ಕುಶಾನರು :
· ಮೂಲತಃ ಕುಶಾನರು ಯೂ-ಚೀ ಎಂಬ ಹೆಸರಿನ ಜನಾಂಗಕ್ಕೆ ಸೇರಿದವರಾಗಿದ್ದು ಚೀನಾದಲ್ಲಿ ವಾಸವಾಗಿದ್ದರು.
· ಕುಶಾನರ ಮೊದಲ ದೊರೆ ಕುಜುಲಕಾಡಪ್ಯೆಸಸ್ ಕಾನಿಷ್ಕನು ಕುಶಾನರ ವಂಶದ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು.
· ಇತಿಹಾಸಕಾರರ ಪ್ರಕಾರ ಕಾನಿಷ್ಕನು ಶಕಯುಗದ ಸ್ಥಾಪಕನಾಗಿದ್ದು ಸಾ.ಶ 78 ರಲ್ಲಿ ಈತನ ಸಿಂಹಾಸನರೋಹಣ ನಡೆಯಿತು.
· ಕುಶಾನರು ಚೀನಾದ ಅರಸನಿಗೆ ಕಪ್ಪು ಕಾಣಿಕೆಗಳನ್ನು ಸಲ್ಲಿಸುತ್ತಿದ್ದುದರಿಂದ ಅದನ್ನು ನಿಲ್ಲಿಸಲು ಕಾನಿಷ್ಕನು ಚೀನಾದ ಮೇಲೆ ದಾಳಿ ಮಾಡಿ “ಪಾನ್ ಚೌ” ಎಂಬ ಚೀನಿ ಸೇನಾನಿಯಿಂದ ಸೋಲನ್ನು ಅನುಭವಿಸಿದನು.
· ಕಾನಿಷ್ಕನು ಆರಂಭದಲ್ಲಿ ಹಿಂದೂ ಧರ್ಮದ ಅನುಯಾಯಿಯಾಗಿದ್ದು ಕಾಲಾನಂತರದಲ್ಲಿ ಅಶ್ವಘೋಷನ ಪ್ರಭಾವದಿಂದ ಬೌದ್ಧಧರ್ಮ ಸ್ವೀಕರಿಸಿದನು.
· ಬೌದ್ಧಧರ್ಮ ಪ್ರಸಾರಕ್ಕಾಗಿ ಕಾನಿಷ್ಕನು ತೆಗೆದುಕೊಂಡ ಕ್ರಮಗಳು.
1) ಬೌದ್ಧಧರ್ಮಕ್ಕೆ ಮತ್ತು ಬೌದ್ಧಬಿಕ್ಕುಗಳಿಗೆ ರಾಜಾಶ್ರಯ ನೀಡಿದನು.
2) ಬಿಕ್ಷುಗಳ ಉಪಯೋಗಕ್ಕೆ ವಿಹಾರ ಮತ್ತು ಮಠಗಳನ್ನು ಸ್ಥಾಪಿಸಿದನು.
3) ಧರ್ಮ ಪ್ರಸಾರಕ್ಕೆ ಜಪಾನ್,ಟಿಬೇಟ್ ಮತ್ತು ಮಧ್ಯಪ್ರಾಸ್ತ್ಯ ರಾಷ್ಟ್ರಗಳಿಗೆ ಅನೇಕ ಅನುಯಾಯಿಗಳನ್ನು ಮತ್ತು ನಿಯೋಗಗಳನ್ನು ಕಳುಹಿಸಿದನು.
· ಕಾನಿಷ್ಕನು ಬೌದ್ಧದರ್ಮದಲ್ಲಿ ತಲೆದೋರಿದ ವಿವಾದಗಳನ್ನು ಸರಿಪಡಿಸಲು ಸಾ.ಶ. 102 ರಲ್ಲಿ ಕಾಶ್ಮೀರದ ಕುಂಡಲವನದಲ್ಲಿ 4 ನೇ ಬೌದ್ಧ ಮಹಾಸಮ್ಮೇಳನವನ್ನು ಏರ್ಪಡಿಸಿದನು.
