ಅಂಕಗಳ ವೈಭವೀಕರಣಕಿರಲಿ ಅಂಕುಶ
ಅತಿಯಾದರದು ಮಗುವಿನ ಶಿಕ್ಷಣದ ಪಾಶ
ಮಿತಿ ಇರಲಿ, ಹಿತವಾಗಿದ್ದರದು ಅಳತೆಯ ಕೋಲು
ಸತತಪ್ರಯತ್ನವಿಲ್ಲದಿದ್ದರೆ ಪರಿಪೂರ್ಣತೆಗೆ ಸೋಲು ।।
ಸಾಧನೆಗದು ಊರುಗೋಲು ಮಾತ್ರ
ಅದರಾಚೆಗೂ ಒಂದು ಬಾಳಿದೆ, ಬದುಕಿದೆ
ಬರದಿದ್ದರೆ ಏನ್ ? ಬೆದರುವುದು ಸಾಕು ।
ಪಠ್ಯ ದೊಂದಿಗೆ ಪುಟ್ಟದೊಂದು ಅವಕಾಶ
ಕಟ್ಟಿಕೊಳ್ಳಲು ಎಣಿಸಬೇಡ ಮೀನಾ ಮೇಷ
ಪಟ್ಟಿಯೊಂದಿಗೆ ಬಂದಿದೆ ಮತ್ತೊಂದು ವರುಷ
ಪಠ್ಯೇತರ ಚಟುವಟಿಕೆಯಾಗಲಿ ಈ ವರುಷ ಹರುಷ
ಇಂಪಾಗಿ ಹಾಡು ತಂಪಾಗುವುದು ಜಗವೆಲ್ಲ
ಬಿಡಿಸಿ ಚಿತ್ರ ,ಮಾಡು ನೃತ್ಯ ಗಳಿಸುವೆ ಸಮಚಿತ್ತ
ಕಡೆಗಾಣಿಸದಿರು ಬಿಡುವು, ಅಡು ನೀ ಆಟ
ಬಿಡದೆ ನಡೆಯುವುದು ದೇಹವೆಂಬ ರಥದ ಓಟ||
ಪ್ರಬಂಧ ರಸಪ್ರಶ್ನೆಯ, ಬೆಳೆಸು ಸಂಬಂಧ
ಆಲಸ್ಯ ವೆಂಬುದು ದೇಹಕ್ಕಂಟಿದ ತುಕ್ಕು
ಮಿಕ್ಕಿ ನಡೆದರೆ ನೀನಾಗುವೆ ಚೊಕ್ಕ ಚಿನ್ನ
ಹೆಕ್ಕಿ ತೆಗೆಯಲಿದು ತಕ್ಕ ಸಮಯದ ಬಂಧನ॥
ವ್ಯವಸ್ಥೆಯೆಂಬದು ಚದುರಂಗದಾಟ
ನಾವದರ ಪದಾತಿ ದಳ, ನಡೆಸುವವನ ಸಾಮರ್ಥ್ಯ
ನಡೆಯುವವನ ಅವದಾನವಿಲ್ಲದಿದ್ದರೆ ನಡೆ ವ್ಯರ್ಥ
ಕಡೆಗಣಿಸಿ ಬಿಡಬೇಡ, ನಡೆ ನೀನಾಗಹುದು ಮಂತ್ರಿ ॥
No comments:
Post a Comment