Saturday, March 13, 2021

* ಎಳೆಯೋಣ ಬನ್ನಿ *

ಕನ್ನಡದ ದೇವಿ ಮುನ್ನಡೆಯುತಿಹಳು 
ಅನ್ಯರ ನುಡಿಯ ಭಿನ್ನತೆಯ ಮರೆತು
ಗಲ್ಲಿ ಗಲ್ಲಿಗಳಲ್ಲಿ ಕನ್ನಡದ ಕದರಿನ
ತೇರು ಎಳೆಯೊಣ ಬನ್ನಿ  //

ಕನ್ನಡದ ಕುವರರು ಸನ್ನಡತೆಯವರು
ಭಿನ್ನ ರಾಗದ ಕುನ್ನಿಗಳ ತಡೆದು 
ಸೊನ್ನಿಗೇಡಿಗಳ ತೊರೆದು, ಒಂದಾಗಿ
ತೇರು ಎಳೆಯೋಣ ಬನ್ನಿ//

ಉತ್ತರದ ಹುತ್ತಕ್ಕೆ ಹೆದರದವರು 
ಜೊತೆಯಾಗಿ ನಡೆವವರ ಪಡೆದು  
ಹತಭಾಗ್ಯರ ಹುರಿದು ಭಾರತಾಂಭೆಗೆ  
ಜೈಕಾರ ಹಾಕೋಣ ಬನ್ನಿ//

ಕನ್ನಡದ ನುಡಿ ಕನ್ನಡಿಯ ಗಂಟಲ್ಲ
ಚೆನ್ನುಡಿಯ ಕಲಿತು ಭಿನ್ನತೆಯ ಮರೆತು 
ಸಣ್ಣತನ ತುಳಿದು ಅನ್ನದ ಭಾಷೆಗೆ
ಬಿನ್ನಹ ಮಾಡೋಣ ಬನ್ನಿ //

ಅನ್ನಕ್ಕೆ ಬಂದವರು ಅರಸೊತ್ತಿಗೆ ತಂದಾರು
ಅರಿಯದ  ಮರುಳರಿಗೆ ಬರೆಯ ಎಳೆದು
ಅವನತಿಯ ಸೊಲ್ಲು ಕಳೆದು  ಸನ್ಮತಿಗೆ
ಜೈಕಾರ ಹಾಕೋಣ ಬನ್ನಿ//

ಕೆಲವಡಿ ಬಯಲಿನಲ್ಲಿ ಶ್ರೀರಂಗನ 
ಮಹಲಿನಲ್ಲಿ  ರಂಗು ರಂಗಿನ 
ಚಿತ್ತಾರ ಎಳೆದು ಸತ್ಯದ ತೇರಿಗೆ
ನಮಿಸೋಣ ಬನ್ನಿ  //


No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...