ಗುಪ್ತರು :
· ಮೌರ್ಯರು ಪತನಾನಂತರ ಉತ್ತರಭಾರತವು ಅರಾಜಕತೆ ಮತ್ತು ಅನೈಕ್ಯತೆಯ ಬೀಡಾಗಿತ್ತು ಇಂತಹ ಪರಿಸ್ಥಿತಿಯಲ್ಲಿ ಸಾ.ಶ 300ರಲ್ಲಿ ಗುಪ್ತರು ಪ್ರಬಲ ರಾಜ್ಯ ನಿರ್ಮಿಸಿ ಐಕ್ಯತೆ ಸಾಧಿಸಿದರು.
· ಗುಪ್ತರ ಇತಿಹಾಸವನ್ನು ಅರಿಯಲು ಸಹಾಯಕವಾಗುವ ಪ್ರಮುಖ ಮೂಲಾಧಾರಗಳೆಂದರೆ
1) ಹರಿಷೇಣನಿಂದ ರಚಿತಗೊಂಡ ಅಲಹಬಾದಸ್ತಂಭ ಶಾಸನ ಇದು ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುತ್ತದೆ.
2) ಕಾಳಿದಾಸನ ಕೃತಿಗಳಾದ ಮಾಳವಿಕಾಗ್ನಿ ಮಿತ್ರ, ಶಾಕುಂತಲ, ರಘುವಂಶ, ಕುಮಾರಸಂಭವ ಮೇಘಧೂತ ಋತುಸಂಹಾರ ಪ್ರಮುಖವಾಗಿವೆ.
3) ವಿಶಾಖದತ್ತನ ಮುದ್ರಾರಾಕ್ಷಸ ಮತ್ತು ದೇವಿಚಂದ್ರಗುಪ್ತಂ.
4) ರಾಜ್ಯಶೇಖರನ ಕಾವ್ಯಮೀಮಾಂಸೆ.
5) ಪಾಹಿಯಾನನು ಚೀನಿಯಾತ್ರಿಕನಾಗಿದ್ದು,ಭಾರತದಲ್ಲಿ ಬೌಧ್ದಧರ್ಮದ ತತ್ವಗಳನ್ನು ಅಧ್ಯಯನ ಮಾಡಲು ಭಾರತಕ್ಕೆ ಬಂದಿದ್ದನು ಈ ತನ ಘೋ-ಕೋಕಿ ಎಂಬ ಪುಸ್ತಕ ಪ್ರಮುಖ ಆಧಾರವಾಗಿದೆ.
· ಈ ವಂಶದ ಸ್ಥಾಪಕ ಶ್ರೀಗುಪ್ತ ಸಾ.ಶ 320ರಲ್ಲಿ ಗುಪ್ತಶಕೆ ಆರಂಭವಾಯಿತು. ಪಾಟಲಿಪುತ್ರ ಮತ್ತು ಉಜ್ಜಯನಿ ಇವರ ರಾಜಾಧಾನಿಗಳಾದ್ದವು.
· ಸಮುದ್ರಗುಪ್ತನು ಈ ಸಂತತಿಯ ಶ್ರೇಷ್ಠ ದೊರಯಾಗಿದ್ದು, ಸಾಮ್ರಾಜ್ಯ ವಿಸ್ತರಣೆಗಾಗಿ ಆಶ್ವಮೇಧÀಯಾಗವನ್ನು ನೆರವೇರಿಸಿದನು.
· ಸಮುದ್ರಗುಪ್ತನು ಉತ್ತರಭಾರತದ ದಂಡಯಾತ್ರೆಯನ್ನು ಕೈಗೊಂಡು ನಂದಿನ್, ಬಾಲವರ್ಮ, ನಾಗದತ್ತ, ನಾಗಸೇನ, ರುದ್ರದೇವ ಮುಂತಾದವರನ್ನು ಸೋಲಿಸಿದನು.
