Monday, August 11, 2025

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, 

     ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರೆ ಹಾಗೂ ಮಾದ್ಯಮ ಸ್ನೇಹಿತರೆ
           ಇಂದು ಅಗಸ್ಟ 15, ನಾವೆಲ್ಲ 79 ನೇ ಸ್ವಾತಂತ್ರ್ಯೋತ್ಸವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತ್ತಿದ್ದೇವೆ ಈ ಸಡಗರ ಮತ್ತು ಸಂಭ್ರಮವು ಹಾಗೆಯೆ ಬಂದದ್ದಲ್ಲ  ಸಾವಿರಾರು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳ ಫಲ.1947 ರ ಕ್ಕಿಂತ ಪೂರ್ವ ದಲ್ಲಿ  ಬ್ರಿಟಿಷರು ನಮ್ಮನ್ನಾಳುತ್ತಿದ್ದರು ನಾವೆಲ್ಲ ಗುಲಾಮರಾಗಿದ್ದೆವು. ಭಗತ ಸಿಂಗ , ಚಂದ್ರಶೇಖರ ಅಜಾದ, ಖುದೀರಾಮ ಬೋಸ್, ಉದಯ  ಸಿಂಗ್ ರಂತಹ ಕ್ರಾಂತಿಕಾರಿಗಳು.... ಗೋಪಾಲ ಕೃಷ್ಣ ಘೋಖಲೆ, ಬಾಲಗಂಗಾಧರ ತಿಲಕ, ಸುಭಾಸ್ ಚಂದ್ರ ಬೋಸ್ ಮಹಾತ್ಮಾ ಗಾಂಧೀಜಿಯವರಂತ ರಾಷ್ಟ್ರ ಭಕ್ತ ನಾಯಕರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಗಲು ದಾರಿಯಾಯಿತು, ಆ ಕಾರಣಕ್ಕಾಗಿ  ಅಂತಹ ನಾಯಕರನ್ನು  ಇಂದು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಸ್ವಾತಂತ್ರ್ಯ ಸಿಕ್ಕ ಮೇಲೆ ಇಂದು ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಅಂದು ಹಸಿವಿನಿಂದ ಹಡಗಿಗಾಗಿ ಹಪಿಹಪಿಸುತ್ತಿದ್ದ ನಾವು ಹಸಿರು ಕ್ರಾಂತಿಯನ್ನು ಮಾಡಿ ವಿದೇಶಗಳಿಗೆ ಆಹಾರ ರಫ್ತು ಮಾಡುವ ದೇಶವಾಗಿದ್ದೇವೆ.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳ ರಾಷ್ಟ್ರಗಳಿಗೆ ಸಮವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ, ಚಂದ್ರನ ಮೇಲೆ ಉಪಗ್ರಹ ಕಳುಹಿಸಿದ್ದೇವೆ, ವಿದೇಶಗಳು ಕ್ರಯೋಜನಿಕ್ ತಂತ್ರಜ್ಞಾನ ನೀಡಲು ನಿರಾಕರಿಸಿದರೂ ಸ್ವದೇಶಿ ಕ್ರಯೋಜನಿಕ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಣು ಶಕ್ತಿ ಮತ್ತು ಅಂತರಿಕ್ಷ ಯಾತ್ರೆ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದ್ದೇವೆ.ವೈರಿ ರಾಷ್ಟ್ರ ಗಳು ಬಂದು ವೈದ್ಯಕೀಯ ಸೌಲಭ್ಯ ಪಡೆದು ಹೋಗಬಹುದಾದ ವೈದ್ಯಕೀಯ ಸೌಲಭ್ಯಗಳು ನಮ್ಮಲ್ಲಿವೆ . ಪಹಲ್ಗಾಮನಲ್ಲಿ ಭಯೋತ್ಪಾದಕರು ನೀಡಿದ ಅಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ್ದೇವೆ, ಇದು ನಮ್ಮ ಹೆಮ್ಮೆಯ ಸಂಗತಿಯಾದರೂ ಇನ್ನೂ ನಮ್ಮ ದೇಶವನ್ನು ಕೆಲವೊಂದಷ್ಟು ಸಮಸ್ಯೆಗಳು  ಕಾಡುತ್ತಿವೆ. ನಿರುದ್ಯೋಗ ಸಮಸ್ಯೆಯಿರಬಹುದು,ಜಾತೀಯತೆ,ಬಡತನ,ಪ್ರಾದೇಶಿಕತೆ, ಭಯೋತ್ಪಾದಕತೆ ಮುಂತಾದವು. ಇವುಗಳನ್ನು ಬುಡ ಸಮೇತ ಕೀಳಲು ನಾವೆಲ್ಲ ಸಿದ್ಧರಾಗಬೇಕಾಗಿದೆ ...ಈ ದೇಶ ನನಗೇನೂ ನೀಡಿದೆ ಎಂದು ಪ್ರಶ್ನೆ ಹಾಕಿಕೊಳ್ಳದೆ ದೇಶಕ್ಕಾಗಿ ನಾನು ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ,  ದೇಶಕ್ಕಾಗಿ ದುಡಿಯುವುದೆಂದರೆ ಗಡಿಯಲ್ಲಿ ಹೋಗಿ ಯುದ್ದ ವನ್ನೆ ಮಾಡಬೇಕೆಂದೇನೂ ಇಲ್ಲ ಪ್ರತಿಯಬ್ಬರೂ ನಮ್ಮ ನಮ್ಮ ಕರ್ತವ್ಯ ವನ್ನು ನಿಷ್ಠೆಯಿಂದ, ಬದ್ಧತೆಯಿಂದ, ಸಮರ್ಪಣಾ ಮನೋಭಾವದಿಂದ ಮಾಡಿದರೆ ಅದೇ ರಾಷ್ಟ್ರ ಕ್ಕೆ ನಾವು ಮಾಡಬಹುದಾದ ದೊಡ್ಡ ಸೇವೆ ಅದನ್ನು ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ತಮ್ಮ ತಮ್ಮ ಕಾರ್ಯ ವನ್ನು ಮಾಡಿ ದೇಶದ ಅಭಿವೃದ್ಧಿಗೆ ನಮ್ಮ ಪಾಲನ್ನು ಅರ್ಪಿಸೋಣ. 
         ಜೈ ಹಿಂದ್ ,ಜೈ ಕರ್ನಾಟಕ 

