ಮುಂಜಾನೆ ಮಂಜೇರಿ ಮುದುರಿ
ಕುಳಿತು ನಂಜಾಗಿದೆ ಮನವೆಲ್ಲ
ಸಂಜೆಗೆ ಬರಬಾರದಿತ್ತೆ ಮಳೆರಾಯ !
ಜಿಟಿ ಜಿಟಿ ನಿನ್ನಯ ನಾದ ವಟ ವಟ
ಮಡದಿಯ ಬಾಣ, ಶಟಗೊಂಡರೆ
ಸಿಗದು ಮುಂಜಾನೆ ಬಾನ ....
ರವಿಯನ್ನೆ ಮರೆಮಾಡಿ ತೋರುವೆ ನಿನ್ನ ಕಿರಣ
ನುಜ್ಜು ಗುಜ್ಜಾದ ಗಟಾರಗಳೆ ಎನ್ನ ಕಾಯುವ ಯಜಮಾನ ! ತಪ್ಪಿ ನಡೆದರೆ ಅಗುಬೇಕು ಶರಣು
ಸುರಪಾನ ಮಾಡಿ ಸಂದಿಗೊಂದಿ ತಿರುಗಿದ ಶರಣ
ಕುಳಿತು ನಂಜಾಗಿದೆ ಮನವೆಲ್ಲ
ಸಂಜೆಗೆ ಬರಬಾರದಿತ್ತೆ ಮಳೆರಾಯ !
ಜಿಟಿ ಜಿಟಿ ನಿನ್ನಯ ನಾದ ವಟ ವಟ
ಮಡದಿಯ ಬಾಣ, ಶಟಗೊಂಡರೆ
ಸಿಗದು ಮುಂಜಾನೆ ಬಾನ ....
ರವಿಯನ್ನೆ ಮರೆಮಾಡಿ ತೋರುವೆ ನಿನ್ನ ಕಿರಣ
ನುಜ್ಜು ಗುಜ್ಜಾದ ಗಟಾರಗಳೆ ಎನ್ನ ಕಾಯುವ ಯಜಮಾನ ! ತಪ್ಪಿ ನಡೆದರೆ ಅಗುಬೇಕು ಶರಣು
ಸುರಪಾನ ಮಾಡಿ ಸಂದಿಗೊಂದಿ ತಿರುಗಿದ ಶರಣ
ನಗದೆ ಇರಲಾರನೆ ನನ್ನ ಓಲಾಟ ಪಾತ್ರ ನೋಡಿ !
ಎಂದೋ ಮಡಿಚಿಟ್ಟ ಮುದ್ದಿನ ಛತ್ರಿ
ಎಂದೋ ಮಡಿಚಿಟ್ಟ ಮುದ್ದಿನ ಛತ್ರಿ
ಮುಟ್ಟಲು ಹೋದರೆ ಮುಣಿಸದಿರದೆ ಅರಳಲು ..
ಹದ ಬಂದಾಗ ಬರುವರೆಂದು.. ?
ನಿದ್ದೆಗೆ ಜಾರಿದ ಜಾಡ
ಸದ್ದು ಮಾಡಿದರೆ ಎದ್ದು ಎಲ್ಲಿಗೆ ಹೋಗಬೇಕು..
ಹದ್ದು ಮೀರಿ ಹೋಗಲು ನೀನೆ ಕಾರಣ.
ಪೈರುಗಳ ಜೊತೆ ವೈರಿಗಳಿಗೂ ಸಂಭ್ರಮ
ಕಳೆ ಕೀಳುವವರಿಗೂ ಆಗಬೇಕು ನಾಳೆ ನಾ ಶರಣು .
ಬಡಪಾಯಿ ರೈತ ಪಡಬಾರದ
ಸಂಕಟ ನೋಡು...!
ಗುಡಿಗುಂಡಾರಗಳಲಿ ಹುಡುಗರದೆ ಕಾಟ
ಆಡಲು ಜಾಗವಿಲ್ಲ ಮಾಡುವದಾದರು ಏನು ?
ಹಿಡಿ ಶಾಪ ಹಾಕಿ ಹೊಲದ ದಾರಿ ಹಿಡಿದೆ ,
ಕುಲಾಯಿ ಹೊದ್ದ ಗದ್ದೆಗೆ ಹೋದರೆ ..
ಸಾಲು ಬೀದಿಗೂ ಸರಸಲ್ಲಾಪ
ನೋಡುವುದೇನು ಮನೆ ದಾರಿ ಹಿಡಿದೆ .
ಹದ ಬಂದಾಗ ಬರುವರೆಂದು.. ?
ನಿದ್ದೆಗೆ ಜಾರಿದ ಜಾಡ
ಸದ್ದು ಮಾಡಿದರೆ ಎದ್ದು ಎಲ್ಲಿಗೆ ಹೋಗಬೇಕು..
ಹದ್ದು ಮೀರಿ ಹೋಗಲು ನೀನೆ ಕಾರಣ.
ಪೈರುಗಳ ಜೊತೆ ವೈರಿಗಳಿಗೂ ಸಂಭ್ರಮ
ಕಳೆ ಕೀಳುವವರಿಗೂ ಆಗಬೇಕು ನಾಳೆ ನಾ ಶರಣು .
ಬಡಪಾಯಿ ರೈತ ಪಡಬಾರದ
ಸಂಕಟ ನೋಡು...!
ಗುಡಿಗುಂಡಾರಗಳಲಿ ಹುಡುಗರದೆ ಕಾಟ
ಆಡಲು ಜಾಗವಿಲ್ಲ ಮಾಡುವದಾದರು ಏನು ?
ಹಿಡಿ ಶಾಪ ಹಾಕಿ ಹೊಲದ ದಾರಿ ಹಿಡಿದೆ ,
ಕುಲಾಯಿ ಹೊದ್ದ ಗದ್ದೆಗೆ ಹೋದರೆ ..
ಸಾಲು ಬೀದಿಗೂ ಸರಸಲ್ಲಾಪ
ನೋಡುವುದೇನು ಮನೆ ದಾರಿ ಹಿಡಿದೆ .
ಬಸನಗೌಡ ಗೌಡರ
No comments:
Post a Comment