Thursday, April 30, 2020

* ಆಶ್ರಮ *

ಹಾಲುಣಿಸಿ ಹಾರೈಸಿ ತಾ ಬೆಳಸಿ 
ಮೊದಲ ತೊದಲು ನುಡಿಯ ಕಲಿಸಿ,
ಶೈಶವ ಗೆಲ್ಲಿಸಿದಳು ಮಾಹಾ ತಾಯಿ
ಕಂಡೆ  ಮೂಲಶ್ರಮದ  ಗೆಲುವು //

ಬಾಗಿ ನಡೆಯುವ ಭಕ್ತಿ ಕಲಿಸಿ
ಭವದರಿವ ಬೆಳಕ ಬಾಲ್ಯದಲಿ ಹರಸಿ
ಬದುಕು ಕಟ್ಟುವ ಗುರು ನೀ ತಿಳಿಸಿ
ಕಂಡೆ ಬ್ರಹ್ಮಚರ್ಯದ  ಗೆಲುವು //

ಹಮ್ಮು ಬಿಮ್ಮು ಬದಿಗೆ ಸರಿಸಿ
ಹೊಂದಾಣಿಕೆ ಮನೆಯಲಿ ಕಲಿಸಿ
ಮುನ್ನೆಡೆಯುವ ಪತ್ನಿಯ ಎನ್ನರಸಿ
ಕಂಡೆ ಎರಡಾಶ್ರಮದ ಗೆಲುವು //

ಭವ ಬಂಧನದ ಬಾಳ ಬಳಸಿ
ತೆರಳಿದೆನು ವನದ ಶಾಂತಿ ಅರಸಿ
ಗುಣವರಿತ ವನ ಮನ ಅರಳಿಸಿ
ಕಂಡೆ ಮೂರಾಶ್ರಮದ ಗೆಲುವು //

ಸರ್ವ ಸಂಗ ತನ್ನ ಅಂಗದಿ ತೊರೆದು
ಭಂಗ ತಾರದೆ ಸಂಗದೇಳಿಗೆಗೆ ದುಡಿದು
ಶಾಂತಿ ಸನ್ಯಾಸದ ವೈರಾಗ್ಯ ವುಂಡು
ಕಂಡೆ ನಾಲ್ಕನೇ ಆಶ್ರಮ ಗೆಲುವು//
               
                     ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...