Wednesday, August 6, 2025

ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ

ಅಂಕಗಳ ವೈಭವೀಕರಣಕಿರಲಿ ಅಂಕುಶ
ಅತಿಯಾದರದು ಮಗುವಿನ ಶಿಕ್ಷಣದ ಪಾಶ
ಮಿತಿ ಇರಲಿ, ಹಿತವಾಗಿದ್ದರದು ಅಳತೆಯ ಕೋಲು
ಸತತಪ್ರಯತ್ನವಿಲ್ಲದಿದ್ದರೆ ಪರಿಪೂರ್ಣತೆಗೆ ಸೋಲು ।।

ಅಂಕಗಳೆ ಅಂತಿಮವಲ್ಲ ಆದಿಯೂ ಅಲ್ಲ
ಸಾಧನೆಗದು ಊರುಗೋಲು ಮಾತ್ರ 
ಅದರಾಚೆಗೂ ಒಂದು ಬಾಳಿದೆ, ಬದುಕಿದೆ
ಬರದಿದ್ದರೆ ಏನ್ ? ಬೆದರುವುದು ಸಾಕು ।

ಪಠ್ಯ ದೊಂದಿಗೆ ಪುಟ್ಟದೊಂದು ಅವಕಾಶ
ಕಟ್ಟಿಕೊಳ್ಳಲು ಎಣಿಸಬೇಡ ಮೀನಾ ಮೇಷ 
ಪಟ್ಟಿಯೊಂದಿಗೆ ಬಂದಿದೆ ಮತ್ತೊಂದು ವರುಷ
ಪಠ್ಯೇತರ ಚಟುವಟಿಕೆಯಾಗಲಿ ಈ ವರುಷ ಹರುಷ