· ಸಮುದ್ರಗುಪ್ತನು ದಕ್ಷಿಣ ಭಾರತದ ಮೇಲೆ ದಂಡೆಯಾತ್ರೆ ಕೈಕೊಂಡು ಕೋಸಲದ ಮಹೇಂದ್ರ, ಕಂಚಿಯ ವಿಷ್ಣುಗೋಪ, ಪಿಸ್ತಪುರದ ಮಹೇಂದ್ರ, ದೇವರಾಷ್ಟ್ರದ ಕುಬೇರ ಮುಂತಾದವರನ್ನು ಸೋಲಿಸಿದನು.
· ಈತನು ಶ್ರೇಷ್ಠ ವಿದ್ವಾಂಸನಾಗಿದ್ದು “ಕವಿರಾಜ” ಎಂಬ ಬಿರುದನ್ನು ಹೊಂದಿದ್ದನು.
· ಸಮುದ್ರಗುಪ್ತನ ನಂತರ ಎರಡನೆಯ ಚಂದ್ರಗುಪ್ತನು ಸಿಂಹಾಸನವನ್ನೇರಿದನು. ಈತನು ವಿಕ್ರಮಾದಿತ್ಯ ಎಂದು ಹೆಸರಾಗಿದ್ದನು.
· ಗುಪ್ತರ ಕಾಲದಲ್ಲಿ ಕಾಳಿದಾಸ, ಭಾರವಿ, ದಂಡಿ, ಶೂದ್ರಕರಂತಹ ಕವಿಗಳಿದ್ದು “ಕಿರಾತಾರ್ಜುನೀಯಂ” ಕೃತಿಯನ್ನು ಭಾರವಿ, ಅಮರಕೋಶವನ್ನು ಅಮರಸಿಂಹ ರಚಿಸಿದನು.
· ಈ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದ್ದು ತಕ್ಷಶಿಲಾ,ನಳಂದ,ಅಜಂತ, ಸಾರನಾಥಗಳು ಪ್ರಮುಖ ವಿಶ್ವವಿದ್ಯಾನಿಲಯಗಳಾಗಿದ್ದವು.
· ಆರ್ಯಭಟ ಶ್ರೇಷ್ಠ ಗಣಿತಶಾಸ್ತ್ರಜ್ಞನಾಗಿದ್ದು, “ಆರ್ಯಭಟೀಯಂ” ಕೃತಿ ರಚಿಸಿದನು.
· ವರಾಹಮಿರ ಶ್ರೇಷ್ಠ ವಿಜ್ಞಾನಿಯಾಗಿದ್ದು, ಬೃಹತ ಜಾತಕ, ಲಘು ಜಾತಕ, ಬೃಹತ ಸಂಹಿತೆ ಕೃತಿಗಳನ್ನು ರಚಿಸಿದನು.
· ಈ ಅವಧಿಯಲ್ಲಿ ಧನ್ವಂತ್ರಿಯನ್ನು ಭಾರತೀಯ ವೈಧ್ಯಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.
· ದೆಹಲಿ ಸಮೀಪದ ಮೆಹ್ರೌೀಲಿ ಕಬ್ಬಿಣ ಸ್ತಂಬಶಾಸನ ಪ್ರಮುಖವಾಗಿದೆ.
· ಮಥುರಾ,ಬನಾರಸ, ಪಾಟ್ನಾ, ಉದಯಗಿರಿ, ದೇವಗಡ್ ಮುಂತಾದವುಗಳು ಗುಪ್ತರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳಾಗಿದ್ದವು.
ಚೋಳರು :
· ದಕ್ಷಿಣ ಭಾರತದ ಸಾಮ್ರಾಜ್ಯಗಳಲ್ಲಿ ಚೋಳ ಸಾಮ್ರಾಜ್ಯ ಅತ್ಯಂತ ಪ್ರಾಚೀನವಾಗಿದ್ದು ಅವರ ಇತಿಹಾಸವು ಸಂಘಂ ಯುಗದಿಂದ ಆರಂಭವಾಗುತ್ತದೆ ಸಂಘಂ ಎಂದರೆ ತಮಿಳು ಸಾಹಿತ್ಯ ಸಂಘ ಎಂದರ್ಥ.
