ ಪೂರ್ಣ
ಹೆಡೆಯಲ್ಲಿ ತೂಗಾಡಿದೆ ಕೇಸರಿಯ ವರ್ಣ
ಪಡೆಯಲು ದುಡಿಯುವುದೊಂದೆ ಹಂಬಲ
ತಡೆಯಾಲಾರಿಲ್ಲ ಉಳಿದ ಜೀವನವೆ ಬೆಂಬಲ//





 


 




 




No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...