ಇಂಪಾಗಿ ಹಾಡು ತಂಪಾಗುವುದು ಜಗವೆಲ್ಲ
ಬಿಡಿಸಿ ಚಿತ್ರ ,ಮಾಡು ನೃತ್ಯ ಗಳಿಸುವೆ ಸಮಚಿತ್ತ
ಕಡೆಗಾಣಿಸದಿರು ಬಿಡುವು,  ಅಡು ನೀ ಆಟ
ಬಿಡದೆ ನಡೆಯುವುದು ದೇಹವೆಂಬ ರಥದ ಓಟ||

ಪ್ರಬಂಧ ರಸಪ್ರಶ್ನೆಯ, ಬೆಳೆಸು ಸಂಬಂಧ 
ಆಲಸ್ಯ ವೆಂಬುದು ದೇಹಕ್ಕಂಟಿದ ತುಕ್ಕು
ಮಿಕ್ಕಿ ನಡೆದರೆ ನೀನಾಗುವೆ ಚೊಕ್ಕ ಚಿನ್ನ
ಹೆಕ್ಕಿ ತೆಗೆಯಲಿದು ತಕ್ಕ ಸಮಯದ ಬಂಧನ॥

ವ್ಯವಸ್ಥೆಯೆಂಬದು ಚದುರಂಗದಾಟ
ನಾವದರ ಪದಾತಿ ದಳ, ನಡೆಸುವವನ ಸಾಮರ್ಥ್ಯ
ನಡೆಯುವವನ ಅವದಾನವಿಲ್ಲದಿದ್ದರೆ ನಡೆ ವ್ಯರ್ಥ 
ಕಡೆಗಣಿಸಿ ಬಿಡಬೇಡ, ನಡೆ ನೀನಾಗಹುದು ಮಂತ್ರಿ ॥




Tuesday, August 5, 2025

ಹರ್ಷ ವರ್ಧನ

ಮೂಲಪುರುಷ : ಪುಷ್ಯ ಭೂತಿ 
ಪ್ರಭಾಕರ ವರ್ಧನ. ಹೆಂಡತಿ ಯಶೋಮತಿ
          ..... ಮಕ್ಕಳು....
1 ರಾಜವರ್ಧನ.-2 ಹರ್ಷವರ್ಧನ -  3 ರಾಜಶ್ರೀ
      ¥               (ಶೀಲಾದಿತ್ಯ)  ( ಗೃಹವರ್ಮನ ಶಹೆಂಡತಿ)
                         ಥಾನೇಶ್ವರ.            ಕನೌಜ 
1 ಗೃಹವರ್ಮನು ಗೌಡದೇಶದ ಶಶಾಂಕನಿಂದ ಹತ್ಯೆಯಾದ
2 ರಕ್ಷಣೆಗೆ ಹೋದ ರಾಜವರ್ಧನನೂ ಕೂಡಾ ಹತ್ಯೆಯಾದ
ಪರಿಣಾಮವಾಗಿ
3 ಸಾ ಶ.606 ರಲ್ಲಿ  ಹರ್ಷವರ್ಧನ ಅಧಿಕಾರಕ್ಕೆ ಬಂದ
ಅವನು ಎದುರಿಸಿದ ಸವಾಲುಗಳು.
1 ರಾಜಶ್ರೀ ಬಿಡುಗಡೆ
2 ಶಶಾಂಕನ ಮೇಲೆ ಸೇಡು ತೀರಿಸಿಕೊಳ್ಳುವುದು.