· ತಿರುಕ್ಕುರಳ್, ಶಿಲ¥ದಿÀಗಾರಂ ಮತ್ತು ಮಣಿಮೇಗಲೈ ಸಂಘಂ ಯುಗದ ಪ್ರಮುಖ ಕೃತಿಗಳಾಗಿವೆ
· ಇಳೈಯಾನ ಚೋಳನು ಸಂಘಂ ಕಾಲದ ಚೋಳರ ಮೊದಲ ದೊರೆಯಾಗಿದ್ದುನು.
· ಒಂದನೇ ಪರಾಂತಕನ ಉತ್ತರಮೆರೂರು ಶಾಸನ ಚೋಳರ ಗ್ರಾಮಾಡಳಿತವನ್ನು ತಿಳಿಸುತ್ತದೆ.
· ಸಾ. ಶ 949ರಲ್ಲಿ ಚೋಳ ಮತ್ತು ರಾಷ್ಟ್ರಕೂಟರ ನಡುವೆ ತಕ್ಕೊಳಂ ಕದನ ನಡೆಯಿತು.
· ಸಾ.ಶ 1009ರಲ್ಲಿ ಒಂದನೇ ರಾಜರಾಜಚೋಳನು ತಂಜಾವುರಿನಲ್ಲಿ ರಾಜರಾಜೇಶ್ವರ ದೇವಾಲಯವನ್ನು ನಿರ್ಮಿಸಿದನು.
· ಒಂದನೇ ರಾಜೇಂದ್ರಚೋಳನಿಗೆ ಪಂಡಿತ ಚೋಳ, ಗಂಗೈಕೊಂಡಕೋ¼,À ಕೇದಾರಕೊಂಡ ಎಂಬ ಬಿರುದುಗಳಿದ್ದವು.
· ಉತ್ತರ ಮೆರೂರು ಗ್ರಾಮವನ್ನು ವಿಭಾಗಿಸಿ ಪ್ರತಿ ವಿಭಾಗದಿಂದ ಒಬ್ಬೊಬ್ಬ ಸದಸ್ಯರನ್ನು ಒಂದು ವರ್ಷದ ಅವಧಿಗೆ ಕುಡುವಲೈ ಪದ್ದತಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು.
· ಕುಡುವಲೈ ಎಂದರೆ ಅದೃಷ್ಟ ಪÀದ್ದತಿಯಾಗಿದೆ.
· ಆಯ್ಕೆಯಾದ ಪ್ರತಿನಿಧಿಗಳು ಕಾರ್ಯನಿರ್ವಹಿಸುವ ಸಮಿತಿಗಳನ್ನು ವರಿಯಂ ಎಂದು ಕರೆಯುತ್ತಾರೆ.
ವರ್ಧನರು ಮತ್ತು ಆರಂಭಿಕ ಚಾಲುಕ್ಯರು -ಪಲ್ಲವರು :
· ಗುಪ್ತರ ನಂತರ ತಲೆದೊರಿದ ರಾಜಕೀಯ ಅನೈಕ್ಯತೆಯನ್ನು ಹೋಗಲಾಡಿಸುವಲ್ಲಿ ಪುಷ್ಯಭೂತಿ ಸಂತತಿಯ ವರ್ಧನರು ಯಶಸ್ವಿಯಾದರು.
· ವರ್ಧನರ ಇತಿಹಾಸ ತಿಳಿದುಕೊಳ್ಳಲು ಹ್ಯೂಯತ್ಸ್ಯಾಂಗನ ಸಿ-ಯು-ಕಿ, ಬಾಣಬಟ್ಟನ ಹರ್ಷಚರಿತೆ, ಹರ್ಷವರ್ಧನ ತಾಮ್ರಪಟ ಶಾಸನಗಳು ಪ್ರಮುಖ ಆಧಾರಗಳಾಗಿವೆ.
