ಮುಂಗಾರು ಮಳೆ ಮುಗಿಲು ಸೀಳಿ
ತಂಗಾಳಿ ಬೀಸಿ ಹೊಂಗನಸು ತಂತು
ಸಂಗಾತಿ ಕನಸಿಗೆ ಹೊಸ ಜೀವಕಳೆ
ಬಂಗಾರ ಬದುಕಿಗೆ ಸಿಂಗಾರ ತಂತು//
ತಂಗಾಳಿ ಬೀಸಿ ಹೊಂಗನಸು ತಂತು
ಸಂಗಾತಿ ಕನಸಿಗೆ ಹೊಸ ಜೀವಕಳೆ
ಬಂಗಾರ ಬದುಕಿಗೆ ಸಿಂಗಾರ ತಂತು//
ಮಡುಗಟ್ಟಿದ ಕೊಳೆ ಸಿವುಡುಗಟ್ಟಿ
ಕೆರೆ ಕಾಲುವೆ ತುಂಬಿ ಜಲಪಾತ ದಾಟಿ
ಹರವಾಗಿ ಒಮ್ಮೊಮ್ಮೆ ನೊರೆಯಾಗಿ
ಬರವ ಸಂಹಾರ ಮಾಡಲು ಬಂತು//
ಬಾಯಿ ತೆರೆದ ಭುವಿಗೆ ಜೀವ ಕೊಟ್ಟು
ಬರುಡಾದ ನೆಲಕೆ ಹಸಿರು ಬಣ್ಣ ಇಟ್ಟು
ಹಾರಾಡುವ ಹಕ್ಕಿಗೆ ಚೈತನ್ಯ ಕೊಟ್ಟು
ಬೋರಾದ ಬಾನಿಗೆ ಚಿತ್ತಾರ ಬಿಡಿಸಿತು//
ಕನಸು ನೆಲದಲ್ಲಿ ಬಿತ್ತಿ ಕಷ್ಟದ ಕಳೆ ಕಿತ್ತಿ
ನನಸು ಮಾಡಲು ನಾವಿನ್ಯತೆ ಮೆತ್ತಿ
ಎಣಿಸು ಮೋಡದಲ್ಲಿ ಕಾಣುವುದು ಬುತ್ತಿ
ತಣಿಸಲು ರೈತನ ಬಾಗಿಲಗೆ ಬಂತು //
ಹದ ಮಾಡಿದ ಹೈದ ಎದೆಯುಬ್ಬಿಸಿದ
ಕೌದಿ ಹಾಸಿ ಕಾಲು ಚಾಚಿದವ ನಾಚಿದ
ಇದು ನಿತ್ಯ ದುಡಿದವನ ಸತ್ಯದ ಮಾತು
ಸದಾ ದುಡಿದವನ ವದನವೀಗರಳಿತು//
ಬಸನಗೌಡ ಗೌಡರ
No comments:
Post a Comment