1 ಕಾಮರೂಪದ ಬಾಸ್ಕರ ವರ್ಮನ ಜೊತೆಗೂಡಿ ಗಾವುಡ ದೇಶದ ಶಶಾಂಕ ನನ್ನು ಸೋಲಿಸಿ ಸೇಡು ತೀರಿಸಿಕೊಂಡ.
ಕಷ್ಟ ಪಟ್ಟು ತಂಗಿ ರಾಜಶ್ರೀಯನ್ನು ಹುಡುಕಿ ರಕ್ಷಣೆ ಮಾಡಿದ ಮತ್ತು ಕನೌಜ್ ನ್ನು ತನ್ನ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡ. 
2 ಮಾಳ್ವ ದೇಶದ ದೇವಗುಪ್ತನನ್ನು ಸೋಲಿಸಿ ರಾಜ್ಯ ವನ್ನು ಸಾಮ್ರಾಜ್ಯ ದಲ್ಲಿ ಸೇರಿಸಿಕೊಂಡ.
3 ಸಾ.ಶ 612 ಪಂಜಾಬನ ಪಂಚ ಸಿಂಧೂ ಮೇಲೆ ಅಧಿಪತ್ಯ ಸಾಧಿಸಿದ.
4 ಕನೌಜ,ಬಿಹಾರ  ಓರಿಸ್ಸಾ ಗೆದ್ದ.
5 ವಲ್ಲಭಿಯ ಧೃವಸೇನನ್ನು ಸೋಲಿಸಿ ಮಗಳನ್ನು ನೀಡಿದ.
6 ಗಾವುಡ ದೇಶದ ಶಶಾಂಕ ನ ಮರಣದ ನಂತರ ಒಡಿಶಾ,ಮಗದ,ಒಡಿಶಾದ ಕೊಂಗಂಡಗಳು ಇವನ ಅಧೀನಕ್ಕೆ ಬಂದವು.
7 ನೇಪಾಳದ ದೊರೆಯನ್ನು ಸೋಲಿಸಿ ಕಪ್ಪು ಕಾಣಿಕೆ ಪಡೆದ.
8 ಸಾಧನೆಯ ಪ್ರತಿಕವಾಗಿ ಉತ್ತರಾ ಪಥೇಶ್ವರನೆಂಬ ಬಿರುದು ಪಡೆದ.
9 ಇಮ್ಮಡಿ ಪುಲಿಕೇಶಯೊಂದಿಗೆ ಕಾಳಗ : ಸಾ ಶ.634ರಲ್ಲಿ
 ನರ್ಮದಾ ಕಾಳಗದಲ್ಲಿ ಸೋತು ಒಪ್ಪಂದ ಮಾಡಿಕೊಂಡ 
 ಇವನ ಸಾಮ್ರಾಜ್ಯ ಉತ್ತರ ದಲ್ಲಿ ಕಾಶ್ಮೀರದಿಂದ ನರ್ಮದಾ ನದಿಯವರೆಗೂ ಪೂರ್ವ ದಲ್ಲಿ ಬಂಗಾಲ ಒರಿಸ್ಸಾದಿಂದ ಪಶ್ಚಿಮದಲ್ಲಿ ಪಂಜಾಬನ ವರೆಗೆ ವಿಸ್ತರಿಸಿತ್ತು.
10 ಧರ್ಮ:ಆರಂಭದಲ್ಲಿ ಶಿವನ ಆರಾಧಕನಾಗಿದ್ದು ನಂತರ ಬೌದ್ಧ ಧರ್ಮ ಸ್ವೀಕರಿಸಿದ, ಪ್ರಾಣಿಬಲಿ ನಿಷೇಧಿಸಿದ
11 ಸಾ ಶ.643 ರಲ್ಲಿ ಕನೌಜನಲ್ಲಿ ಧಾರ್ಮಿಕ ಮಹಾಸಭೆ ಮತ್ತು ಪ್ರಯಾಗದಲ್ಲಿ ಬೌದ್ಧ ಮಹಾಸಮ್ಮೇಳನ ಏರ್ಪಡಿಸಿದ





ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...