· ವರ್ಧನರ ಶ್ರೇಷ್ಠ ದೊರೆ ಹರ್ಷವರ್ಧನನಾಗಿದ್ದು, ಪ್ರಭಾಕರವರ್ಧನ ಮತ್ತು ಯಶೋಮತಿ ದಂಪತಿಗಳ ಮಗನಾಗಿ ಜನಿಸಿದನು. ಇವನಿಗೆ ರಾಜವರ್ಧನ ಎಂಬ ಅಣ್ಣ, ರಾಜಶ್ರೀ ಎಂಬ ತಂಗಿ ಇದ್ದಳು. ಥಾಣೇಶ್ವರ ಇವನ ರಾಜಧಾನಿಯಾಗಿತ್ತು. ಇವನು ಉತ್ತರಾಪಥೇಶ್ವರ ಎಂಬ ಬಿರುದು ಹೊಂದಿದ್ದನು.
· ಹರ್ಷವರ್ಧನನು ಧಾರ್ಮಿಕ ಚರ್ಚೆ ಹಾಗೂ ಹ್ಯೂಯತ್ಸ್ಯಾಂಗವನ್ನು ಸತ್ಕರಿಸಲು ಕನೋಜಿನಲ್ಲಿ ಧಾರ್ಮಿಕ ಸಭೆ ಏರ್ಪಡಿಸಿದನು. ಹ್ಯೂಯೆತ್ಸಾಂಗ ಅದರ ಅಧ್ಯಕ್ಷತೆ ವಹಿಸಿದನು. ಅದೇ ರೀತಿ ಸಾ.ಶ 643 ರಲ್ಲಿ ಪ್ರಯಾಗದಲ್ಲಿ ಬೌದ್ಧ ಸಮ್ಮೇಳನ ಏರ್ಪಡಿಸಿದನು.
· ಹರ್ಷವರ್ಧನನು ರತ್ನಾವಳಿ, ಪ್ರಿಯದರ್ಶಿಕಾ, ಮತ್ತು ನಾಗಾನಂದ ಎಂಬ ಕೃತಿಗಳನ್ನು ರಚಿಸಿದನು.
ಆರಂಭಿಕ ಚಾಲುಕ್ಯರು :
· ಕರ್ನಾಟಕ ಮೊದಲ ಅರಸ ಮನೆತನ ಕದಂಬರದ್ದಾಗಿದ್ದು, ಮಯೂರವರ್ಮ ಈ ವಂಶದ ಸ್ಥಾಪಕನಾಗಿದ್ದಾನೆ. ಇವನ ಕಾಲದಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನವನ್ನು ರಚಿಸಲಾಯಿತು.
· ಕರ್ನಾಟಕವನ್ನು ಆಳಿದ ಶ್ರೇಷ್ಠ ಮನೆತನಗಳಲ್ಲಿ ಗಂಗರ ಮನೆತನವೂ ಒಂದಾಗಿದ್ದು ಸಾಹಿತ್ಯ ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಗಂಗರ 4ನೇ ರಾಚಮಲ್ಲನ ಪ್ರಧಾನಮಂತ್ರಿ ಚಾವುಂಡರಾಯ ಸಾ.ಶ 983ರಲ್ಲಿ ಶ್ರವಣಬೆಳಗೊಳದಲ್ಲಿ 58 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವನ್ನು ಕೆತ್ತಿಸಿದನು.
· ಬದಾಮಿ ಚಾಲುಕ್ಯರನ್ನು ಆರಂಭಿಕ ಚಾಲುಕ್ಯರೆಂದು ಕರೆಯಲಾಗಿದೆ “ವರಾಹ” ಇವರ ರಾಜ ಲಾಂಛನವಾಗಿದ್ದು ಬದಾಮಿಯನ್ನು ರಾಜಧಾನಿಯನಾಗಿ ಮಾಡಿಕೊಂಡು ಆಳ್ವಿಕೆ ಆರಂಭಿಸಿದರು. ದಕ್ಷಿಣಾಪಥೇಶ್ವರ ಎಂದು ಬಿರುದಾಂಕಿತನಾದ ಇಮ್ಮಡಿ ಪುಲಕೇಶಿಯು ಈ ವಂಶದ ಶ್ರೇಷ್ಠ ಅರಸನಾಗಿದ್ದನು.
