Thursday, June 17, 2021

ಮುಂಜಾನೆ ಮಳೆ

ಮುಂಜಾನೆ ಮಂಜೇರಿ ಮುದುರಿ 
ಕುಳಿತು ನಂಜಾಗಿದೆ ಮನವೆಲ್ಲ 
ಸಂಜೆಗೆ ಬರಬಾರದಿತ್ತೆ ಮಳೆರಾಯ ! 
ಜಿಟಿ ಜಿಟಿ ನಿನ್ನಯ ನಾದ ವಟ ವಟ
ಮಡದಿಯ ಬಾಣ, ಶಟಗೊಂಡರೆ 
ಸಿಗದು ಮುಂಜಾನೆ ಬಾನ ....
ರವಿಯನ್ನೆ ಮರೆಮಾಡಿ ತೋರುವೆ ನಿನ್ನ ಕಿರಣ 
ನುಜ್ಜು ಗುಜ್ಜಾದ ಗಟಾರಗಳೆ ಎನ್ನ ಕಾಯುವ ಯಜಮಾನ ! ತಪ್ಪಿ ನಡೆದರೆ ಅಗುಬೇಕು ಶರಣು
ಸುರಪಾನ ಮಾಡಿ ಸಂದಿಗೊಂದಿ ತಿರುಗಿದ ಶರಣ 
ನಗದೆ ಇರಲಾರನೆ ನನ್ನ ಓಲಾಟ ಪಾತ್ರ ನೋಡಿ !
ಎಂದೋ ಮಡಿಚಿಟ್ಟ ಮುದ್ದಿನ ಛತ್ರಿ 
ಮುಟ್ಟಲು ಹೋದರೆ ಮುಣಿಸದಿರದೆ ಅರಳಲು ..
ಹದ ಬಂದಾಗ ಬರುವರೆಂದು.. ?
ನಿದ್ದೆಗೆ ಜಾರಿದ ಜಾಡ 
ಸದ್ದು ಮಾಡಿದರೆ ಎದ್ದು ಎಲ್ಲಿಗೆ ಹೋಗಬೇಕು.. 
ಹದ್ದು ಮೀರಿ ಹೋಗಲು ನೀನೆ ಕಾರಣ.
ಪೈರುಗಳ ಜೊತೆ ವೈರಿಗಳಿಗೂ ಸಂಭ್ರಮ 
ಕಳೆ ಕೀಳುವವರಿಗೂ ಆಗಬೇಕು ನಾಳೆ ನಾ ಶರಣು .
ಬಡಪಾಯಿ ರೈತ ಪಡಬಾರದ 
ಸಂಕಟ ನೋಡು...! 
ಗುಡಿಗುಂಡಾರಗಳಲಿ ಹುಡುಗರದೆ ಕಾಟ 
ಆಡಲು ಜಾಗವಿಲ್ಲ ಮಾಡುವದಾದರು ಏನು ? 
ಹಿಡಿ ಶಾಪ ಹಾಕಿ ಹೊಲದ ದಾರಿ ಹಿಡಿದೆ , 
ಕುಲಾಯಿ ಹೊದ್ದ ಗದ್ದೆಗೆ ಹೋದರೆ ..  
ಸಾಲು ಬೀದಿಗೂ ಸರಸಲ್ಲಾಪ 
ನೋಡುವುದೇನು ಮನೆ ದಾರಿ ಹಿಡಿದೆ .

          ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...