· ಸಾ.ಶ 634ರಲ್ಲಿ ಭಿಕರ ಯುಧ್ದ ಪುಲಕೇಶಿಗೂ ಮತ್ತು ಹರ್ಷವರ್ಧನನಿಗೂ ನರ್ಮದಾ ನದಿ ತೀರದಲ್ಲಿ ಭೀಕರ ಯುಧ್ದ ನಡೆಯಿತು. ಇದನ್ನು ನರ್ಮದಾನದಿ ಕದನ ಎನ್ನುವರು ಇದರಲ್ಲಿ ಜಯಶಾಲಿಯಾದ ಇಮ್ಮಡಿ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಪಡೆದನು. ಇದಲ್ಲದೆ ಸತ್ಯಾಶ್ರಯ, ಮಹಾರಾಜಾಧಿರಾಜ, ಪೃಥ್ವಿ ವಲ್ಲಭ ಎಂಬ ಬಿರುದುಗಳನ್ನು ಹೊಂದಿದ್ದನು.
· ಇಮ್ಮಡಿ ಪುಲಿಕೇಶಿಯ ಸೊಸೆ ವಿಜಯಭಟ್ಟಾರಿಕೆ “ಕೌಮುದಿ ಮಹೋತ್ಸವ” ಕೃತಿಯನ್ನು ರಚಿಸಿದಳು.
· ಇಮ್ಮಡಿ ಪುಲಕೇಶಿಯ ಆಸ್ಥಾನಕವಿ ರವಿಕೀರ್ತಿ ಪುಲಕೇಶಿಯ ದಿಗ್ವಿಜಯಗಳನ್ನು ವಿವರಿಸುವ ಐಹೊಳೆ ಶಾಸನವನ್ನು ರಚಿಸಿದನು.
· ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು ಅರಂಭಿಕ ಚಾಲ್ಯುಕರ ಪ್ರಮುಖ ಕಲಾಕೇಂದ್ರಗಳಾಗಿದ್ದು, ಐಹೊಳೆಯಲ್ಲಿ ಲಾಡಖಾನ್ ದೇವಾಲಯ, ದುರ್ಗದ ದೇವಾಲಯ, ಮೇಗುತಿ ಜೈನ ದೇವಾಲಯ ಪ್ರಮುಖವಾಗಿವೆ.
· ಪಟ್ಟದ ಕಲ್ಲಿನಲ್ಲಿ - ಸಂಗಮೇಶ್ವರ,ವಿರೂಪಾಕ್ಷ, ಮಲ್ಲಿಕಾರ್ಜುನ, ಪಾಪನಾಥ, ಕಾಶಿವಿಶ್ವನಾಥ, ದೇವಾಲಯಗಳು ಪ್ರಮುಖವಾಗಿವೆ.
· ದಕ್ಷಿಣ ಬಾರತದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪಲ್ಲವರು ಅಗ್ರಗಣ್ಯ ಕೊಡುಗೆ ನೀಡಿದ್ದಾರೆ. ಅವರ ಪ್ರಮುಖ ಕಲಾ ಕೇಂದ್ರಗಳೆಂದರೆ,
ಕಂಚಿ, ಮಹಾಬಲಿಪುರಂ
ರಾಷ್ಟ್ರಕೂಟರು :
· ದಕ್ಷಿಣ ಭಾರತದಲ್ಲಿ ಬೃಹತ ಸಾಮ್ರಾಜ್ಯ ಸ್ಥಾಪಿಸಿ ದೀರ್ಘಕಾಲ ಆಳ್ವಿಕೆ ನಡೆಸಿದ ಕೀರ್ತಿ ರಾಷ್ಟ್ರಕೂಟರಿಗೆ ಸಲ್ಲುತ್ತದೆ.
· ಗುಲ್ಬರ್ಗಾ ಜಿಲ್ಲೆಯ ಮಾನ್ಯಖೇಡ ಇವರ ರಾಜಧಾನಿಯಾಗಿತ್ತು. ಗರುಡ ಇವರ ರಾಷ್ಟ್ರಲಾಂಛನವಾಗಿತ್ತು.ದಂತಿದುರ್ಗ ರಾಷ್ಟ್ರಕೂಟರ ಮೊದಲ ದೊರೆಯಾಗಿದ್ದನು.
· ಒಂದನೇ ಕೃಷ್ಣನು ಎಲ್ಲೋರಾದಲ್ಲಿ ಸಾ.ಶ 770 ರಲ್ಲಿ ಏಕ ಶಿಲಾ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು.
· ರಾಷ್ಟ್ರಕೂಟರ ಆರಂಭಿಕ ದೊರೆಗಳಲ್ಲಿ ಧ್ರುವನ ಪ್ರಮುಖನಾಗಿದ್ದು ಧಾರಾವರ್ಷ, ಶ್ರೀವಲ್ಲಭ, ನರೇಂದ್ರದೇವ, ಕಲಿವಲ್ಲಭ ಎಂಬ ಬಿರುದುಗಳನ್ನು ಹೊಂದಿದನು.
· 3ನೇ ಗೊವಿಂದನ ಬಿರುದುಗಳೆಂದರೆ-ಜಗತ್ತುಂಗ, ಪ್ರಭೂತವರ್ಷ, ಶ್ರೀವಲ್ಲಭ, ತ್ರಿಭೂವನದವಳ.
· ಅಮೋಘವರ್ಷನು ರಾಷ್ಟ್ರಕೂಟರ ಪ್ರಸಿದ್ದ ದೊರೆಯಾಗಿದ್ದನು. ಈತನ ಆಸ್ಥಾನಕ್ಕೆ ಸಾ.ಶ-851 ರಲ್ಲಿ ಅರಬ್À ಪ್ರವಾಸಿ ಸುಲೇಮಾನ ಭೇಟಿ ನೀಡಿದನು. ಅಮೋಘವರ್ಷನಿಗೆ ನೃಪತುಂಗ,ವೀರನಾರಾಯಣ, ಶ್ರೀವಲ್ಲಭ, ರಟ್ಟಿಮಾರ್ತಾಂಡ, ಅತಿಶಯದವಳ ಎಂಬ ಬಿರುದುಗಳಿದ್ದವು.
· ರಾಷ್ಟ್ರಕೂಟರು ಸಾಹಿತ್ಯ ಪೋಷಕರಾಗಿದ್ದು ಈ ಅವಧಿಯಲ್ಲಿ ಕನ್ನಡದ ಮೊದಲ ಸಾಹಿತ್ಯ ಕೃತಿ “ಕವಿರಾಜವಮಾರ್ಗ”ಶ್ರೀ ವಿಜಯನಿಂದ ರಚಿಸಲ್ಪಟ್ಟಿತು.
· 3ನೇ ಕೃಷ್ಣನ ಆಸ್ಥಾನದಲ್ಲಿದ್ದ ಪೊನ್ನನು ಶಾಂತಿಪುರಾಣ ಮತ್ತು ಭುವನೈಕ್ಯೆ ರಾಮಾಭ್ಯುದಯ ಎಂಬ ಕೃತಿಗಳನ್ನು ರಚಿಸಿದನು ಇವನಿಗೆ “ಉಭಯಕವಿ ಚಕ್ರವರ್ತಿ” ಎಂಬ ಬಿರುದಿತ್ತು.
· ರಾಷ್ಟ್ರಕೂಟರ ಸಾಮಂತ ಅರಸನಾದ ವೇಮುಲವಾಡದ ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದ ಪಂಪನು ವಿಕ್ರಮಾರ್ಜುನ ವಿಜಯ (ಪಂಪಭಾರತ) ಮತ್ತು ಆದಿಪುರಾಣ ಗ್ರಂಥಗಳನ್ನು ರಚಿಸಿದನು. ಈತನನ್ನು “ಕನ್ನಡದ ಆದಿಕವಿ” ಎಂದು ಕರೆಯಲಾಗಿದೆ. ವಡ್ಡಾರಾಧನೆ ಹಳೆಗನ್ನಡದ ಮೊದಲಗಧ್ಯ ಕೃತಿಯಾಗಿದೆ.
ನಂತರದ ಚಾಲುಕ್ಯರು ಮತ್ತು ಹೊಯ್ಸಳರು :
· ರಾಷ್ಟ್ರಕೂಟರ ಸಾಮಂತರಾಗಿದ್ದ ನಂತರದ ಚಾಲುಕ್ಯರನ್ನು ಕಲ್ಯಾಣದ ಚಾಲುಕ್ಯರೆಂದು ಕರೆಯಲಾಗಿz.É 2ನೇ ತೈಲಪ ಈ ಸಂತತಿಯ ಸ್ಥಾಪಕನಾಗಿದ್ದು ಮಾನ್ಯಖೇಡ ಅವರ ಮೊದಲ ರಾಜಧಾನಿಯಾಗಿತ್ತು ನಂತರ ಅದನ್ನು ಕಲ್ಯಾಣಕ್ಕೆ ವರ್ಗಾಯಿಸಲಾಯಿತು.
· 6ನೇ ವಿಕ್ರಮಾದಿತ್ಯನು ಈ ವಂಶದ ಅತ್ಯಂತ ಪ್ರಮುಖ ಅರಸನಾಗಿದ್ದು ಸಾ.ಶ 1076ರಲ್ಲಿ ವಿಕ್ರಮಶಕೆ ಎಂಬ ಹೊಸಶಕೆ ಆರಂಭಸಿದನು. ಈತನಿಗೆ ಪೆರ್ಮಾಡಿದೇª,À ತ್ರಿಭುವನಲ್ಲ ಎಂಬ ಬಿರುದುಗಳಿದ್ದವು. ಈತನ ಆಸ್ಥಾನದಲ್ಲಿದ್ದ ಬಿಲ್ಹಣನು “ವಿಕ್ರಮಾಂಕದೇವಚರಿತಂ” ಕೃತಿಯನ್ನು ರಚಿಸಿದನು.
· ಸತ್ಯಾಶ್ರಯನ ಆಸ್ಥಾನದಲ್ಲಿದ ರನ್ನನು ಅಜಿತನಾಥ ಪುರಾಣ ಮತ್ತು ಸಾಹಸಭೀಮ ವಿಜಯ (ಗದಾಯುಧ್ದ) ಗ್ರಂಥಗಳನ್ನು ರಚಿಸಿದನು. ಇವನಿಗೆ “ಕವಿಚಕ್ರವರ್ತಿ” ಎಂಬ ಬಿರುದಿತ್ತು.
· 3ನೇ ಸೋಮೇಶ್ವರನ ಅಭಿಲಾಷತೀರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ಕೃತಿಯು ಸಂಸ್ಕøತದ ಮೊದಲ ವಿಶ್ವಕೋಶವಾಗಿದೆ.
ದ್ವಾರಸಮುದ್ರದ ಹೊಯ್ಸಳರು :
· ಹೊಯ್ಸಳರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು. ದ್ವಾರಸಮುದ್ರ, ಶಶಕಪುರ, ಬೇಲೂರ ಇವರ ರಾಜಧಾನಿಗಳಾಗಿದ್ದವು. ಸಳ ಈ ಸಾಮ್ರಾಜ್ಯದ ಸ್ಥಾಪಕನಾಗಿದ್ದನು.
· ಹೊಯ್ಸಳ ಅರಸರಲ್ಲಿಯೇ ಅತ್ಯಂತ ಶ್ರೇಷ್ಠ ಅರಸನಾದ ವಿಷ್ಣುವರ್ಧನನು ಮಹಾಮಂಡಲೇಶ್ವರ, ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ, ಮಲೆಪೆರೊಳ್ಗಂಡ ತತ್ಪಾದ ಪದ್ಮೋಪ ಜೀವನ್ ಎಂಬ ಬಿರುದುಗಳನ್ನು ಹೊಂದಿದ್ದನು.
· ಹೊಯ್ಸಳರು ಹೊಯ್ಸಳ ಶೈಲಿ ಎಂಬ ಹೊಸಶೈಲಿಯನ್ನು ಬೆಳೆಸಿದರು. ಬೇಲೂರಿನ ಚನ್ನಕೇಶವ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ, ದೊಡ್ಡವನಹಳ್ಳಿಯ ಲಕ್ಷ್ಮಿ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯಗಳು ಪ್ರಸಿದ್ದವಾಗಿವೆ.
No comments:
Post a Comment